Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Karaga: ಈ ಬಾರಿಯ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ಕ್ಕೆ

Dharmaraya Swamy Karaga: ಈ ಬಾರಿ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ರಂದು ನಡೆಯಲಿದೆ. ಇದೇ ಮಾರ್ಚ್​​ 29ರಿಂದ ಉತ್ಸವ ಆರಂಭವಾಗಿ, ಏಪ್ರಿಲ್​ 8ರವರೆಗೆ ನಡೆಯಲಿದೆ.

Bangalore Karaga: ಈ ಬಾರಿಯ ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ಏಪ್ರಿಲ್ 6 ಕ್ಕೆ
ಬೆಂಗಳೂರು ಕರಗ
Follow us
ವಿವೇಕ ಬಿರಾದಾರ
| Updated By: Digi Tech Desk

Updated on:Mar 21, 2023 | 12:10 PM

ಬೆಂಗಳೂರು: ಈ ಬಾರಿ ಬೆಂಗಳೂರು (Bengaluru) ಕರಗ ಶಕ್ತ್ಯೋತ್ಸವ (Karaga Shaktyotsava) ಚೈತ್ರ ಪೂರ್ಣಿಮೆ ಏಪ್ರಿಲ್ 6 ರಂದು ನಡೆಯಲಿದೆ. ಇದೇ ಮಾರ್ಚ್​​ 29ರಿಂದ ಉತ್ಸವ ಆರಂಭವಾಗಿ, ಏಪ್ರಿಲ್​ 8ರವರೆಗೆ ನಡೆಯಲಿದೆ. ಬರೋಬ್ಬರಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ (Dharmaraya Swamy Karaga) ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿಯು ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಪೂಜಾರಿ ಜ್ಞಾನೇಂದ್ರ ಅವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಕರಗ ರಾತ್ರಿ 12 ಗಂಟೆಗೆ ನಗರ ಪ್ರದಕ್ಷಿಣೆಗೆ ಹೊರಡಲಿದೆ.

ಮಾರ್ಚ್​. 29ರಂದು ಧ್ವಜಾರೋಹಣ ನಡೆಯುತ್ತದೆ. ನಂತರ ಏಪ್ರಿಲ್​ 8ರವರಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಏಪ್ರಿಲ್​​ 3 ರಂದು ಆರತಿ, ಏಪ್ರಿಲ್​​ 4 ರಂದು ಹಸಿಕರಗ, ಏಪ್ರಿಲ್​ 5 ರಂದು ಪೊಂಗಲ್​, ಮರುದಿನ 6 ರಂದು ಕರಗ ಉತ್ಸವ ನಡೆಯಲಿದೆ. ಇನ್ನು ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ಇರುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ಬೇಕಂದ್ರೆ ಲಿಂಕ್ಡ್​ಇನ್ ಪ್ರೊಫೈಲ್ ಕೊಡಬೇಕು, ಪೋಸ್ಟ್ ವೈರಲ್

ಕರಗದಲ್ಲಿ ಮಲ್ಲಿಗೆ ಹೂವು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಶಸ್ತ್ಯ ನೀಡಲಾಗುತ್ತದೆ. ಈ ದುಂಡು ಮಲ್ಲಿಗೆಯ ಒತ್ತಾದ ದಂಡೆಗಳನ್ನು ವೀರಕುಮಾರರಿಗೆ ಮುಡಿಯಿಂದ ಹಾಕಲಾಗುತ್ತದೆ. ಜತೆಗೆ ದೇವಾನುದೇವತೆಗಳಿಗೂ ಮಲ್ಲಿಗೆಯನ್ನು ಬಿಟ್ಟು ಬೇರೆ ಹೂವುಗಳನ್ನು ಕರಗದಲ್ಲಿ ಬಳಸುವುದಿಲ್ಲ. ಇನ್ನು, ಇದು ಶಾಕ್ತಪಂಥದ ಆರಾಧನಾ ಕ್ರಮವಾದ್ದರಿಂದ ಶಕ್ತಿ ಸ್ವರೂಪಿಣಿಯಾದ ಸ್ತ್ರೀಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಕರಗದ 11 ದಿನಗಳ ಕಾಲವೂ ಅರ್ಪಿಸಲಾಗುವ ಗಾವನ್ನ, ಪೊಂಗಲ್‌, ನೈವೇದ್ಯ ಇತ್ಯಾದಿಗಳನ್ನೆಲ್ಲವಹ್ನಿಕುಲ ಸಮುದಾಯದ ಹೆಣ್ಣುಮಕ್ಕಳೇ ಶ್ರದ್ಧೆಯಿಂದ ಸಿದ್ಧಪಡಿಸುತ್ತಾರೆ.

ಇಷ್ಟಾರ್ಥಗಳ ಸಿದ್ಧಿಗಾಗಿ ಅಥವಾ ಅಂದುಕೊಂಡದ್ದು ಜರುಗಿದರೆ ದೇವಾಲಯದ ಮುಂದೆ ಕರ್ಪೂರವನ್ನು ಹಚ್ಚುವುದು ಕರಗ ಉತ್ಸವದ ವಿಶೇಷ. ರಥೋತ್ಸವದ ವಿಶೇಷ. ಅದರಂತೆ ಕರಗದ ದಿನ ನೂರಾರು ಭಕ್ತರು ದೇವಾಲಯದ ಆವರಣ ಹಾಗೂ ರಸ್ತೆಯಲ್ಲಿ ಕರ್ಪೂರ ಹಚ್ಚಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Tue, 21 March 23

ವಿಜಯೇಂದ್ರ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದು ಡೋಂಗಿಗಳು: ಯತ್ನಾಳ್
ವಿಜಯೇಂದ್ರ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದು ಡೋಂಗಿಗಳು: ಯತ್ನಾಳ್
ತನ್ನ ಜೈಲಿಗೆ ಕಳಿಸಿದ್ದು ಶಿವಕುಮಾರ್ ಎಂದು ನೇರವಾಗಿ ಅರೋಪಿಸಿದ ಮುನಿರತ್ನ
ತನ್ನ ಜೈಲಿಗೆ ಕಳಿಸಿದ್ದು ಶಿವಕುಮಾರ್ ಎಂದು ನೇರವಾಗಿ ಅರೋಪಿಸಿದ ಮುನಿರತ್ನ
‘ಸಿನಿಮೋತ್ಸವಕ್ಕೆ ಆಹ್ವಾನ ಹಾಗಿರಲಿ, ಪಾಸ್ ಕೇಳಿದ್ದೆ ಅದೂ ಕೊಡಲಿಲ್ಲ’
‘ಸಿನಿಮೋತ್ಸವಕ್ಕೆ ಆಹ್ವಾನ ಹಾಗಿರಲಿ, ಪಾಸ್ ಕೇಳಿದ್ದೆ ಅದೂ ಕೊಡಲಿಲ್ಲ’
ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ
ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ
ಮಹದೇವಪ್ಪ ಅಸಹಾಯಕರಾಗಿದ್ದರೆ ಸದನದ ಗಮನಕ್ಕೆ ತರಲಿ: ಸುನೀಲ ಕುಮಾರ್
ಮಹದೇವಪ್ಪ ಅಸಹಾಯಕರಾಗಿದ್ದರೆ ಸದನದ ಗಮನಕ್ಕೆ ತರಲಿ: ಸುನೀಲ ಕುಮಾರ್
ರಾಜಣ್ಣ ನೀಡುವ ಸಮಜಾಯಿಷಿಗಳು ಮಾಧ್ಯಮದವರಿಗೆ ಮನವರಿಕೆಯಾಗಲ್ಲ!
ರಾಜಣ್ಣ ನೀಡುವ ಸಮಜಾಯಿಷಿಗಳು ಮಾಧ್ಯಮದವರಿಗೆ ಮನವರಿಕೆಯಾಗಲ್ಲ!
ಮದುವೆಯಾದ ಮೂರನೇ ದಿನವೇ ಶಶಾಂಕ್ ಹೃದಯಾಘಾತಕ್ಕೆ ಬಲಿ
ಮದುವೆಯಾದ ಮೂರನೇ ದಿನವೇ ಶಶಾಂಕ್ ಹೃದಯಾಘಾತಕ್ಕೆ ಬಲಿ
ಬೆಲ್ಲ ತಯಾರಾಗುವ ವಿಧಾನ ತಿಳಿಯಲು ಈ ವಿಡಿಯೋ ಸಹಕಾರಿಯಾಗಿದೆ
ಬೆಲ್ಲ ತಯಾರಾಗುವ ವಿಧಾನ ತಿಳಿಯಲು ಈ ವಿಡಿಯೋ ಸಹಕಾರಿಯಾಗಿದೆ
Karnataka Assembly Session LIVE: 3ನೇ ದಿನದ ವಿಧಾನಮಂಡಲ ಅಧಿವೇಶನ ಲೈವ್
Karnataka Assembly Session LIVE: 3ನೇ ದಿನದ ವಿಧಾನಮಂಡಲ ಅಧಿವೇಶನ ಲೈವ್
ದಕ್ಷಿಣ ಕರ್ನಾಟಕ ಪ್ರಸಿದ್ಧ ದೇವಾಲಯಗಳಲ್ಲಿ ಚಿಕ್ಕತಿರುಪತಿ ಗುಡಿಯೂ ಒಂದು
ದಕ್ಷಿಣ ಕರ್ನಾಟಕ ಪ್ರಸಿದ್ಧ ದೇವಾಲಯಗಳಲ್ಲಿ ಚಿಕ್ಕತಿರುಪತಿ ಗುಡಿಯೂ ಒಂದು