AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ತಿಂಗಳ ಬಳಿಕ ಮಹಿಳಾ ಆಯೋಗಕ್ಕೆ ಅಧ್ಯಕ್ಷರ ನೇಮಕ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ ಆರ್ಥಿಕವಾಗಿ ಮಹಿಳೆಯರಿಗೆ ಆನೆ ಬಲ ಬಂದಿದೆ. ಮಹಿಳೆಯರಿಗೆ ಶಕ್ತಿ ನೀಡುವ ಉದ್ದೇಶದಿಂದಲೇ ಸ್ತ್ರೀ ಶಕ್ತಿ, ಗೃಹಲಕ್ಷ್ಮಿ ಯತಂಹ ಮಹತ್ವದ ಯೋಜನೆ ನೀಡಿದೆ. ಆದರೆ ಅದ್ಯಾಕೋ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಅನ್ನೊ ಆರೋಪ ಶುರುವಾಗಿದೆ.

7 ತಿಂಗಳ ಬಳಿಕ ಮಹಿಳಾ ಆಯೋಗಕ್ಕೆ ಅಧ್ಯಕ್ಷರ ನೇಮಕ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ
ನಾಗಲಕ್ಷ್ಮಿ ಬಾಯಿ , ಮಾಜಿ ಅಧ್ಯಕ್ಷೆ ಮಹಿಳಾ ಆಯೋಗ
Follow us
Vinay Kashappanavar
| Updated By: ಆಯೇಷಾ ಬಾನು

Updated on:Mar 03, 2024 | 8:46 AM

ಬೆಂಗಳೂರು, ಮಾರ್ಚ್.03: ರಾಜ್ಯದಲ್ಲಿ ವಿವಿಧ ಸ್ವರೂಪದ ಮಹಿಳಾ ದೌರ್ಜ್ಯನ್ಯ ಪ್ರಕರಣಗಳು ಕಳೆದ 7 ತಿಂಗಳಿನಿಂದ ಹೆಚ್ಚುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗ್ತೀದ್ದಾರೆ. ಆದರೆ ರಾಜ್ಯದಲ್ಲಿ ಕಳೆದ ಏಳು ತಿಂಗಳಿನಿಂದ ಮಹಿಳಾ ಅಧ್ಯಕ್ಷರ ನೇಮಕಾತಿ ಮಾಡದ ಹಿನ್ನಲೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ ಶುರುವಾಗಿದೆ. ಕಳೆದ ಏಳು ತಿಂಗಳಿನಿಂದ ಆಯೋಗಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ನಿನ್ನೆಯಷ್ಟೇ ಅಧ್ಯಕ್ಷರನ್ನಾಗಿ ನಾಗಲಕ್ಷ್ಮಿ ಚೌಧರಿಯವರನ್ನ ಆಯ್ಕೆ ಮಾಡಿದೆ. ಆದ್ರೆ ಕಳೆದ ಏಳು ತಿಂಗಳಿನಿಂದ ಕೇಸ್ ಏರಿಕೆಯಿಂದಾಗಿ ದೌರ್ಜನ್ಯಕ್ಕೆ ಹಲ್ಲೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಪರದಾಡುವಂತಾಗಿದೆ.

ಈ ಹಿಂದೆ ಇದ್ದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವಧಿ ಮುಕ್ತಾಯದ ಬಳಿಕ ಸರ್ಕಾರ ಬರೊಬ್ಬರಿ ಏಳು ತಿಂಗಳು ಕಾಲ ಯಾರನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಮಾಡಿರಲ್ಲಿಲ್ಲ. ಇದರಿಂದ ಪ್ರತಿ ನಿತ್ಯ ರಾಜ್ಯದಲ್ಲಿ ದಾಖಲಾಗುವ ದೌರ್ಜನ್ಯ, ಬಾಲ್ಯವಿವಾಹ, ಮಹಿಳೆಯರ ಮೇಲಿನ ಹತ್ಯೆ, ವರದಕ್ಷಣೆ ಕಿರುಕುಳ, ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಪ್ರಕರಣಗಳು, ಕರ್ತವ್ಯದ ಜಾಗದಲ್ಲಿ ಕಿರುಕುಳ ಪ್ರಕರಣಗಳು ಜಾಸ್ತಿಯಾಗಿವೆ. ಕಳೆದ ಆರು ತಿಂಗಳಿನಿಂದ ಮಹಿಳಾ ಆಯೋಗಕ್ಕೆ ಸಾಲು ಸಾಲು ದೂರುಗಳು ಈ ಬಗ್ಗೆ ಕೇಳಿ ಬರ್ತಿವೆ. ಆದರೆ ಆಯೋಗಕ್ಕೆ ಅಧ್ಯಕ್ಷರು ಇಲ್ಲದೆ ಇರುವುದರಿಂದ ಕೇಸ್ ಪೆಡ್ಡಿಂಗ ಉಳಿದುಕೊಂಡಿವೆ. ಹೀಗಾಗಿ ದೌರ್ಜನ್ಯ ಹಲ್ಲೆಗೆ ಒಳಗಾದ ಮಹಿಳೆಯರು ಪರದಾಡುವಂತಾಗಿದೆ.

ಕಳೆದ 7 ತಿಂಗಳಿಂದ ಮಹಿಳಾ ಆಯೋಗಕ್ಕೆ ಬಂದ ಒಟ್ಟು ದೂರುಗಳು -1749. 1749 ಪ್ರಕರಣಗಳಲ್ಲಿ 1449 ಪ್ರಕರಣ ಮುಕ್ತಾಯ. 291 ಪ್ರಕರಣಗಳು ಪೆಡ್ಡಿಂಗ್. ಪ್ರತಿ ನಿತ್ಯ 10ಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗುತ್ತಿದೆ. ಕಳೆದ 6 ತಿಂಗಳಿನಿಂದ 100ಕ್ಕು ಹೆಚ್ಚು ಪ್ರಕರಣಗಳು ಅಧ್ಯಕ್ಷರಿಲ್ಲದೆ ಪೆಡ್ಡಿಂಗ್. ಕೌಟುಂಬಿಕ ದೌರ್ಜನ್ಯ – 350, ರಕ್ಷಣೆ -481, ಮಹಿಳೆಯರ ಮೇಲಿನ ಹತ್ಯೆ -97, ಸೈಬರ್ ಕ್ರೈಂ ಇತರೆ -580, ವರದಕ್ಷಣೆ ಕಿರುಕುಳ -97, ಕೌಟುಂಬಿಕ ಕಲಹ -23.

ಇದನ್ನೂ ಓದಿ: ಕಾಫಿನಾಡಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶ; ಖಾಕಿ ಹೈ ಅಲರ್ಟ್, ಹಲವೆಡೆ ಸಂಚಾರ ಬಂದ್

ಇನ್ನು ನಿತ್ಯ ಮಹಿಳಾ ಮಣಿಗಳು ಆಯೋಗದ ಕಚೇರಿಗೆ ಬಂದರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೋರ್ಟ್ ಕೇಸ್ ಮೊರೆ ಹೋಗುತ್ತಿದ್ದು ಅನ್ಯಾಯಕ್ಕೊಳಗಾದ ಮಹಿಳೆಯರು ಪರದಾಡುವಂತಾಗಿತ್ತು. ಈಗ ಸರ್ಕಾರ ಆಯೋಗಕ್ಕೆ ನಾಗಲಕ್ಷ್ಮಿ ಚೌಧರಿ ಅನ್ನೊವರನ್ನ ಆಯ್ಕೆ ಮಾಡಿದೆ. ಆದ್ರೆ ಇವರು ಈ ಸ್ಥಾನಕ್ಕೆ ಅಹರ್ತೆ ಪಡೆದಿಲ್ಲ. ಕಾನೂನಿನ ಜ್ಞಾನ ಇಲ್ಲದವರನ್ನ ಸರ್ಕಾರ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಬಗ್ಗೆಯೂ ಆರೋಪ ಕೇಳಿ ಬರ್ತಿದೆ.

ಒಟ್ನಲ್ಲಿ ಮಹಿಳಾ ಆಯೋಗಕ್ಕೆ ಸರ್ಕಾರ ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡಿದೆ. ಆದ್ರೆ ಕಳೆದ ಏಳು ತಿಂಗಳಿನಿಂದ ಅಧ್ಯಕ್ಷರಿಲ್ಲದೇ ಇರುವುದರಿಂದ ಕೆಲವು ಗಂಭೀರ ಪ್ರಕರಣದ ನಿರ್ಣಯ ಹಾಗೂ ಮೇಲ್ವಚಾರಣೆ ಕಷ್ಟ ಎದುರಾಗಿದೆ. ಈಗ ಹೊಸ ಅಧ್ಯಕ್ಷರು ಸೋಮವಾರ ಅಧಿಕಾರ ಪಡೆಯುತ್ತಿದ್ದು ಯಾವ ರೀತಿ ಸಮಸ್ಯೆ ಸರಿಪಡಿಸುತ್ತಾರೆ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:42 am, Sun, 3 March 24

ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ