AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಓಲ್ಡ್​ ಏರ್​ಪೋರ್ಟ್​-ವೈಟ್​ಫೀಲ್ಡ್​ ಸಿಗ್ನಲ್ ಫ್ರೀ ಕಾರಿಡಾರ್ ಸಂಚಾರಕ್ಕೆ ಸಿದ್ಧ

ವೆಲ್ಲಾರ ಜಂಕ್ಷನ್​ನಿಂದ ವೈಟ್​ಫೀಲ್ಡ್​ನ ಹೋಪ್​ಫಾರ್ಮ್​ ಜಂಕ್ಷನ್​ ಅನ್ನು ಇದು ಸಂಪರ್ಕಿಸಲಿದೆ.

Bengaluru News: ಓಲ್ಡ್​ ಏರ್​ಪೋರ್ಟ್​-ವೈಟ್​ಫೀಲ್ಡ್​ ಸಿಗ್ನಲ್ ಫ್ರೀ ಕಾರಿಡಾರ್ ಸಂಚಾರಕ್ಕೆ ಸಿದ್ಧ
ಬೆಂಗಳೂರಿನ ಸುರಂಜನ್ ದಾಸ್ ಜಂಕ್ಷನ್ ಅಂಡರ್​ಪಾಸ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.Image Credit source: twitter.com/rk_misra
TV9 Web
| Edited By: |

Updated on:Jan 17, 2023 | 1:34 PM

Share

ಬೆಂಗಳೂರು: ಎಚ್​ಎಎಲ್​ ಓಲ್ಡ್​ ಏರ್​ಪೋರ್ಟ್​ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿಯ ಅಂಡರ್​ಪಾಸ್​ ಇದೇ ಮಾಸಾಂತ್ಯಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಬಿಬಿಎಂಪಿಯ (Bruhat Bengaluru Mahanagara Palike – BBMP) ರಸ್ತೆ ವಿಭಾಗವು (Road Infrastructure Department) ಕಳೆದ 7 ವರ್ಷಗಳಿಂದ ಹಲವು ಗಡುವುಗಳನ್ನು ಮೀರಿದ್ದು, ಸಾಧ್ಯವಾದಷ್ಟೂ ಬೇಗ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಗಾಗಿ ಮುಖ್ಯಮಂತ್ರಿ ನಗರೋತ್ಥಾನ ನಿಧಿಯ ₹ 19.5 ಕೋಟಿ ಬಳಸಲಾಗಿದೆ. ಈ ಯೋಜನೆಯಡಿ ಮೂರು ಸಿಗ್ನಲ್ ಮುಕ್ತ ಕಾರಿಡಾರ್​ಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ವೆಲ್ಲಾರ ಜಂಕ್ಷನ್​ನಿಂದ ವೈಟ್​ಫೀಲ್ಡ್​ನ ಹೋಪ್​ಫಾರ್ಮ್​ ಜಂಕ್ಷನ್​ ಅನ್ನು ಇದು ಸಂಪರ್ಕಿಸಲಿದೆ. ಎಚ್​ಎಎಲ್ ಅಂಡರ್​ಪಾಸ್​ ಹೊರತುಪಡಿಸಿದರೆ, ಈ ಮಾರ್ಗದಲ್ಲಿ ಇನ್ನೂ ಎರಡು (ಕುಂದಲಹಳ್ಳಿ ಮತ್ತು ವಿಂಡ್​ ಟನಲ್ ಜಂಕ್ಷನ್) ಅಂಡರ್​ಪಾಸ್​ಗಳಿವೆ.

ಮಾರತ್​ಹಳ್ಳಿ ಕಡೆಗೆ ತೆರಳುವ ವಾಹನ ಸವಾರರಿಗೆ ಸುರಂಜನ್ ದಾಸ್ ಜಂಕ್ಷನ್ ಒಂದು ವರದಾನವಾಗಿದೆ. ವೈಟ್​ಫೀಲ್ಡ್​ ಮತ್ತು ದೊಮ್ಮಲೂರು ಮಾರ್ಗದಿಂದ ಬರುವ ವಾಹನಗಳು ಸಿಗ್ನಲ್​ಗಾಗಿ ಅಥವಾ ಓಲ್ಡ್​ ಮದ್ರಾಸ್ ರಸ್ತೆಯ ಟ್ರಾಫಿಕ್​ನಿಂದ ಕಾಯಬೇಕಿಲ್ಲ. ಈ ವಾಹನಗಳು ಸುಲಭವಾಗಿ ಎಚ್​​ಎಎಲ್ ಮುಖ್ಯದ್ವಾರದ ಕಡೆಗೆ ತೆರಳಬಹುದಾಗಿದೆ. ಮಾರತ್ತಹಳ್ಳಿಯಿಂದ ಬರುವ ವಾಹನಗಳಿಗೆ ಸುರಂಜನ್ ದಾಸ್ ರಸ್ತೆಗೆ ತೆರಳಲು ಮುಕ್ತ ಬಲ ತಿರುವು (Free Right Turn) ಕಲ್ಪಿಸಲಾಗಿದೆ.

ಜನವರಿ 15ಕ್ಕೆ ಈ ಅಂಡರ್​ಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದರು. ಆದರೆ ಈ ಗಡುವಿನ ಒಳಗೂ ಸಹ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಮಗಾರಿ ತಡವಾಗಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ಸಮಸ್ಯೆ, ಭಾರೀ ಮಳೆಯಿಂದ ಉಂಟಾದ ಪ್ರವಾಹ, ಅಂಡರ್​​ಪಾಸ್​ಗಳಲ್ಲಿ ಕಟ್ಟಿಕೊಂಡ ಹೂಳು ಮುಖ್ಯ ಕಾರಣ ಎಂದು ಬಿಬಿಎಂಪಿ ಹೇಳಿತ್ತು.

ಬಿಬಿಎಂಪಿ ಇತ್ತೀಚೆಗಷ್ಟೇ ಕುಂದಲಹಳ್ಳಿ ಅಂಡರ್​ಪಾಸ್​ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಇದೂ ಸಹ ಸಿಗ್ನಲ್ ಫ್ರೀ ಕಾರಿಡಾರ್​ನ ಭಾಗವೇ ಆಗಿದೆ. ವಿಂಡ್ ಟನಲ್ ಜಂಕ್ಷನ್ ಅಂಡರ್​ಪಾಸ್​ ಸಹ ಇನ್ನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ಸಿಗ್ನಲ್ ಫ್ರೀ ಕಾರಿಡಾರ್ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗದಂತೆ ಆಗಲಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಂದಲಹಳ್ಳಿ ಅಂಡರ್​ಪಾಸ್​ ಅನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಸಂಚಾರಕ್ಕೆ ಮುಕ್ತವಾದ ಕೇವಲ 4 ತಿಂಗಳಲ್ಲಿ ಕಾಮಗಾರಿಯ ಲೋಪಗಳು ಬೆಳಕಿಗೆ ಬಂದಿದ್ದರಿಂದ ವಿವಾದವೂ ಉಂಟಾಗಿತ್ತು.

ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು

ಮತ್ತಷ್ಟು ಬೆಂಗಳೂರು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Tue, 17 January 23

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?