
ಬೆಂಗಳೂರು: ನಗರದ ಕೆಂಗೇರಿ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ ಶಿವಕುಮಾರ್ ಬಳಿ ದಿನಾಲೂ ಟೀ ಹಾಗೂ ಸಿಗರೇಟ್ ಸಾಲ ಪಡೆಯುತ್ತಿದ್ದ. ಜ.10 ರಂದು ಶಿವಕುಮಾರ್ ಆರೋಪಿ ಟಿಪ್ಪುವಿನ ಬಳಿ ಬಾಕಿ ಉಳಿಸಿಕೊಂಡಿದ್ದ ಹಣವನ್ನ ಕೇಳಿದ್ದಾನೆ. ನನ್ನ ಬಳಿಯೇ ಹಣ ಕೇಳುತ್ತಿಯಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ. ಅದೇ ದಿನ ಸಾಯಂಕಾಲ ತನ್ನ ಗ್ಯಾಂಗ್ ಕಟ್ಟಿಕೊಂಡು ಬಂದು ಟೀ ಅಂಗಡಿ ಮಾಲೀಕ ಶಿವಕುಮಾರ್ ಮತ್ತು ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದು, ಅಂಗಡಿಯಲ್ಲಿದ್ದ ಕೆಲ ವಸ್ತುಗಳನ್ನ ಹಾಳು ಮಾಡಿದ್ದಾರೆ ಎಂದು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಪೊಲೀಸರು ಟಿಪ್ಪುನನ್ನ ಬಂಧಿಸಿದ್ದಾರೆ.
ಕರಡಾಳು ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ತುಮಕೂರು: ತಿಪಟೂರು ತಾಲೂಕಿನ ಕರಡಾಳು ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸದಾಶಿವಯ್ಯ(60) ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಮೃತ ಸದಾಶಿವಯ್ಯ ಶಾಂತನಹಳ್ಳಿ ಗ್ರಾಮದ ನಿವಾಸಿಯಾಗಿದ್ದು. ನೊಣವಿನಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:‘Nabha Natesh: ಭೀಕರ ರಸ್ತೆ ಅಪಘಾತ: ನಟಿ ನಭಾ ನಟೇಶ್ ಭುಜಕ್ಕೆ ಹಲವು ಬಾರಿ ಸರ್ಜರಿ; ತಡವಾಗಿ ಹೊರಬಿತ್ತು ಸುದ್ದಿ
ನಾಗೇಗೌಡನಪಾಳ್ಯ ಬಳಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
ತುಮಕೂರು: ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯ ಬಳಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಹಾಸನ ಜಿಲ್ಲೆಯ ಚೌಡನಕುಪ್ಪೆ ಗ್ರಾಮದ ಅಭಿಷೇಕ್(23) ಎಂಬ ಯುವಕ ಸಾವನ್ನಪ್ಪಿದ್ದಾನೆ. ಟಿವಿಎಸ್ ಎಕ್ಸೆಲ್ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಲಿಸುತ್ತಿದ್ದ ರೈಲಿನಲ್ಲಿ ಸಿಗರೇಟ್ ಸೇದಿ ಯುವಕನ ಪುಂಡಾಟ
ತುಮಕೂರು: ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಯುವಕನೊಬ್ಬ ಸಿಗರೇಟ್ ಸೇದಿ ಪುಂಡಾಟ ಮೇರೆದಿದ್ದಾನೆ. ಪ್ರಶ್ನೆ ಮಾಡಿದ ಸಾರ್ವಜನಿಕರಿಗೆ ಅವಾಜ್ ಹಾಕಿದ್ದು, ಯುವಕನ ಪುಂಡಾಟದ ವಿಡಿಯೋ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಇಂತಹ ಯುವಕರ ಪುಡಾಂಟಕ್ಕೆ ಅನಾಹುತಗಳು ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Fri, 13 January 23