ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಆಸ್ಪತ್ರೆಗಳಲ್ಲಿಯೂ ನೀರಿಗೆ ಬರ

| Updated By: ಆಯೇಷಾ ಬಾನು

Updated on: Mar 10, 2024 | 6:59 AM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲೆಡೆ ಈಗ ನೀರಿಗೆ ಹಾಹಾಕಾರ ಶುರುವಾಗಿದೆ. ಹನಿ ಹನಿ ನೀರಿಗೂ ಜನರ ಪರದಾಟ ನಿಂತಿಲ್ಲ. ಈಗ ಕುಡಿಯುವ ನೀರಿನ ಸಮಸ್ಯೆ ಬೆಂಗಳೂರಿನ ಬಾಡಿಗೆ ನಿವಾಸಿಗಳ ನಿದ್ದೆ ಗೆಡಸಿದೆ. ಆದ್ರೆ ಈ ನೀರಿನ ಬಿಸಿ ಈಗ ಸಿಟಿಯ ಆಸ್ಪತ್ರೆಗಳಿಗೆ ತಟ್ಟಿದ್ದು ಪರದಾಟಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಆಸ್ಪತ್ರೆಗಳಲ್ಲಿಯೂ ನೀರಿಗೆ ಬರ
ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಆಸ್ಪತ್ರೆಗಳಲ್ಲಿಯೂ ನೀರಿಗೆ ಬರ
Follow us on

ಬೆಂಗಳೂರು, ಮಾರ್ಚ್​.10: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ (Drinking Water Crisis) ಶುರುವಾಗಿದೆ. ಎಲ್ಲೆಡೆ ನೀರಿನ ಬರೆಯ ಎಫೆಕ್ಟ್ ತಟ್ಟಿದೆ. ನೀರಿಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ. ಕಾವೇರಿ ನೀರು ಪೂರೈಕೆಯ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯು ಬೆಂಗಳೂರಿನ (Bengaluru) ಕೆಲವು ಭಾಗಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ. ಹನಿ ಹನಿ ಕುಡಿಯುವ ನೀರಿಗೂ ಜನರು ಪರದಾಟ ಶುರು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾವೇರಿ ನೀರು ಪೂರೈಕೆ ಸಮಸ್ಯೆ ಎದುರಾಗಿದ್ದು ಜನರು ಪರದಾಡುವಂತಾಗಿದೆ. ಹೆಚ್ಚುವರಿ ನೀರಿಗಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ. ಆದರೆ ಸದ್ಯ ಇದರ ಎಫೆಕ್ಟ್ ಈಗ ಬೆಂಗಳೂರಿನ ರೋಗಿಗಳಿಗೆ ಕೂಡಾ ತಟ್ಟಿದೆ. ಹೌದು ಸಿಲಿಕಾನ್ ಸಿಟಿಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿಯೂ ನೀರಿನ ಬರ ಶುರವಾಗಿದ್ದು ಪರದಾಟಕ್ಕೆ ಕಾರಣವಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ದೊಡ್ಡ ಸಂಕಷ್ಟ ತಂದಿಟ್ಟಿದೆ. ನಗರದ ಆಸ್ಪತ್ರೆಗಳಿಗೂ ವಾಟರ್ ಸಂಕಷ್ಟ ಶುರುವಾಗಿದೆ. ಆಸ್ಪತ್ರೆಗಳಲ್ಲಿ ಬೇಡಿಕೆಯಷ್ಟು ನೀರು ಸಿಗುತ್ತಿಲ್ಲ. ಒಂದು ಬೆಡ್ ಗೆ ಕನಿಷ್ಠ 40 ಲೀಟರ್ ನೀರು ಬೇಕು ಜೊತೆಗೆ ಕ್ಲಿನಿಂಗ್​ ಎಲ್ಲದಕ್ಕೂ ನೀರು ಬೇಕು. ಆದ್ರೆ ಸದ್ಯ ಬೆಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಈಗಾಗಲೇ ಬೇಸಿಗೆ ಹಿನ್ನಲೆ ಆಸ್ಪತ್ರೆಗಳಲ್ಲಿ ಖಾಯಿಲೆಗಳು ಹೆಚ್ಚಾಗಿದೆ. ಸಾಕಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೀರಿನ ಬೇಡಿಕೆಯೂ ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ: ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹೇಳಿದ್ದೇನು?

ಮೊದಲೆಲ್ಲ ಟ್ಯಾಂಕರ್ ನೀರು ಆಡರ್ ಮಾಡಿದ ತಕ್ಷಣ ನೀರು ಸಿಗುತಿತ್ತು. ಆದ್ರೆ ಈಗ ನೀರು ಬುಕ್ ಮಾಡಿ ಎರಡು ಮೂರು ದಿನಗಳ ಬಳಿಕ ನೀರು ಸಿಗುತ್ತಿದೆ. ಅವಶ್ಯಕತೆಯಷ್ಟು ನೀರು ಸಿಗುತ್ತಿಲ್ಲ. ಜೊತೆಗೆ ನೀರಿನ ಟ್ಯಾಂಕರ್ ದರವು ದುಪ್ಪಟಾಗಿದೆ. ಇದರಿಂದ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಆಸ್ಪತ್ರೆಗಳಿಗೆ ಕುಡಿಯುವ ನೀರಿಗೆ ಸಮರ್ಪಕ ದರ ನಿಗಧಿ ಮಾಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ನೀರಿನ ಸೌಲಭ್ಯ ನೀಡುವಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಮಾಡಿದೆ.

ಒಟ್ನಲ್ಲಿ ಬೇಸಿಗೆ ಆರಂಭ ಕಾಲದಲ್ಲಿ ಈ ಸ್ಥಿತಿ ಎದುರಾಗಿದ್ದು ನೀರಿಗಾಗಿ ಆಸ್ಪತ್ರೆಗಳು ಪರದಾಡುವಂತಾಗಿದೆ. ಆಸ್ಪತ್ರೆಗಳಿಗೆ ನೀರಿನ ಸಂಕಷ್ಟ ಎದುರಾದ್ರೆ ರೋಗಿಗಳ ಪರದಾಟ ಫಿಕ್ಸ್ ಎನ್ನಲಾಗಿದೆ. ಹೀಗಾಗಿ ಸರ್ಕಾರ ಕೊಂಚ ಇತ್ತ ಗಮನ ಹರಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ