
ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟದ ನಡುವೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಣೆಯಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಇಂದು ಉತ್ತಮ ಹಂತದಲ್ಲಿದೆ. ನಿರಂತರ ಮಳೆ ಮತ್ತು ತಂಪಾದ ಗಾಳಿಯ ಕಾರಣದಿಂದ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI 45 ರಿಂದ 55ರ ವ್ಯಾಪ್ತಿಯಲ್ಲಿ ದಾಖಲಾಗಿದೆ. ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಮಟ್ಟವು ಪ್ರತಿ ಕ್ಯೂಬಿಕ್ ಮೀಟರ್ಗೆ 6 ರಿಂದ 14 ಮೈಕ್ರೋಗ್ರಾಂಗಳಷ್ಟು ಮಾತ್ರ ಇದೆ. PM10 ಹಾಗೂ ಸಲ್ಫರ್ ಡೈಆಕ್ಸೈಡ್ ಮಟ್ಟಗಳು ಸುರಕ್ಷಿತ ಮಿತಿಯಲ್ಲೇ ಇವೆ.
ಜಯನಗರ, ಹೆಬ್ಬಾಳ, ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಗಾಳಿಯ ಶುದ್ಧತೆ ಉತ್ತಮವಾಗಿದ್ದರೆ, ಸಿಟಿ ರೈಲ್ವೆ ಸ್ಟೇಷನ್ ಮತ್ತು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ವಾಹನ ದಟ್ಟಣೆ ಪ್ರದೇಶಗಳಲ್ಲಿ AQI ಸಲ್ಪ ಹೆಚ್ಚಿದ್ದು ಸಾಧಾರಣ ಮಟ್ಟದಲ್ಲಿದೆ. ಮಳೆಯಿಂದಾಗಿ ಧೂಳಿನ ಕಣಗಳು ಭೂಮಿಗೆ ಸೇರುತ್ತಿರುವುದರಿಂದ ಬೆಂಗಳೂರಿಗರು ಪ್ರಸ್ತುತ ಸ್ವಚ್ಛ ಹಾಗೂ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಕಡಿಮೆಯಿದ್ದು, ‘ಅತ್ಯುತ್ತಮ’ ವಾಯು ಗುಣಮಟ್ಟ ದಾಖಲಾಗಿದೆ.
ಇಂದಿನ ವಾಯು ಗುಣಮಟ್ಟವು ಬಹುತೇಕ ಸುರಕ್ಷಿತವಾಗಿದ್ದು, ಸಾರ್ವಜನಿಕರು ಹಾಗೂ ವೃದ್ಧರು ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಆದಾಗ್ಯೂ, ಮಳೆಯ ವಾತಾವರಣ ಮತ್ತು ತಂಪಾದ ಗಾಳಿಯಿರುವುದರಿಂದ ಉಸಿರಾಟದ ತೊಂದರೆ ಅಥವಾ ಆಸ್ತಮಾ ಇರುವವರು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಒಳಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ