
ಬೆಂಗಳೂರು, ಜೂನ್ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರ್ಸಿಬಿ (RCB) ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರು ಕಾರ್ಯಕ್ರಮ ಆಯೋಜಕರನ್ನು ಪೊಲೀಸರು ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ, ಸುಮಂತ್, ಡಿಎನ್ಎ ಮ್ಯಾನೇಜರ್ ಕಿರಣ್, ಸಿಬ್ಬಂದಿ ಸುನೀಲ್ ಮ್ಯಾಥ್ಯೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೋರ್ಟ್: ಆರೋಪಿಗಳ ಹೆಸರು ಮತ್ತು ವಿಳಾಸದ ಮಾಹಿತಿ ಪಡೆದು, ಯಾವಾಗ ಬಂಧಿಸಿದರು? ಪೊಲೀಸರು ತೊಂದರೆ ಕೊಟ್ಟಿದ್ದಾರಾ? ಮನೆಯವರಿಗೆ ತಿಳಿಸಿದ್ದಾರಾ? ಎಂದು ನ್ಯಾಯಾಲಯ ಪ್ರಶ್ನಿಸಿತು.
ಆರೋಪಿಗಳು: ಇಲ್ಲ ಸರ್
ಪೊಲೀಸ್: ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ.
ಆರೋಪಿ ಪರ ವಕೀಲ ಸುನಿಲ್ ಸಬ್ಮಿಶನ್: ಸಿಎಂ ತನಿಖಾ ಅಧಿಕಾರಿಗಳಿಗೆ ಬಂಧಿಸುವಂತೆ ಹೇಳಿದ್ದಾರೆ. ಅದರಂತೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿ ಎಂದು ಹೇಳುವುದೇ ಕಾನೂನು ಬಾಹಿರ. ಸರ್ಕಾರದ ಚರ್ಮವನ್ನು ಕಾಪಾಡಲು ಹೀಗೆ ಮಾಡಿದ್ದಾರೆ. ಆರ್ಸಿಬಿ ಉಪಾಧ್ಯಕ್ಷ ಆಗಿದ್ದರಿಂದ ನೀವು ಸರಿಯಾಗಿ ಮಾಹಿತಿ ನೀಡದೆ. ಲೈಟಿಂಗ್ ಮಾಡಿಲ್ಲ. ಬ್ಯಾರಿಗೇಡ್ ಹಾಕಿರಲಿಲ್ಲ. ಹೀಗಾಗಿ ಸಾವಾಗಿದೆ ಎಂದು ಹೇಳಿ ಅರೆಸ್ಟ್ ಮಾಡಲಾಗಿದೆ. ಸಂಪೂರ್ಣವಾಗಿ ಕಾರ್ಯಕ್ರಮವನ್ನು ಸುರಕ್ಷತೆಯಿಂದ ನಡೆಸಿಲ್ಲ ಎಂದು ಹೇಳಿ ಬಂಧಿಸಿದ್ದಾರೆ ಎಂದು ವಾದ ಮಂಡಿಸಿದರು.
ಈಗಾಗಲೇ ಇದೇ ಕೇಸ್ನಲ್ಲಿ ಹೈ ಕೋರ್ಟ್ ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳುವುದು ಬೇಡ ಎಂದು ಆದೇಶ ನೀಡಿದೆ. ಆ ಆದೇಶವನ್ನು ಆನ್ಲೈನ್ನಲ್ಲಿ ಪಡೆದ ನಂತರ ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ಪೀಠಕ್ಕೆ ಹೇಳಿದರು.
ನ್ಯಾಯಾಲಯ: ಒಳಗೆ ಸಂಭ್ರಮಾಚರಣೆ ಮಾಡುವಾಗ ಹೊರಗಡೆ ಜನರು ಸಾಯುತ್ತಿದ್ದಾರೆ ಎಂದು ಗೊತ್ತಿತ್ತಾ?
ವಕೀಲ ಸುನಿಲ್ ಸಬ್ಮಿಶನ್: ರಸ್ತೆಯಲ್ಲಿ ಘಟನೆ ನಡೆದಿದೆ. ಅಲ್ಲಿ ನೋಡಿಕೊಳ್ಳುವುದು ಪೊಲೀಸರ ಕೆಲಸ. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರ ನಡೆಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಡಿಸಿಎಂ ಭಾಗಿಯಾಗಿದ್ದರು. ಹೊರಗೆ ಜನರು ಸತ್ತಿದ್ದರೂ ಸಹ ಅವರು ಭಾಗಿಯಾಗಿದ್ದರು ಎಂದು ತಿಳಿಸಿದರು.
ಡಿಎನ್ಎ ಪರ ವಕೀಲ: ಪೊಲೀಸರು ಅನುಮತಿ ನೀಡಿಲ್ಲವಾದರೆ, ಅವರು ಭದ್ರತೆ ನೀಡಿದ್ದು ಏಕೆ? ಅದರ ಬದಲು ಕಾರ್ಯಕ್ರಮವನ್ನು ತಡೆಯಬಹುದಿತ್ತು. ಅದನ್ನು ಪೊಲೀಸರು ಮಾಡಿಲ್ಲ. ಪೊಲೀಸರು ಜನರನ್ನು ನಿಯಂತ್ರಿಸಬೇಕಿತ್ತು. ಕೆಎಸ್ಸಿಎ ಬ್ಯಾರಿಕೇಡ್ ಹಾಕಿತ್ತು. ಆದರೆ, ಪೊಲೀಸರು ಒಂದು ಬ್ಯಾರಿಕೇಡ್ ಸಹ ಹಾಕಿರಲಿಲ್ಲ ಎಂದು ಪೀಠಕ್ಕೆ ಹೇಳಿದರು.
ಕೋರ್ಟ್: ಕಾರ್ಯಕ್ರಮ ಆಯೋಜಿಸಿದ್ದು ಯಾರು?
ವಕೀಲ ಸುನಿಲ್ ಸಬ್ಮಿಶನ್: ಕಾರ್ಯಕ್ರಮ ಆಯೋಜಿಸಲು ಕೆಎಸ್ಸಿಎ ಸರ್ಕಾರ ಮತ್ತು ಪೊಲೀಸರಿಗೆ ಮನವಿ ಮಾಡಿದೆ. ಅದಕ್ಕೆ ದಾಖಲಾತಿ ಇದೆ. ಮೆರವಣಿಗೆ ಮಾಡಲು ಅನುಮತಿ ಕೇಳಿದ್ದರು. ಅದು ಕೊಡಲಿಲ್ಲ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್ಎ ಕ್ರೀಡಾಂಗಣದ ಒಳಗೆ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾಲ್ತುಳಿತ ರಸ್ತೆಯಲ್ಲಿ ನಡೆದಿದ್ದ ಘಟನೆ.
ನಿಖಿಲ್ ಪರ ವಕೀಲ: ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಈ ಘಟನೆಗೆ ಹೊಣೆ. ಜೂನ್ 3ಕ್ಕೆ ಸರ್ಕಾರ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ. ಅದಕ್ಕೆ ಪೊಲೀಸ್ ಇಲಾಖೆ ಭದ್ರತೆ ನೀಡಲು ಸಾದ್ಯವಿಲ್ಲ ಎಂದು ಹೇಳಿದೆ. ನಮ್ಮ ಪೊಲೀಸರು ಜೂನ್ 3ರ ರಾತ್ರಿ ಪೂರ್ತಿ ಕೆಲಸ ಮಾಡಿದ್ದಾರೆ. ಹೀಗಾಗಿ, ಭದ್ರತೆ ನೀಡಲ್ಲ ಎಂದು ಪೊಲೀಸ್ ಇಲಾಖೆ ಹೇಳಿತ್ತು.
ಡಿಸಿಎಂ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರನ್ನು ಸ್ವಾಗತ ಮಾಡಿ, ಕರೆದುಕೊಂಡು ಬಂದು ವಿಧಾನಸೌಧದ ಬಳಿ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಮತ್ತು ರಾಜ್ಯಪಾಲರು ಭಾಗವಹಿಸಿದ್ದರು. ಈಗ ಇವರ ಮೇಲೆ ಕೇಸ್ ಮಾಡಿಸಿದ್ದಾರೆ. ಅದು ಸಹ ಸಿಎಂ ಹೇಳಿದ ಮೇಲೆ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಲಾಗಿದೆ. ಲಕ್ಷಾಂತರ ಅಭಿಮಾನಿಗಳು ಸೇರುತ್ತಾರೆ ಎಂದು ಹೇಳಿದ್ದಾರೆ. ಸೇರಿದವರಿಗೆ ಭದ್ರತೆ ನೀಡುವುದು ಅದು ಪೊಲೀಸರ ಕರ್ತವ್ಯ ಎಂದರು.
ಇದನ್ನೂ ಓದಿ: ಕೆಎಸ್ಸಿಎ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ಜಡ್ಜ್: ಪೊಲೀಸ್ ಸಡನ್ ಆಗಿ ಹೇಗೆ ಭದ್ರತೆ ವಕೆಲಸ ಮಾಡ್ತಾರೆ?
ವಕೀಲ ಸುನಿಲ್ ಸಬ್ಮಿಶನ್: ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಡೆಸಲು ಪೊಲೀಸ್ ಭದ್ರತೆ ಪಡೆದುಕೊಂಡಿದ್ದಾರೆ. ಅದು ಹೇಗೆ ಸಾದ್ಯ ಆಯ್ತು ಪೊಲೀಸರಿಗೆ. ಚಿನ್ನಸ್ವಾಮಿಯಲ್ಲಿ ಇಷ್ಟೆಲ್ಲ ಆದಮೇಲೂ ಭದ್ರತೆ ಪಡೆದುಕೊಂಡು ಕ್ರೀಡಾಂಗಣಕ್ಕೆ ಬರುತ್ತಾರೆ. ನಂತರ ಡಿಸಿಎಂ ಮೀಡಿಯಾ ಮುಂದೆ ಕಣ್ಣೀರು ಹಾಕುತ್ತಾರೆ.
Published On - 6:27 pm, Fri, 6 June 25