AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೇಕಲ್​ನಲ್ಲಿ ಸ್ಥಳಕ್ಕಾಗಿ ಕೋತಿಗಳ ನಡುವೆ ಗ್ಯಾಂಗ್ ವಾರ್! ಪರಸ್ಪರ ಕಚ್ಚಾಡಿ ಸಾಯುತ್ತಿರುವ ಮಂಗಗಳು

ಲಾಕ್​ಡೌನ್ ಕಾರಣ ಪ್ರವಾಸಿಗರು ಬರದೇ ಇದ್ದಾಗ ತಿಂಡಿ ಸಿಗದ ಕೋತಿಗಳು, ದೇವಸ್ಥಾನದ ಬಳಿ ಇರುವ ಗಿಡ ಮರಗಳ ಹಣ್ಣು ಕಾಯಿ ತಿನ್ನುವ ವಿಚಾರದಲ್ಲಿ ಜಗಳ ಶುರುವಾಗಿರಬಹುದು ಅಂತ ಹೇಳಲಾಗುತ್ತಿದೆ.

ಆನೇಕಲ್​ನಲ್ಲಿ ಸ್ಥಳಕ್ಕಾಗಿ ಕೋತಿಗಳ ನಡುವೆ ಗ್ಯಾಂಗ್ ವಾರ್! ಪರಸ್ಪರ ಕಚ್ಚಾಡಿ ಸಾಯುತ್ತಿರುವ ಮಂಗಗಳು
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on: Apr 04, 2022 | 4:57 PM

Share

ಆನೇಕಲ್: ಜಾಗಕ್ಕಾಗಿ ಮನಷ್ಯರು ಜಗಳವಾಡೋದು ಸಾಮಾನ್ಯವಾಗಿದೆ. ಆದರೆ ಪ್ರಾಣಿಗಳು (Animals) ಸಹಿತ ಇದರಿಂದ ಹೊರತಾಗಿಲ್ಲ ಅಂದರೆ ನಿಜಕ್ಕೂ ಆಶ್ಚರ್ಯಪಡುವ ಸಂಗತಿ. ಜಾಗದ ವಿಚಾರಕ್ಕಾಗಿ ಕೋತಿಗಳ (Monkeys) ಎರಡು ಗುಂಪು ಪರಸ್ಪರ ಕಚ್ಚಾಡುತ್ತಿದ್ದು, ಪ್ರವಾಸಿಗರಿಗೆ ಭಯ ಹುಟ್ಟಿಸಿವೆ. ಇದು ಆಶ್ಚರ್ಯವೆನಿಸಿದರೂ ಇಂತಹ ಘಟನೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಣಕನಹಳ್ಳಿಯಲ್ಲಿರುವ ಪ್ರಸಿದ್ಧ ಮುತ್ಯಾಲ ಮಡುವು ಪ್ರದೇಶದಲ್ಲಿ ಕೋತಿಗಳ ಮಧ್ಯೆ ಗ್ಯಾಂಗ್ ವಾರ್ ನಡೆಯುತ್ತಿದ್ದು, ಜಗಳದ ಕಾರಣ ಕೆಲ ಕೋತಿಗಳು ಸಾವನ್ನಪ್ಪುತ್ತಿವೆ. ಮುತ್ಯಾಲ ಮುಡವು ಪ್ರವಾಸಿ ಕ್ಷೇತ್ರ. ಇಲ್ಲಿ ದಿನವೊಂದಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಪ್ರವಾಸಿಗರ ಬಳಿ ತಿಂಡಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ ಕೋತಿಗಳು, ಕೊರೊನಾ ಸಂದರ್ಭದಲ್ಲಿ ಪ್ರವಾಸಿಗರು ಕಡಿಮೆ ಆದ ನಂತರ ಜಲಪಾತದ ಬಳಿ ಇರುವ ಚಿಕ್ಕ ದೇವಸ್ಥಾನ ಬಳಿ ಶಿಫ್ಟ್ ಆಗಿದ್ದವು. ಲಾಕ್​ಡೌನ್ ಕಾರಣ ಪ್ರವಾಸಿಗರು ಬರದೇ ಇದ್ದಾಗ ತಿಂಡಿ ಸಿಗದ ಕೋತಿಗಳು, ದೇವಸ್ಥಾನದ ಬಳಿ ಇರುವ ಗಿಡ ಮರಗಳ ಹಣ್ಣು ಕಾಯಿ ತಿನ್ನುವ ವಿಚಾರದಲ್ಲಿ ಜಗಳ ಶುರುವಾಗಿರಬಹುದು ಅಂತ ಹೇಳಲಾಗುತ್ತಿದೆ. ಜಗಳದ ಕಾರಣ ಮಂಗಗಳಿಗೆ ಕೈ, ಕಾಲು, ಮುಖದಲ್ಲಿ ಹಲವು ಗಾಯಗಳಾಗಿವೆ. ಅಲ್ಲದೇ ಕೈ ಕಳೆದುಕೊಂಡ ಹಲವು ಕೋತಿಗಳು ಇಲ್ಲಿ ಕಾಣ ಸಿಗುತ್ತಿವೆ.

ಕೆಲ ದಿನಗಳ ಹಿಂದೆ ಕೋತಿ ಹಾಗೂ ನಾಯಿಗಳ ಮಧ್ಯೆ ಕಾಳಗ ನಡೀತಿದೆ ಅಂತ ಸುದ್ದಿಯಾಗಿತ್ತು. ಆದರೆ ಇಲ್ಲಿ ಕೋತಿಗಳ ನಡುವೇಯೇ ಇಂತಹ ಘರ್ಷಣೆ ಉಂಟಾಗಿರುವ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ. ಸದ್ಯ ಇದೆ ಬಗ್ಗೆ ತಜ್ಞರು ಸ್ಪಷ್ಟ ಪಡಿಸಬೇಕಿದೆ.

ವರದಿ: ಸೈಯ್ಯದ್ ನಿಜಾಮುದ್ದೀನ್

ಇದನ್ನೂ ಓದಿ

ಹೊಸ ಸಾಹಸಕ್ಕೆ ಮುಂದಾದ ನಟ ವಸಿಸ್ಠ ಸಿಂಹ; ಲಾಂಚ್ ಆಯ್ತು ‘ಸಿಂಹ ಆಡಿಯೋ’

Viral Video: ದೇವಸ್ಥಾನದ ಹೊರಗೆ ಬೆಂಕಿ ಹೊತ್ತಿಕೊಂಡು ಹೊಸ ರಾಯಲ್ ಎನ್​ಫೀಲ್ಡ್​ ಬೈಕ್​ ಸ್ಫೋಟ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!