ಸರ್ಕಾರ ಕೆನಾಲ್​ಗಳಲ್ಲೇ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ : ಮಾಜಿ ಡಿಸಿಎಂ ಜಿ.ಪರಮೇಶ್ವರ್ ಆರೋಪ

ಬೆಂಗಳೂರು ಮಹಾನಗರದಲ್ಲಿ ರಾಜ್ಯ ಸರ್ಕಾರ ಕೆನಾಲ್​ಗಳಲ್ಲೇ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಸರ್ಕಾರ ಕೆನಾಲ್​ಗಳಲ್ಲೇ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ : ಮಾಜಿ ಡಿಸಿಎಂ ಜಿ.ಪರಮೇಶ್ವರ್ ಆರೋಪ
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ
Edited By: ವಿವೇಕ ಬಿರಾದಾರ

Updated on: Sep 09, 2022 | 2:24 PM

ಬೆಂಗಳೂರು: ಬೆಂಗಳೂರು (Bengaluru) ಮಹಾನಗರದಲ್ಲಿ ರಾಜ್ಯ ಸರ್ಕಾರ ಕೆನಾಲ್​ಗಳಲ್ಲೇ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇಷ್ಟೊಂದು ಮಳೆಯಾದರೂ ಕೆನಾಲ್ ಓಪನ್ ಮಾಡುವ ಕನಿಷ್ಠ ಪ್ರಜ್ಞೆ ಇಲ್ಲ ಅಂದ್ರೆ ಹೇಗೆ? ಎಂದು ಬೆಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (G Parameshwara) ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ನಾನು ಬೆಂಗಳೂರು ಉಸ್ತುವಾರಿಯಾಗಿ 14 ತಿಂಗಳು ಕೆಲಸ ಮಾಡಿದ್ದೆ. ಮಳೆಯಾದರೆ ಎಲ್ಲೆಲ್ಲಿ ಸಮಸ್ಯೆ ಆಗುತ್ತೆ ಎಂದು ಗೊತ್ತಿರುತ್ತೆ ಎಂದು ಹೇಳಿದರು.

ಬೆಂಗಳೂರಲ್ಲಿ ಮಳೆಗೂ ಮುನ್ನ ನಾವು ಎಚ್ಚೆತ್ತುಕೊಳ್ಳುತ್ತಿದ್ದೆವು. ಈ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಬೆಂಗಳೂರು ನಗರದಲ್ಲಿ ಮೊದಲು 340 ಕೆರೆಗಳು ಇದ್ದವು. ಈಗ ಬೆಂಗಳೂರಿನಲ್ಲಿ 48 ಕೆರೆಗಳು ಮಾತ್ರ ಉಳಿದಿವೆ. ನಮ್ಮ ಸರ್ಕಾರ ಇದ್ದಾಗ 1,953 ಒತ್ತುವರಿ ಗುರುತಿಸಿದ್ದೆವು. ಬೆಂಗಳೂರಿನಲ್ಲಿ 1,300 ಒತ್ತುವರಿ ಜಾಗ ತೆರವು ಮಾಡಿದ್ದೆವು ಎಂದು ತಿಳಿಸಿದರು.

ಈಗಿನ ಸರ್ಕಾರ ಉಳಿದ ಒತ್ತುವರಿಜಾಗ ತೆರವು ಮಾಡಬೇಕಿತ್ತು. ಸರ್ಕಾರ ಕೂಡಲೇ ರಾಜಕಾಲುವೆ ಒತ್ತುವರಿ ತೆರವು ಮಾಡಲಿ. ಇಷ್ಟೆಲ್ಲ ಅನಾಹುತ ಆದರೂ ಸರ್ವಪಕ್ಷ ಸಭೆ ಯಾಕೆ ಕರೆದಿಲ್ಲ?. ಸರ್ವಪಕ್ಷ ಸಭೆ ಕರೆದಿದ್ದರೆ ನಾವು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವು ಎಂದು ಹೇಳಿದ್ದಾರೆ.

ಬೆಂಗಳೂರಿಗೆ 110 ಹಳ್ಳಿಗಳನ್ನು ಸೇರಿಸಲಾಗಿದೆ. ಅಲ್ಲಿ ‌ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ. ಆ ಹಳ್ಳಿಗಳಿಂದ ಬರುವ ವೇಸ್ಟ್ ಎಲ್ಲಿ ಹೋಗಬೇಕು ? ರಾಜಕಾಲುವೆ ಒತ್ತುವರಿಯಾಗಿದೆ ತೆರವು ಮಾಡಿ. ಮುಲಾಜಿಲ್ಲದೆ ಅದನ್ನ ವೆಕೆಟ್ ಮಾಡಿಸಬೇಕು. ಕಾಲುವೆಗಳನ್ನು ರೀ ಡಿಸೈನಿಂಗ್ ಮಾಡಬೇಕು. ಪ್ಲಡ್ ನಿರ್ವಹಣೆಗೆ ಹೊಸ ಏಜೆನ್ಸಿ ಮಾಡಿ. ಬಿಡಿಎ, ಬಿಬಿಎಂಪಿ ರೀತಿಯಲ್ಲಿ ಪ್ರತ್ಯೇಕವಾಗಿ ಮಾಡಿ ಎಂದು ಒತ್ತಾಯಿಸಿದರು.

ಐಟಿ ಕಂಪನಿಯವರು ಒತ್ತುವರಿ ಮಾಡಿದ್ದಾರೆ. ಕೆಲವು ಕಡೆ ಎನ್ ಕ್ರೋಚ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಬೆಂಗಳೂರು ಬಿಲ್ಡಪ್ ಮಾಡಿದ್ದೆವು. ಅದನ್ನ ಇವತ್ತು ಹಾಳು ಮಾಡಲಾಗಿದೆ. ಮೊದಲಿನ ಬ್ರಾಂಡ್ ಬೆಂಗಳೂರು ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Web contact

TV9 Kannada

Read More
Follow Us