AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು: ಮಜ್ಜಿಗೆ, ನೀರು ವಿತರಣೆ

ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು: ಮಜ್ಜಿಗೆ, ನೀರು ವಿತರಣೆ

ರಾಮ್​, ಮೈಸೂರು
| Edited By: |

Updated on: Sep 20, 2026 | 10:36 PM

Share

ಮೈಸೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಟಿ. ನರಸೀಪುರದ ವಿವಾದದ ನಡುವೆ, ಮೈಸೂರಿನ ಮುಸ್ಲಿಂ ಯುವಕರು ಮಸೀದಿಯ ಬಳಿ ಗಣಪತಿ ಭಕ್ತರಿಗೆ ಮಜ್ಜಿಗೆ ಮತ್ತು ನೀರು ವಿತರಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ. ಸೋಹೇಲ್ ಬೇಗ್ ನೇತೃತ್ವದ ಈ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಮೈಸೂರು, ಸೆಪ್ಟೆಂಬರ್​​ 20: ಜಿಲ್ಲೆಯ ಟಿ. ನರಸೀಪುರದಲ್ಲಿ ಮಸೀದಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಬಗ್ಗೆ ವಿವಾದ ಉಂಟಾಗಿದ್ದರೂ ಸಾಂಸ್ಕೃತಿಕ ನಗರಿ ಮೈಸೂರು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಮೈಸೂರಿನ ವೀರನೆಗರೆಯಲ್ಲಿ ನಡೆದ ಸಾಮೂಹಿಕ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಾಜಿ ಪಾಲಿಕೆ ಸದಸ್ಯ ಸೋಹೇಲ್ ಬೇಗ್ ನೇತೃತ್ವದಲ್ಲಿ ಮುಸ್ಲಿಂ ಯುವಕರ ತಂಡವು ಗಣೇಶ ಭಕ್ತರಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಿಸಿದೆ. ಅಶೋಕ್ ರಸ್ತೆ ಮಸೀದಿ ಬಳಿ ಈ ಕಾರ್ಯ ನಡೆದಿರುವುದು ವಿಶೇಷ. ಈ ಮೂಲಕ ಗಣಪತಿ ಉತ್ಸವವು ಜಾತಿ-ಧರ್ಮ ಭೇದವಿಲ್ಲದೆ ಸಾಮರಸ್ಯವನ್ನು ಮೂಡಿಸಬೇಕು ಎಂಬ ಆಶಯವನ್ನು ಈ ಯುವಕರು ನನಸು ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us