ಬೆಂಗಳೂರಿನಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ಕೋವಿಡ್​​ಗೆ ರಾಜಧಾನಿಯೇ ಹಾಟ್​ಸ್ಪಾಟ್

ಜನರ ನಿದ್ದೆ ಕೆಡಿಸಿ ಅದೆಷ್ಟೋ ಕುಟುಂಬಗಳ ಕನಸುಗಳನ್ನು ನುಚ್ಚು ನೂರು ಮಾಡಿದ ಕೊವಿಡ್ ಮಹಾಮಾರಿ ಮತ್ತೆ ಈಗ ದೇಶದಲ್ಲಿ ಆತಂಕದ ವಾತವರಣ ಸೃಷ್ಟಿ ಮಾಡಿದೆ. ಮಳೆ ಹಾಗೂ ಚಳಿಯ ವಾತವಾರಣದ ಮಧ್ಯೆ ವೈರಲ್ ಜ್ವರದ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಏರಿಕೆ ಆತಂಕವನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ಕೋವಿಡ್​​ಗೆ ರಾಜಧಾನಿಯೇ ಹಾಟ್​ಸ್ಪಾಟ್
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)
Updated By: Ganapathi Sharma

Updated on: May 30, 2025 | 7:37 AM

ಬೆಂಗಳೂರು, ಮೇ 30: ಈ ಹಿಂದೆ 2020 ರ ಕೊನೆಯಲ್ಲಿ ದೇಶ ಪ್ರವೇಶಿಸಿದ್ದ ಕೊರೊನಾ ವೈರಸ್ (Coronavirus) ಮಹಾಮಾರಿ ಅದೆಷ್ಟೋ ಜನರನ್ನು ಬಲಿ ಪಡೆದಿತ್ತು. ಅದೆಷ್ಟೋ ಜನರನ್ನು ಅನಾಥರನ್ನಾಗಿಸಿತ್ತು. ಇದೀಗ ಕೋವಿಡ್ ಸೋಂಕು ಕರ್ನಾಟಕದಲ್ಲಿ ಮತ್ತೆ ಅತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್​​ನ ಒಮಿಕ್ರಾನ್‌ ಪ್ರಬೇಧದ ಉಪ ತಳಿಯಾದ ಜೆಎನ್.1 ಆತಂಕ ಈಗ ಕರ್ನಾಟಕ ಆರೋಗ್ಯ ಇಲಾಖೆಯ ತಲೆ ಕೆಡಿಸುತ್ತಿದೆ. ಅದರಲ್ಲೂ ಕೋವಿಡ್ ಸೋಂಕಿಗೆ ರಾಜಧಾನಿ ಬೆಂಗಳೂರೇ (Bengaluru) ಹಾಟ್​​ಸ್ಪಾಟ್ ಆಗುತ್ತಿರುವುದು ನಿದ್ದೆಗೆಡಿಸಿದೆ.

ರಾಜ್ಯದಲ್ಲಿ ದಾಖಲಾಗುವ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 75 ಕ್ಕಿಂತ ಹಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಸಕ್ರಿಯ ಪ್ರಕಣಗಳಲ್ಲಿಯೂ ಬೆಂಗಳೂರೇ ಸಿಂಹಪಾಲು ಹೊಂದಿದೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಪ್ರತಿ ದಿನ 36 ಕ್ಕೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 25 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ರಾಜಧಾನಿಯಲ್ಲಿಯೇ ಗರಿಷ್ಠ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ತಜ್ಞ ವೈದ್ಯರು ಹೇಳುವುದೇನು?

ಗರ್ಭಿಣಿಯರು , ಮಕ್ಕಳು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹಾಗೂ ವೃದ್ಧರು ಕೊಂಚ ಎಚ್ಚರವಹಿಸಬೇಕಿದೆ. ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಪತ್ತಯಾಗುತ್ತಿರುವ ಕಾರಣ ನಗರದ ಕೆಲವು ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ಕೂಡಾ ಆರಂಭ ಮಾಡಲಾಗಿದೆ. ಶೀತ, ಕೆಮ್ಮು, ಜ್ವರ, ಮೈಕೈ ನೋವು ಇರುವವರಿಗೆ ಫಿವರ್ ಕ್ಲಿನಿಕಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮಾಕ್ ಡ್ರಿಲ್ ಮಾಡಿಕೊಂಡು ಕೋವಿಡ್ ಎದುರಿಸಲು ಆಸ್ಪತ್ರೆಗಳಲ್ಲಿ ಸಿದ್ಧತೆ ಶುರು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಜೂನ್​ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್​
ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಕೊಲೆ ಬೆದರಿಕೆ
ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್ ಶುರು
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಆರ್​ಟಿಪಿಸಿಆರ್ ಲ್ಯಾಬ್ ಪುನರಾರಂಭ

ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್: ಸೈಲೆಂಟ್ ಆಗಿ ಹೆಚ್ಚಳವಾಗುತ್ತಿವೆ ಪ್ರಕರಣಗಳು

ಒಟ್ಟಿನಲ್ಲಿ, ಮತ್ತೆ ಕೋವಿಡ್ ಆತಂಕ ಹೆಚ್ಚಾಗಿದೆ. ಜನರು ಮತ್ತಷ್ಟು ದಿನಗಳ ಕಾಲ ಆರೋಗ್ಯದ ಕಡೆ ಗಮನ ಕೊಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ