ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.
ಪರೀಕ್ಷೆ ಮೌಲ್ಯಮಾಪನಕ್ಕೂ AI ತಂತ್ರಜ್ಞಾನ: ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕೆ ಕರೆಕ್ಷನ್!
ಇತ್ತೀಚಿನ ದಿನಗಳಲ್ಲಿ ಎಲ್ಲಡೆ ಸಕಲ ಕ್ಷೇತ್ರಗಳಲ್ಲಿಯೂ AI ಟೆಕ್ನಾಲಜಿ ಸದ್ದು ಮಾಡುತ್ತಿದ್ದು, ಕೃತಕ ಬುದ್ಧಿಮತ್ತಯ ಬಳಕೆ ಈಗ ಎಲ್ಲೆಲ್ಲೂ ಆವರಿಸಿದೆ. ಶಾಲೆಗಳ ಹಾಜರಾತಿಗೆ, ರೋಗ ಪತ್ತೆಗೆ, ಪರೀಕ್ಷೆಯಲ್ಲಿ ನಕಲು ಪತ್ತೆ ಹಚ್ಚಲು, ಟ್ರಾಫಿಕ್ ನಿಯಂತ್ರಣಕ್ಕೆ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಇದೀಗ ಶಿಕ್ಷಣ ಕ್ಷೇತ್ರದ ಮಕ್ಕಳ ಉತ್ತರ ಪತ್ರಿಕಗಳ ಮೌಲ್ಯಮಾಪನಕ್ಕೂ AI ಲಗ್ಗೆ ಇಟ್ಟಿದ್ದು, ಒಂದೇ ಬಾರಿಗೆ ಬರೋಬ್ಬರಿ 15 ಲಕ್ಷ ಉತ್ತರ ಪತ್ರಿಕೆಗಳನ್ನ ಕರೆಕ್ಷನ್ ಮಾಡುತ್ತದೆ.
- Vinay Kashappanavar
- Updated on: Jul 5, 2026
- 8:16 pm
SSLC ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್: ಶೈಕ್ಷಣಿಕ ವರ್ಷದ ಆರಂಭದಲ್ಲೇ ಗೊಂದಲ ತಪ್ಪಿಸಲು ಸಿದ್ಧತೆ
SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ಶಿಕ್ಷಣ ಇಲಾಖೆ ಮತ್ತೊಮ್ಮೆ ಮುಂದಾಗಿದೆ. ಕಳೆದ ವರ್ಷ ಪರೀಕ್ಷೆ ನಡೆಯುತ್ತಿದ್ದಾಗಲೇ ಈ ಆದೇಶ ಹೊರಡಿಸಿ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ಎದುರಿಸಿತ್ತು. ಹೈಕೋರ್ಟ್ ಕೂಡ ಹಿಂದಿ ವಿಷಯಕ್ಕೆ ಗ್ರೇಡ್ ಬೇಡ, ಅಂಕ ನೀಡುವಂತೆ ಸೂಚಿಸಿತ್ತು. ಈಗ ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿಯಮ ಜಾರಿಗೆ ತರುವ ಸಿದ್ಧತೆ ಇಲಾಖೆ ನಡೆಸಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ.
- Vinay Kashappanavar
- Updated on: Jul 3, 2026
- 9:18 pm
ಕರೆಂಟ್, ನೀರು ಆಯ್ತು ಈಗ ಹಾಸ್ಪಿಟಲ್ ಬಿಲ್ ಸರದಿ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರವೂ ದುಬಾರಿ
ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿದ ರಾಜ್ಯ ಸರ್ಕಾರದ ನಿರ್ಧಾರದಿಂದ ಖಾಸಗಿ ಆಸ್ಪತ್ರೆಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಿದೆ. ನರ್ಸ್ಗಳು, ಸಿಬ್ಬಂದಿಯ ವೇತನ ಏರಿಕೆಯಿಂದಾಗಿ ಆರ್ಥಿಕ ಹೊರೆ ತಗುಲಿದೆ. ಈಗಾಗಲೇ ವಿದ್ಯುತ್, ನೀರಿನ ದರ ಹೆಚ್ಚಿರುವ ಹಿನ್ನೆಲೆಯಲ್ಲಿ, ಸರ್ಕಾರ ಕನಿಷ್ಠ ವೇತನ ಆದೇಶವನ್ನು ಮರುಪರಿಶೀಲಿಸದಿದ್ದರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿಕಿತ್ಸಾ ದರ ಹೆಚ್ಚಳ ಅನಿವಾರ್ಯ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಒತ್ತಾಯಿಸಿದೆ.
- Vinay Kashappanavar
- Updated on: Jul 1, 2026
- 10:36 pm
ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕೂರೋ ಬೆಂಗಳೂರಿನ ಪುರುಷರ ಲೈಫ್ ಡೇಂಜರ್: ಮಹಿಳೆಯರಿಗಿಂತ ಗಂಡಸರಿಗೆ ಬಿಪಿ, ಶುಗರ್ ಬರೋ ಚಾನ್ಸ್ ಜಾಸ್ತಿ
ಬೆಂಗಳೂರಿನ ಪುರುಷರಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಹೆಚ್ಚುತ್ತಿದ್ದು, ಎನ್ಎಫ್ಎಚ್ಎಸ್ ವರದಿಯಿಂದ ಸಾಬೀತಾಗಿದೆ. ಕಚೇರಿ ಒತ್ತಡ, ಟ್ರಾಫಿಕ್, ವ್ಯಾಯಾಮದ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಮುಖ್ಯ ಕಾರಣಗಳು. ಹೃದಯಾಘಾತ, ಕಿಡ್ನಿ ವೈಫಲ್ಯ ತಪ್ಪಿಸಲು ತಕ್ಷಣ ಜೀವನಶೈಲಿ ಬದಲಾವಣೆ ಅಗತ್ಯ. ನಿಯಮಿತ ವಾಕ್, ಆರೋಗ್ಯಕರ ಆಹಾರ, ಧ್ಯಾನ, ನಿದ್ದೆ ಮತ್ತು ವಾರ್ಷಿಕ ಆರೋಗ್ಯ ತಪಾಸಣೆ ಈ ಸಮಸ್ಯೆಗಳಿಂದ ದೂರವಿರಲು ಸಹಕಾರಿ.
- Vinay Kashappanavar
- Updated on: Jun 30, 2026
- 10:13 pm
ಪರೀಕ್ಷೆ ಮುಗಿದ 5 ನಿಮಿಷದಲ್ಲೇ 60 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದ VTU
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 6ನೇ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷದೊಳಗೆ 60,856 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಈ ಹಿಂದೆ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿದ್ದ VTU ಇದೀಗ ಡಿಜಿಟಲ್ ಮೌಲ್ಯಮಾಪನ, ತಂತ್ರಜ್ಞಾನದಿಂದ ಕೇವಲ ಐದು ನಿಮಿಷದಲ್ಲೇ ರಿಸಲ್ಟ್ ನೀಡಿ ದಾಖಲೆ ಸೃಷ್ಟಿಸಿದೆ.
- Vinay Kashappanavar
- Updated on: Jun 30, 2026
- 9:56 pm
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ: ಬಟ್ಟೆಗಿಂತ ಹೊಲಿಗೆ ಕೂಲಿಯೇ ದುಪ್ಪಟ್ಟು!
ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡುವ ಶಿಕ್ಷಣ ಇಲಾಖೆಯ ನಡೆ ಪೋಷಕರ ಕಂಗಾಲಾಗಲು ಕಾರಣವಾಗಿದೆ. ಸರ್ಕಾರ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡಿದ್ದು, ಬೆಂಗಳೂರಿನಲ್ಲಿ ಹೊಲಿಗೆ ವೆಚ್ಚವೇ (Tailoring Charges) ಒಂದು ಜೊತೆಗೆ 1,500 ರೂ.ವರೆಗೆ ತಲುಪಿದೆ.
- Vinay Kashappanavar
- Updated on: Jun 30, 2026
- 8:57 am
ಸರ್ಕಾರಿ ಆಸ್ಪತ್ರೆಯ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಇನ್ಮುಂದೆ ಸಿಬ್ಬಂದಿ ಹಾಜರತಿಗೆ ವೇತನ ಲಿಂಕ್!
ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಂದ್ರೆ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ. ಯಾವಾಗ ಆಸ್ಪತ್ರೆಗೆ ಬರುತ್ತಾರೋ ಹೋಗುತ್ತಾರೋ ಎನ್ನುವುದೇ ಗೊತ್ತಾಗಲ್ಲ. ಇದರಿಂದ ಸರಿಯಾದ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಅದೆಷ್ಟೋ ರೋಗಿಳು ಸಾವನ್ನಪ್ಪಿದ್ದುಂಟು. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ದೂರುಗಳು ಕೇಳುರುತ್ತಿವೆ. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
- Vinay Kashappanavar
- Updated on: Jun 29, 2026
- 10:40 pm
ಆಂಬ್ಯುಲೆನ್ಸ್ ಸೇವೆಗೆ ಚುರುಕು, ಬೆಂಗಳೂರಿನ ಈ ಟ್ರಾಫಿಕ್ನಲ್ಲೂ 13 ನಿಮಿಷಕ್ಕೆ ಸೇವೆ ಕೊಡುವ ಗುರಿ..!
ಹೊಸದಾಗಿ ಆರೋಗ್ಯ ಸಚಿವರಾಗಿರುವ ಯುಟಿ ಖಾದರ್ ಅವರು ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.. ಟ್ರಾಫಿಕ್ ಸಿಟಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಐಟಿ ಸಿಟಿಯಲ್ಲಿ ಆಂಬ್ಯುಲೆನ್ಸ್ ಸೇವೆಯನ್ನ 13 ನಿಮಿಷಕ್ಕೆ ತರುವ ಆಲೋಚನೆಯಲ್ಲಿದ್ದಾರೆ. ಆಲೋಚನೆ ಏನೋ ಸರಿ ಇದೆ, ಆದ್ರೆ ಬೆಂಗಳೂರು ಅಂತಹ ಟ್ರಾಫಿಕ್ ನಗರದಲ್ಲಿ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ. ಸಾಧ್ಯಾಸಾಧ್ಯತೆಗಳೇನು? ಇಲಾಖೆ ಬಳಿ ಇರುವ ಆಂಬ್ಯುಲೆನ್ಸ್ ಗಳೆಷ್ಟು ಎಂಬ ವಿಸ್ತೃತ ವರದಿ ಇಲ್ಲಿದೆ.
- Vinay Kashappanavar
- Updated on: Jun 27, 2026
- 10:43 pm
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶನಿವಾರ ಮುಂಜಾನೆ ತಡವಾಗಿ ಆರಂಭವಾಗಲಿವೆ ತರಗತಿಗಳು; ಏಕರೂಪದ ಶಾಲಾ ಅವಧಿ ಜಾರಿ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಶನಿವಾರದ ಅವಧಿಯನ್ನು ಏಕರೂಪಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಶನಿವಾರದ ತರಗತಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ನಡೆಯಲಿವೆ. ಈ ಹೊಸ ನಿಯಮದಿಂದ ಪೋಷಕರ ಗೊಂದಲ ನಿವಾರಣೆಯಾಗಲಿದ್ದು, ಶಿಕ್ಷಕರು ಆನ್ಲೈನ್ ಹಾಜರಾತಿ ದಾಖಲಿಸಲು ಸಹಕಾರಿಯಾಗಲಿದೆ.
- Vinay Kashappanavar
- Updated on: Jun 27, 2026
- 11:04 am
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ ಸ್ಪಷ್ಟನೆ: ಎಲ್ಲ ಆರೋಪಗಳಿಗೂ ಉತ್ತರಕೊಟ್ಟ NCERT
Textbook Controvery: ಪಠ್ಯಪುಸ್ತಕಗಳ ಕೇಸರೀಕರಣ ಮತ್ತು ಪ್ರಾದೇಶಿಕ ಕಡೆಗಣನೆ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಎನ್ಸಿಇಆರ್ಟಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಪಠ್ಯಪುಸ್ತಕಕ್ಕೆ ಇಡಲಾದ ಹೆಸರು, ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಆರೋಪ ವಿಚಾರ ಸೇರಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿ ತಿಳಿಸಿದೆ.
- Vinay Kashappanavar
- Updated on: Jun 25, 2026
- 2:56 pm
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ; ಸಚಿವ ಯುಟಿ ಖಾದರ್
ಜೂನ್ 28ರಂದು ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಹಕಾರ ನೀಡುವಂತೆ ಆರೋಗ್ಯ ಸಚಿವ ಖಾದರ್ ಮನವಿ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಪೋಲಿಯೋ ವೈರಸ್ ಇರುವ ಕಾರಣ, ಭಾರತದಲ್ಲಿ ಮತ್ತೆ ಪೋಲಿಯೋ ಹರಡದಂತೆ ಮಕ್ಕಳನ್ನು ಲಸಿಕೆ ಹಾಕಿಸುವುದು ಅತ್ಯಗತ್ಯ. ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳಿಗೆ ಲಸಿಕೆ ನೀಡಲು ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ.
- Vinay Kashappanavar
- Updated on: Jun 25, 2026
- 2:45 pm
NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
Textbook Controversy: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣದ ಆರೋಪಗಳ ಕುರಿತು ಮಧು ಬಂಗಾರಪ್ಪ ಧ್ವನಿ ಎತ್ತಿದ್ದಾರೆ. ಕೃಷ್ಣನ ಕುರಿತಾದ ಪಾಠ ಸೇರ್ಪಡೆ, ಸಸ್ಯಾಹಾರದ ಪ್ರಚಾರ, ಪ್ರಾದೇಶಿಕ ಆಯಾಮಗಳ ನಿರ್ಲಕ್ಷ್ಯ, ಮತ್ತು ಮಕ್ಕಳ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರುತ್ತಿರುವುದು ಬಿಜೆಪಿಯ ಕೆಟ್ಟ ಬುದ್ಧಿ ಎಂದು ಆರೋಪಿಸಿರುವ ಅವರು, ಈ ನಡೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
- Vinay Kashappanavar
- Updated on: Jun 25, 2026
- 2:19 pm