ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ 64 ಪಿಜಿಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ. ನೈರ್ಮಲ್ಯ ಕೊರತೆ, ಅವಧಿ ಮೀರಿದ ಮೊಸರು, ಅಕ್ಕಿಹಿಟ್ಟು, ಆಹಾರ ಬಣ್ಣ ಮತ್ತು ಕರಿಮೆಣಸು ವಶಪಡಿಸಿಕೊಳ್ಳಲಾಗಿದೆ. ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ಊಟದ ಮೇಜಿನ ಮೇಲೆ ತಿಗಣೆ ಔಷಧ ಪತ್ತೆಯಾಗಿ, ಊಟದ ಪ್ರದೇಶವನ್ನು ಮುಚ್ಚಲಾಗಿದೆ.
- Vinay Kashappanavar
- Updated on: Sep 5, 2026
- 9:10 am
ಮಗುವಿಗೆ ‘ಫಾರ್ಮುಲಾ ಫೀಡ್’ ಕೊಡುವ ಮುನ್ನ ಎಚ್ಚರ! ಬೆಂಗಳೂರಿನಲ್ಲಿ3.7 ಮೆಟ್ರಿಕ್ ಟನ್ ಮಿಸ್ಬ್ರ್ಯಾಂಡೆಡ್ ಶಿಶು ಆಹಾರ ವಶ
ಬೆಂಗಳೂರಿನ ಬ್ರಿಟಿಷ್ ಲೈಫ್ಸೈನ್ಸಸ್ ಸಂಸ್ಥೆಯಲ್ಲಿ ನಿಯಮ ಉಲ್ಲಂಘಿಸಿ ತಯಾರಿಸಲಾಗಿದ್ದ ಮಿಸ್ಬ್ರ್ಯಾಂಡೆಡ್ ಶಿಶು ಆಹಾರ ಉತ್ಪನ್ನಗಳನ್ನು FSSAI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳಪೆ ಫಾರ್ಮುಲಾ ಫೀಡ್ಗಳಿಂದ ನವಜಾತ ಶಿಶುಗಳಿಗೆ ವಾಂತಿ, ಭೇದಿ ಮತ್ತು ಸೋಂಕು ತಗುಲುವ ಅಪಾಯವಿದ್ದು, ವೈದ್ಯರ ಸೂಕ್ತ ಮಾರ್ಗದರ್ಶನವಿಲ್ಲದೆ ಇಂತಹ ಉತ್ಪನ್ನಗಳನ್ನು ಬಳಸದಂತೆ ಮಕ್ಕಳ ತಜ್ಞರು ಪೋಷಕರಿಗೆ ಜಾಗೃತಿ ಮೂಡಿಸಿದ್ದಾರೆ.
- Vinay Kashappanavar
- Updated on: Sep 4, 2026
- 9:56 am
ಬ್ಲಿಂಕಿಟ್ನಲ್ಲಿ ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು: ದೂರು ನೀಡಿದ ಬೆನ್ನಲ್ಲೇ ದಾಳಿ ಮಾಡಿದ ಆರೋಗ್ಯ ಇಲಾಖೆ
ಮಂಗಳೂರಿನ ಬ್ಲಿಂಕಿಟ್ನಿಂದ ಖರೀದಿಸಿದ್ದ ಮೊಟ್ಟೆಗಳಲ್ಲಿ ಹುಳು ಪತ್ತೆಯಾಗಿದ್ದು, ಗ್ರಾಹಕರು ಆರೋಗ್ಯ ಸಚಿವ ಯು.ಟಿ. ಖಾದರ್ಗೆ ದೂರು ನೀಡಿದ್ದಾರೆ. ದೂರಿನ ಬೆನ್ನಲ್ಲೇ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ಬ್ಲಿಂಕ್ ಇಟ್ ಮಳಿಗೆ ಮೇಲೆ ದಾಳಿ ನಡೆಸಿ, ಹಾಳಾದ ಮೊಟ್ಟೆ ಪ್ಯಾಕೆಟ್ಗಳನ್ನು ತಕ್ಷಣ ತೆರವುಗೊಳಿಸಲು ಸೂಚಿಸಿದ್ದಾರೆ.
- Vinay Kashappanavar
- Updated on: Sep 3, 2026
- 10:39 pm
ಫುಡ್ ಸ್ಯಾಂಪಲ್ ತಗೊಳ್ಳಿ, ಹೋಟೆಲ್ ಹೆಸರು ಹೇಳ್ಬೇಡಿ! FSSAI ದಾಳಿ ವೇಳೆ ಬೆಂಗಳೂರಿನ ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಬೆಂಗಳೂರಿನ ಸ್ಟಾರ್ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ದಾಳಿ ನಡೆಸಿದೆ. ನೈರ್ಮಲ್ಯ ಲೋಪಗಳು, ಕಳಪೆ ಆಹಾರ ಪದಾರ್ಥಗಳು ಬಯಲಾದ ಹಿನ್ನೆಲೆಯಲ್ಲಿ ಹೋಟೆಲ್ಗಳು ಮುಜುಗರಕ್ಕೊಳಗಾಗಿವೆ. ಹೆಸರು ಬಹಿರಂಗಪಡಿಸದಂತೆ ಹೋಟೆಲ್ ಸಂಘಟನೆ ಮನವಿ ಮಾಡಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಮುಂದುವರಿಸಲು ಅಧಿಕಾರಿಗಳು ದೃಢಸಂಕಲ್ಪ ಮಾಡಿದ್ದಾರೆ.
- Vinay Kashappanavar
- Updated on: Sep 2, 2026
- 2:12 pm
ಖಾಸಗಿ ಕೋಚಿಂಗ್ ಸೆಂಟರ್ಗಳ ಶುಲ್ಕ ಸುಲಿಗೆಗೆ ಲಗಾಮು: ಕಠಿಣ ಮಾರ್ಗಸೂಚಿ ತರಲು ರಾಜ್ಯ ಸರ್ಕಾರ ಸಜ್ಜು!
ರಾಜ್ಯದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ಗಳ ಶುಲ್ಕ ಸುಲಿಗೆ ಹಾಗೂ ಹಾವಳಿಗೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ತರಲು ಸಜ್ಜಾಗಿದೆ. ಕಾಲೇಜು ಪಾಠ ನಿರ್ಲಕ್ಷಿಸಿ ಟ್ಯೂಷನ್ ದಂಧೆಯಲ್ಲಿ ಭಾಗಿಯಾಗುವ ಸರ್ಕಾರಿ ಶಿಕ್ಷಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯು ಸಮಾಲೋಚನೆ ನಡೆಸಿ ಸರ್ಕಾರಕ್ಕೆ ಶೀಘ್ರವೇ ಅಂತಿಮ ವರದಿ ಸಲ್ಲಿಸಲಿದೆ.
- Vinay Kashappanavar
- Updated on: Sep 1, 2026
- 8:41 am
ಸಿಹಿ ತಿಂಡಿ, ಬೇಕರಿ ಘಟಕಗಳ ಮೇಲೆ ದಾಳಿ: ಕೋವಾ ಸೇರಿ 5.99 ಲಕ್ಷ ಮೌಲ್ಯದ ಆಹಾರ ಪದಾರ್ಥ ವಶಕ್ಕೆ
Karnataka FSSAI Raids: ಆಹಾರ ಸುರಕ್ಷತಾ ಇಲಾಖೆ ರಾಜ್ಯಾದ್ಯಂತ ಸಿಹಿ ತಿಂಡಿ, ಬೇಕರಿ ಘಟಕಗಳ ಮೇಲೆ ದಾಳಿ ನಡೆಸಿ FSSAI ನಿಯಮ ಉಲ್ಲಂಘನೆ, ಸ್ವಚ್ಛತೆ ಕೊರತೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5.99 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಮತ್ತು ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
- Vinay Kashappanavar
- Updated on: Aug 31, 2026
- 7:14 pm
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು: ಹಬ್ಬಕ್ಕೂ 14 ದಿನ ಮುಂಚಿತವಾಗಿಯೇ ತಪಾಸಣೆ ಶುರು
ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ (ಎಫ್ಡಿಎ) ಸಿಹಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದೆ. ಎಫ್ಎಸ್ಎಸ್ಎಐ ನಿಯಮಗಳ ಉಲ್ಲಂಘನೆ, ಕಳಪೆ ನೈರ್ಮಲ್ಯ ಮತ್ತು ಕೃತಕ ಬಣ್ಣಗಳ ಬಳಕೆ ಕುರಿತು ಗ್ರಾಹಕ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮೀರಿದ ಉತ್ಪನ್ನಗಳು ಮತ್ತು ಕೀಟಗಳ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ.
- Vinay Kashappanavar
- Updated on: Aug 31, 2026
- 4:00 pm
ಇಂಗು ಬ್ಯಾನ್ ಬೆನ್ನಲ್ಲೇ ಮಸಾಲೆ ಪೌಡರ್ಗಳಿಗೂ FDA ಶಾಕ್: ರಾಜ್ಯಾದ್ಯಂತ ಸ್ಯಾಂಪಲ್ ಪರೀಕ್ಷೆಗೆ ಸಿದ್ಧತೆ
ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಮಸಾಲೆ ಪದಾರ್ಥಗಳ ಕಲಬೆರಕೆ ವಿರುದ್ಧ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ. ಕಳಪೆ ಇಂಗು ಮಾರಾಟ ನಿಷೇಧದ ಬೆನ್ನಲ್ಲೇ, ಈಗ ಮಸಾಲೆ ಪುಡಿಗಳಲ್ಲಿ ಇಥಿಲೀನ್ ಆಕ್ಸೈಡ್ (ETO) ಮತ್ತು ಕೃತಕ ಬಣ್ಣಗಳ ಬಳಕೆಯ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಮಾದರಿಗಳನ್ನು ಸಂಗ್ರಹಿಸಿ NABL ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಸುರಕ್ಷತಾ ಮಾನದಂಡ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.
- Vinay Kashappanavar
- Updated on: Aug 31, 2026
- 11:09 am
ಹವಾಮಾನ ಬದಲಾವಣೆಯಿಂದ ಸಿಟಿ ಮಂದಿ ಹೈರಾಣು: ವೈರಲ್ ಫ್ಲೂ ಹೆಚ್ಚಳ; ಮಕ್ಕಳಲ್ಲಿ ಉಸಿರಾಟದ ಸಮಸ್ಯೆ
H1N1 Latest News: ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ, ಮಳೆ ಹಾಗೂ ಗಾಳಿಯಿಂದಾಗಿ H1N1 ಭೀತಿ ಹೆಚ್ಚಾಗಿದೆ. ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ವೈರಲ್ ಫ್ಲೂ, ಉಸಿರಾಟದ ಸೋಂಕುಗಳು ಹಾಗೂ ವಾಂತಿಭೇದಿ ಪ್ರಕರಣಗಳು ಏರಿಕೆ ಕಂಡಿವೆ. ಸೋಂಕಿನ ಕುರಿತಾಗಿ ಮುನ್ನೆಚ್ಚರಿಕೆ ಇರಲಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
- Vinay Kashappanavar
- Updated on: Aug 30, 2026
- 8:10 pm
ಪ್ರಧಾನಿ ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬೆಂಗಳೂರಿನಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದ್ದು, ಇದೀಗ ನಿಂಗಮ್ಮನಿಗೆ ಆತಂಕ ಶುರುವಾಗಿದೆ. ಜಿಬಿಎ ಅಧಿಕಾರಿಗಳು ಹೋಟೆಲ್ ತೆರವು ಮಾಡಿ ಎನ್ನುತ್ತಿದ್ದಾರೆ. ಇದರಿಂದ ಮೋದಿ ಮೆಚ್ಚಿದ ನಿಂಗಮ್ಮನಿಗೆ ಒತ್ತುವರಿ ತೆರವು ಭಯ ಶುರುವಾಗಿದೆ. ಯಾಕಂದ್ರೆ, ಕೇಂದ್ರದ ಯೋಜನೆಯ ಹಣ ಸಹಾಯದಿಂದ ಸ್ವಾವಲಂಬಿಯಾಗಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ಇದೀಗ ತೆರವು ಮಾಡಿದರೆ ಮುಂದಿನ ಜೀವನ ಹೇಗೆ ಎನ್ನುವ ಅಳಲು ನಿಂಗಮ್ಮನವರದ್ದಾಗಿದೆ.
- Vinay Kashappanavar
- Updated on: Aug 30, 2026
- 11:19 pm
ಸರ್ಕಾರಿ ಹಾಸ್ಟೆಲ್ಗಳಲ್ಲಿ ಆಹಾರ ಸುರಕ್ಷತೆಗೆ ಹೊಸ ಮಾರ್ಗಸೂಚಿ: ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ!
ರಾಜ್ಯದ ಸರ್ಕಾರಿ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಹಾಗೂ ಎಕ್ಸ್ಪೈರಿ ಆಹಾರ ಪೂರೈಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅಡುಗೆ ಮನೆಗಳಲ್ಲಿ ನೈರ್ಮಲ್ಯ ಕಾಪಾಡುವುದು, ಗರಿಷ್ಠ 3 ತಿಂಗಳ ರೇಷನ್ ಸಂಗ್ರಹಣೆ ಹಾಗೂ ಪೌಷ್ಟಿಕಾಂಶ ಭರಿತ ಆಹಾರ ನೀಡುವುದನ್ನು ಕಡ್ಡಾಯಗೊಳಿಸಿ ಶೀಘ್ರವೇ ಪ್ರತ್ಯೇಕ ಆಹಾರ ಸುರಕ್ಷತಾ ಮಾರ್ಗಸೂಚಿ ಹೊರಡಿಸಲಾಗುತ್ತಿದೆ. ನಿಯಮ ಮೀರಿದರೆ ಹಾಸ್ಟೆಲ್ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
- Vinay Kashappanavar
- Updated on: Aug 28, 2026
- 8:19 am
ಕಲಬೆರಕೆ ಆತಂಕ: ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕಲಬೆರಕೆ ಎಣ್ಣೆ ಮಾಫಿಯಾ ನಿಗ್ರಹಿಸಲು ಆಹಾರ ಸುರಕ್ಷತಾ ಇಲಾಖೆ ಸಮರ ಸಾರಿದೆ. ಲೂಸ್ ಅಡುಗೆ ಎಣ್ಣೆ ಮಾರಾಟಕ್ಕೆ ಬ್ರೇಕ್ ಹಾಕಲು ಸಚಿವ ಯು.ಟಿ. ಖಾದರ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅಧಿಕಾರಿಗಳ ಸಮಿತಿ ರಚನೆಗೆ ಸೂಚನೆ ನೀಡಲಾಗಿದ್ದು, ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಹೋಟೆಲ್, ಕ್ಲಬ್ಗಳ ಕಿಚನ್ ಶುಚಿತ್ವದ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ.
- Vinay Kashappanavar
- Updated on: Aug 27, 2026
- 5:40 pm