ಮೈಸೂರು: ಕಾಡಾನೆ ದಾಳಿಯಿಂದ ಬೆಳೆದು ನಿಂತು ಕಬ್ಬು ನಾಶ, ಪರಿಹಾರ ಕೇಳುತ್ತಿರುವ ನೊಂದ ರೈತ
ಕಾಡಾನೆಳಿಂದ ಬೆಳೆ ಹಾಳಾದಾಗಲೆಲ್ಲ ಅರಣ್ಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿನ ಒಂದು ಪೋಟೋ ತೆಗೆದುಕೊಂಡು ಒಂದೆರಡು ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ ಎಂದು ಮಹೇಶ್ ಹೇಳುತ್ತಾರೆ. ಬೆಳೆಗಾಗಿ ಸಾಲಸೋಲ ಮಾಡಿದ್ದು ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ.
ಮೈಸೂರು: ಮಳೆಯಿಲ್ಲದೆ (deficit rain) ರಾಜ್ಯಾದಾದ್ಯಂತ ರೈತರು ಕಂಗಾಲಾಗಿದ್ದರೆ ನೀರಿಗಾಗಿ ವ್ಯವಸ್ಥೆ ಮಾಡಿಕೊಂಡು ಕಬ್ಬು ಬೆಳೆದ ಈ ರೈತನ ಗೋಳು ಬೇರೆ ತೆರನಾದದ್ದು. ಜಿಲ್ಲೆಯ ನಂಜನಗೂಡು (Nanjangud) ತಾಲ್ಲೂಕಿನ ಹೊಸವೀಡು ಗ್ರಾಮದ ರೈತ ಮಹೇಶ್ (Mahesh) ಅನ್ನೋರು ತನ್ನ 5-ಎಕರೆ ಜಮೀನಲ್ಲಿ ಸೊಂಪಾಗಿ ಕಬ್ಬು ಬೆಳೆದಿದ್ದರು. ಆದರೆ, ಕಾಡಾನೆಗಳ ದಾಳಿಯಿಂದ ಬೆಳೆದು ನಿಂತಿದ್ದ ಕಬ್ಬು ಸರ್ವನಾಶವಾಗಿದೆ. ಹೀಗೆ ಆಗುತ್ತಿರೋದು ಮೊದಲ ಸಲವೇನಲ್ಲ. ಕಾಡಾನೆಳಿಂದ ಬೆಳೆ ಹಾಳಾದಾಗಲೆಲ್ಲ ಅರಣ್ಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿನ ಒಂದು ಪೋಟೋ ತೆಗೆದುಕೊಂಡು ಒಂದೆರಡು ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ ಎಂದು ಮಹೇಶ್ ಹೇಳುತ್ತಾರೆ. ಬೆಳೆಗಾಗಿ ಸಾಲಸೋಲ ಮಾಡಿದ್ದು ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ. ಜಮೀನು ಸುತ್ತ ತಂತಿ ಬಿಗಿದು ಬೇಲಿ ನಿರ್ಮಿಸಿದರೂ ಆನೆಗಳು ಆದನ್ನು ಕಿತ್ತಿ, ತುಳಿದು ಒಳನುಗ್ಗುತ್ತಿವೆ ಅಂತ ರೈತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
