AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!

ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅದರೆ ಅದೆಲ್ಲ ಸಾಧ್ಯವಾಗಿದ್ದು ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿಯಿಂದ. ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.

ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!
ಎಎಸ್ಐಪಿಎಫ್ ಡಿ ಚಂದ್ರಪ್ಪ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 23, 2022 | 4:23 PM

Share

ಯಾವುದೇ ಹುದ್ದೆಯಲ್ಲಿರಲಿ, ಇಲಾಖೆ ಯಾವುದಾದರಾಗಿರಲಿ, ಕಷ್ಟದಲ್ಲಿರುವರಿಗೆ ಸಹಾಯ ಮಾಡಲು ಅವು ಅಡ್ಡಿಯಾಗಲಾರವು ಮಾರಾಯ್ರೇ. ಯಾಕೆ ಅನ್ನೋದನ್ನ ಈ ಪುಟ್ಟ ಕತೆ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಈ ಘಟನೆ ನಡೆದಿದ್ದು ಬೆಂಗಳೂರಿನ ಯಶವಂತಪುರ ರೇಲ್ವೇ ನಿಲ್ದಾಣದಲ್ಲಿ (Yeshvanthpur Railway Station) ಮೊನ್ನೆ ಸೋಮವಾರದಂದು. ಒಬ್ಬ ವ್ಯಕ್ತಿ ನೆಲಕ್ಕೆ ಉರುಳಿದಿರುವುದು ನಿಮಗೆ ಕಾಣುತ್ತಿದೆ. ಅವರ ಹೆಸರು ನಮಗೆ ಗೊತ್ತಿಲ್ಲ, ಆದರೆ ಸಕಾಲಕ್ಕೆ ಅವರಿಗೆ ಪ್ರಥಮ ಚಿಕಿತ್ಸೆ (first aid) ನೀಡಿ, ಅಂಬ್ಯುಲೆನ್ಸ್ ಒಂದನ್ನು ಫೋನ್ ಮಾಡಿ ಕರೆಸಿ ಅವರನ್ನು ನಗರದ ಆಸ್ಪತ್ರಯೊಂದಕ್ಕೆ ಕಳಿಸಿ ಪ್ರಾಣ ಉಳಿಸಿದ ರೇಲ್ವೇ ಸುರಕ್ಷಾ ದಳದ ಸಹಾಯಕ ಸಬ್ ಇನ್ಸ್ಪೆಕ್ಟರ್ ಹೆಸರು ಮಾತ್ರ ನಮಗಷ್ಟೇ ಅಲ್ಲ ಬಹಳಷ್ಟು ಜನಕ್ಕೆ ಗೊತ್ತಾಗಿದೆ. ಹೌದು, ವ್ಯಕ್ತಿಯು ಹೃದಯಾಘಾತಕ್ಕೊಳಗಾದಾಗ ಅದನ್ನು ಗಮನಿಸಿ ಕೂಡಲೇ ನೆರವು ಒಗಿಸಿದ ಎಎಸ್ಐಪಿಎಫ್ ಡಿ ಚಂದ್ರಪ್ಪ (ASIPF D Chandrappa) ಅವರು ಮಾಡಿದ ಈ ಪುಣ್ಯದ ಕೆಲಸ ಬಗ್ಗೆ ಜನಕ್ಕೆ ಗೊತ್ತಾಗಲೇಬೇಕಿದೆ.

ಮಧ್ಯವಯಸ್ಸಿನ ಈ ವ್ಯಕ್ತಿ ಸೋಮವಾರ ಯಶವಂತಪುರ ರೈಲು ನಿಲ್ದಾಣದ 6 ನೇ ಪ್ಲಾಟ್ ಪಾರ್ಮ್ ನಲ್ಲಿ ಕೂತು ಯಾವುದೋ ರೈಲಿಗಾಗಿ ಕಾಯುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಅವರ ಎದೆಯಲ್ಲಿ ತೀವ್ರ ಸ್ವರೂಪದ ನೋವು ಕಾಣಿಸಿದೆ ಮತ್ತು ನೆಲಕ್ಕೆ ಬಿದ್ದ ನಂತರ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅದೇ ಸ್ಥಳದಲ್ಲಿ ಕರ್ತವ್ಯದ ಮೇಲಿದ್ದ ಚಂದ್ರಪ್ಪ ಇದನ್ನು ಗಮನಿಸಿದ್ದಾರೆ. ಹೃದಯಾಘಾತವಾದಾಗ ಯಾವ ಬಗೆಯ ಪ್ರಥಮ ಚಿಕಿತ್ಸೆ ನೀಡಬೇಕೆನ್ನುವುದು ಚಂದ್ರಪ್ಪ ಅವರಿಗೆ ಪ್ರೊಬೇಷನರಿ ಅವಧಿಯಲ್ಲಿ ಹೇಳಿಕೊಡಲಾಗಿತ್ತು ಅನಿಸುತ್ತೆ.

ತಾವು ಕಲಿತಿದ್ದನ್ನು ಅಥವಾ ಕೇಳಿಸಿಕೊಂಡಿದ್ದನ್ನು ಅವರು ಕೂಡಲೇ ಕಾರ್ಯರೂಪಕ್ಕೆ ತಂದಿದ್ದಾರೆ. ಅದು ಅತ್ಯಂತ ಸಕಾಲಿಕವಾಗಿತ್ತು.

ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವಂತೆಯೇ ಚಂದ್ರಪ್ಪ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಅದನ್ನು ರೇಲ್ವೇ ಸ್ಟೇಶನ್ ಬಳಿ ತರಿಸಿಕೊಂಡಿದ್ದಾರೆ. ಅಲ್ಲಿದ್ದವರು ಮತ್ತು ಅಂಬ್ಯುಲೆನ್ಸ್ ನಲ್ಲಿ ಬಂದಿದ್ದ ಅರೋಗ್ಯ ಸಹಾಯಕರ ನೆರವಿನಿಂದ ಅವರನ್ನು ವಾಹನಕ್ಕೆ ಶಿಫ್ಟ್ ಮಾಡಿ ಸ್ಟೇಶನ್ ಗೆ ಹತ್ತಿರದಲ್ಲೇ ಇರುವ ಸ್ಪರ್ಶ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗೆ ಕಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅದರೆ ಅದೆಲ್ಲ ಸಾಧ್ಯವಾಗಿದ್ದು ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿಯಿಂದ. ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಅದನ್ನು ಗೋಲ್ಡನ್ ಅವರ್ ಅಂತ ಹೇಳುತ್ತಾರೆ. ಇದನ್ನೆಲ್ಲ ತಮಗೆ ಪರಿಚಯವೂ ಇರದ ವ್ಯಕ್ತಿಗೆ ಮಾಡಿರುವ ಚಂದ್ರಪ್ಪ ಪ್ರಾಣ ಉಳಿಸಿದ್ದಾರೆ.

ಇಂಥ ಸಂದರ್ಭಗಳಲ್ಲಿ ನಮಗ್ಯಾಕೆ ಉಸಾಬರಿ ಅಂದುಕೊಂಡು ಪಕ್ಕಕ್ಕೆ ಸರಿದು ಹೋಗುವವರ ನಡುವೆ ಎಎಸ್ಐಪಿಎಫ್ ಡಿ ಚಂದ್ರಪ್ಪ ಭಿನ್ನವಾಗಿ ಕಾಣುತ್ತಾರೆ. ಅವರಲ್ಲಿರುವ ಮಾನವೀಯ ಕಳಕಳಿಗೆ ನಮ್ಮದೊಂದು ಅಭಿನಂದನೆ!

ಇದನ್ನೂ ಓದಿ: ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ದಾನ ಮಾಡಿದ ತಾಯಿ

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!