AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಾಲ್​ಗಳಾಗಲಿವೆ ಬಿಡಿಎ ಕಾಂಪ್ಲೆಕ್ಸ್​​ಗಳು! ಹರಿದು ಬರಲಿದೆ ಭರ್ಜರಿ ಆದಾಯ

BDA Complex; ಬಿಡಿಎ ಕಾಂಪ್ಲೆಕ್ಸ್​ಗಳನ್ನು ಮಾಲ್​ಗಳನ್ನಾಗಿ ಪರಿವರ್ತಿಸುವ ಬಗ್ಗೆ 2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ನಂತರ ಬಿಜೆಪಿ ಆಡಳಿತದ ಅವಧಿಯಲ್ಲಿ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಹಳೆಯ ಪ್ರಸ್ತಾವನೆಯನ್ನು ಮುಂದುವರಿಸಲು ಮುಮದಾಗಿದ್ದು, ಬಾಡಿಗೆದಾರರಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು: ಮಾಲ್​ಗಳಾಗಲಿವೆ ಬಿಡಿಎ ಕಾಂಪ್ಲೆಕ್ಸ್​​ಗಳು! ಹರಿದು ಬರಲಿದೆ ಭರ್ಜರಿ ಆದಾಯ
ಮಾಲ್​ಗಳಾಗಲಿವೆ ಬಿಡಿಎ ಕಾಂಪ್ಲೆಕ್ಸ್​​ಗಳು
Shivaraj
| Updated By: Ganapathi Sharma|

Updated on: May 08, 2024 | 12:50 PM

Share

ಬೆಂಗಳೂರು, ಮೇ 8: ಬಿಡಿಎ ಕಾಂಪ್ಲೆಕ್ಸ್​​​ಗಳು (BDA Complex) ಇನ್ನು ಮುಂದೆ ಮಾಲ್​​ಗಳಾಗಿ (Malls) ಪರಿವರ್ತನೆಯಾಗಲಿವೆ. ಬೆಂಗಳೂರಿನ 7 ಕಾಂಪ್ಲೆಕ್ಸ್​​​ಗಳನ್ನು ಮಾಲ್​ಗಳನ್ನಾಗಿ ಪರಿವರ್ತನೆ ಮಾಡಲು ಬಿಡಿಎ ಮುಂದಾಗಿದೆ. ಹೀಗಾಗಿ ಕಾಂಪ್ಲೆಕ್ಸ್​​​​ಗಳಲ್ಲಿರುವ ಬಾಡಿಗೆದಾರರನ್ನು ಈಗಾಗಲೇ ಬಿಡಿಎ ಅಧಿಕಾರಿಗಳು (BDA Officials) ಖಾಲಿ ಮಾಡಿಸುತ್ತಿದ್ದಾರೆ. 2023 ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿತ್ತು. ಇದೀಗ ಯೋಜನೆಯ ಅನುಷ್ಠಾನಕ್ಕೆ ಬಿಡಿಎ ಕಾರ್ಯಪ್ರವೃತ್ತವಾಗಿದೆ.

ಯಾವೆಲ್ಲ ಕಾಂಪ್ಲೆಕ್ಸ್​ಗಳು?

ಅರ್​​ಟಿ ನಗರ, ಇಂದಿರಾ ನಗರ, ಸದಾಶಿವನಗರ, ಎಚ್ಎಸ್ಆರ್ ಲೇಔಟ್, ವಿಜಯನಗರ, ಕೋರಮಂಗಲ ಹಾಗೂ ಆಸ್ಕಿನ್ ಟೌನ್ ಕಾಂಪ್ಲೆಕ್ಸ್​​ಗಳನ್ನ ಮಾಲ್ ಮಾಡಲು ಗುತ್ತಿಗೆ ನೀಡಲು ಬಿಡಿಎ ಮುಂದಾಗಿದೆ. ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) 60 ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದೆ.

ವಾರ್ಷಿಕ 40 ಕೋಟಿ ರೂ. ಆದಾಯ

ಕಾಂಪ್ಲೆಕ್ಸ್​​​​ಗಳನ್ನು ಮಾಲ್​ಗಳನ್ನಾಗಿ ಪರಿವರ್ತನೆ ಮಾಡುವ ಯೋಜನೆಯಿಂದ ಬಿಡಿಎಗೆ ವಾರ್ಷಿಕ 40 ಕೋಟಿ ರೂ. ಆದಾಯ ದೊರೆಯಬಹುದೆಂಬ ನಿರೀಕ್ಷೆ ಇದೆ. ಕೋರಮಂಗಲ, ಎಚ್‌ಎಸ್ಆರ್‌ ಲೇಔಟ್‌, ಆರ್‌ಟಿ ನಗರ, ಸದಾಶಿವನಗರಗಳಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂಎಫ್‌ಎಆರ್‌ ಡೆವಲಪರ್ಸ್​​​ಗೆ ಗುತ್ತಿಗೆ ನೀಡಲಾಗುತ್ತದೆ. ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್​​​​ ಅನ್ನು ಎಂಬೆಸ್ಸಿ ಗ್ರೂಪ್​​ನ ಮೇವರಿಕ್​​ಗೆ ಗುತ್ತಿಗೆ ನೀಡಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಈ ಪ್ರಸ್ತಾವನೆ ಬಂದಿತ್ತು. ಆದರೆ ನಂತರ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದರು. ಇದೀಗ ಹಳೆ ಟೆಂಡರನ್ನು ಫೈನಲ್ ಮಾಡಿ ಆದೇಶ ಹೊರಡಿಸಲಾಗಿದೆ.

ಬಾಡಿಗೆದಾರರಿಂದ ವಿರೋಧ

ಬಿಡಿಎ ನಿರ್ಧಾರಕ್ಕೆ ಈಗಾಗಲೇ ಕಾಂಪ್ಲೆಕ್ಸ್​​​ಗಳಲ್ಲಿ ಇರುವ ಬಾಡಿಗೆದಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಖಾಸಗೀಕರಣ ಮಾಡುವುದು ಬೇಡ. ಅದರ ಬದಲು ಬಿಡಿಎಯೇ ನಿರ್ಮಾಣ ಮಾಡುವುದು ಸೂಕ್ತ ಎಂದು ಬಾಡಿಗೆದಾರರು ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಲಿನ ಜೊತೆಗೆ ತರಕಾರಿ ಬೆಲೆಯೂ ಏರಿಕೆ: ಗ್ರಾಹಕರಿಗೆ ಹುಳಿಯಾದ ನಿಂಬೆಹಣ್ಣು ದರ

ಈ ಮಧ್ಯೆ, ಬಿಡಿಎ ಅಭಿಯಂತರ ಸದಸ್ಯ ಶಾಂತ ರಾಜಣ್ಣ ಪ್ರತಿಕ್ರಿಯಿಸಿದ್ದು, ಈ ಯೋಜನೆಯಿಂದ ಬಿಡಿಎಗೆ ಲಾಭವಿದೆ. ಹೀಗಾಗಿ ಆದಷ್ಟು ಬೇಗ ಮಾಲ್​​​ಗಳನ್ನಾಗಿ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್