ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಾಚರ್ ಮೇಲೆ ಕಾಡಾನೆ ದಾಳಿ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಾಚರ್ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಗದ್ದೆಹಳ್ಳದ ಬಳಿ ನಡೆದಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಯತ್ತ ಹೋಗುತ್ತಿದ್ದಾಗ ದಾಳಿ ನಡೆಸಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಾಚರ್ ಮೇಲೆ ಕಾಡಾನೆ ದಾಳಿ
ಕಾಡಾನೆ ದಾಳಿಗೊಳಗಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಾಚರ್ (ಬಲ ಚಿತ್ರ) ಮತ್ತು ಆನೆ (ಸಾಂದರ್ಭಿಕ ಚಿತ್ರ)
Updated By: Rakesh Nayak Manchi

Updated on: Oct 21, 2023 | 5:47 PM

ಆನೇಕಲ್, ಅ.21: ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta National Park) ವಾಚರ್ ಮೇಲೆ ಕಾಡಾನೆ ದಾಳಿ (Wild elephant attack) ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಗದ್ದೆಹಳ್ಳದ ಬಳಿ ನಡೆದಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಯತ್ತ ಹೋಗುತ್ತಿದ್ದಾಗ ದಾಳಿ ನಡೆಸಿದೆ.

ಹಕ್ಕಿಪಿಕ್ಕಿ ಕಾಲೋನಿಯ ಚಿಕ್ಕಮುತ್ತಯ್ಯ (34) ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ವಾಚರ್. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪಾರ್ಕ್ ಮಾಡಿದ್ದ ಕಾರಿನಲ್ಲಿದ್ದ ಹಣ ಕದ್ದ ಕಳ್ಳರು

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಪಾರ್ಕ್ ಮಾಡಿದ್ದ ಕಾರಿನಲ್ಲಿದ್ದ 13 ಲಕ್ಷ ರೂಪಾಯಿಯನ್ನು ಕಳವು ಮಾಡಿ ಪರಾರಿಯಾದ ಘಟನೆ ನಗರದ ಸರ್ಜಾಪುರ ಬಳಿಯ ಸೋಮಪುರದಲ್ಲಿ ನಡೆದಿದೆ. ಉಪನೋಂದಣಿ ಕಚೇರಿ ಮುಂದೆ ಶುಕ್ರವಾರದಂದು ಕಳ್ಳರು ಈ ಕೈಚಳಕ ತೋರಿಸಿದ್ದು, ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ.

ಇದನ್ನೂ ಓದಿ: ಮೈಸೂರು: ಕಾಡಾನೆ ದಾಳಿಯಿಂದ ಬೆಳೆದು ನಿಂತು ಕಬ್ಬು ನಾಶ, ಪರಿಹಾರ ಕೇಳುತ್ತಿರುವ ನೊಂದ ರೈತ

ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಬಿಎಂಡಬ್ಲ್ಯು ಎಕ್ಸ್5 ಕಾರಿನ ಕಿಟಕಿ ಗಾಜು ಒಡೆದು ಕಾರಿನೊಳಗೆ ನುಗ್ಗಿ ಒಳಗಿದ್ದ ನಗದನ್ನು ದೋಚುತ್ತಿರುವುದು ಕಂಡು ಬಂದಿದೆ. ಕಾರು ಬೆಂಗಳೂರಿನ ಆನೇಕಲ್ ತಾಲೂಕಿನ ನಿವಾಸಿ ಬಾಬು ಎಂಬುವವರಿಗೆ ಸೇರಿದ್ದಾಗಿದೆ. ಘಟನೆ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ