ಬೆಂಗಳೂರಿನ ಈ ಫ್ಲೈಓವರ್​ ಮೇಲೆ ಇಂದಿನಿಂದ ಸಂಚಾರ ಬಂದ್​!

| Updated By: ವಿವೇಕ ಬಿರಾದಾರ

Updated on: May 15, 2024 | 12:51 PM

 ಬೆಂಗಳೂರಿನ ಕೆ.ಆರ್.ಪುರಂ ಕಡೆಯಿಂದ ಬರುವ ಲೂಪ್​ ಹೆಬ್ಬಾಳ ಮೇಲುಸೇತುವೆನ ಮುಖ್ಯ ಟ್ರ್ಯಾಕ್​ಗೆ ಸೇರಿಸುವ ಎರಡು ಲಿಂಕ್​ ಸ್ಪ್ಯಾನ್​ಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ರ್ಯಾಂಪ್​ ಮತ್ತು ಮುಖ್ಯ ಟ್ರ್ಯಾಕ್​ಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಯಾವುದೇ ರೀತಿಯ ವಾಹನ ಸಂಚಾರ ನಿರ್ಭಂದಿಸಲಾಗಿದೆ.

ಬೆಂಗಳೂರಿನ ಈ ಫ್ಲೈಓವರ್​ ಮೇಲೆ ಇಂದಿನಿಂದ ಸಂಚಾರ ಬಂದ್​!
ಪರ್ಯಾಯ ಮಾರ್ಗ
Follow us on

ಬೆಂಗಳೂರು, ಮೇ 14: ಇಂದಿನಿಂದ ಹೆಬ್ಬಾಳ ಮೇಲುಸೇತುವೆಯ ಕೆ.ಆರ್.ಪುರಂ (KR Puram) ಅಪ್​​​-ರ್ಯಾಂಪ್ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗವಾರದಿಂದ ಹೆಬ್ಬಾಳ ಮೇಲುಸೇತುವೆ ಕಡೆಗೆ ಬರುವ ಎಲ್ಲ ವಾಹನಗಳಿಗೆ ಫ್ಲೈ ಓವರ್​ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ತಿಳಿಸಿದ್ದಾರೆ.

ಕೆ.ಆರ್. ಪುರಂ ಕಡೆಯಿಂದ ಬರುವ ಲೂಪ್​ ಹೆಬ್ಬಾಳ ಮೇಲುಸೇತುವೆನ ಮುಖ್ಯ ಟ್ರ್ಯಾಕ್​ಗೆ ಸೇರಿಸುವ ಎರಡು ಲಿಂಕ್​ ಸ್ಪ್ಯಾನ್​ಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ರ್ಯಾಂಪ್​ ಮತ್ತು ಮುಖ್ಯ ಟ್ರ್ಯಾಕ್​ಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಯಾವುದೇ ರೀತಿಯ ವಾಹನ ಸಂಚಾರ ನಿರ್ಭಂದಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ

ಕಾಮಗಾರಿ ಮುಕ್ತಾಯವಾಗುವವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಲಾಗಿದೆ.

ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:-

  1. ನಾಗವಾರ (ಔಟರ್ ರಿಂಗ್‌ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು ಹೆಬ್ಬಾಳ ಸರ್ಕಲ್‌ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೇಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು, ಸರ್ವಿಸ್‌ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್‌ನ ರ್ಯಾಂಪ್ ಮುಖೇನ ನಗರದ ಕಡೆಗೆ ಚಲಿಸಬಹುದು.
  2. ಕೆ.ಆರ್. ಪುರಂ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು
    ಐ.ಓ.ಸಿ.-ಮುಕುಂದ ಥಿಯೇಟರ್ ರಸ್ತೆ,
    ಲಿಂಗರಾಜಪುರ ಮೇಲ್ ಸೇತುವೆ ಮಾರ್ಗ,
    ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬಹುದು.
  3. ಹೆಗಡೆನಗರ – ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿ.ಕೆ.ವಿಕೆ-ಜಕ್ಕೂರು ರಸ್ತೆ ಮೂಲಕ ಪ್ರವೇಶಿಸಬಹುದು.
  4. ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಪ್ಲೈ ಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್. ಸರ್ಕಲ್ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದು
  5. ಕೆ.ಆರ್.ಪುರಂ, ಹೆಣ್ಣೂರು, ಹೆಚ್ ಆರ್ ಬಿ ಆರ್ ಲೇಟ್ಕೆಹಳ್ಳಿ ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯ ಮಂಚೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ.

ಹೆಬ್ಬಾಳ ಮೇಲ್ಸೇತುವೆ‌ಗೆ ಎರಡು ಹೊಸ ಟ್ರ್ಯಾಕ್​ಗಳನ್ನು ಸೇರಿಸಲು ಬಿಡಿಎ ಕಾಮಗಾರಿಯನ್ನು ಆರಂಭಿಸುವುದರಿಂದ ಏಪ್ರಿಲ್​ 17 ರಿಂದ ಕೆ.ಆರ್.ಪುರ ಲೂಪ್ ಸೇರುವ ಟ್ಯ್ರಾಕ್​ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Tue, 14 May 24