Bengaluru Air Quality: ಮಳೆರಾಯನ ಕೃಪೆಯಿಂದ ಬೆಂಗಳೂರಿಗೆ ಸಿಕ್ತು ಶುದ್ಧ ಗಾಳಿ; ರಾಜ್ಯದ ಈ ಜಿಲ್ಲೆಯಲ್ಲಿ ವಾತಾವರಣ ಕ್ಲೀನ್!

ಇಂದು ಕರ್ನಾಟಕದಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (AQI) ಬಹುತೇಕ ತೃಪ್ತಿಕರವಾಗಿದೆ. ಮಳೆಯ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಗದಗ ಜಿಲ್ಲೆಯಲ್ಲಿ ಅತ್ಯಂತ ಶುದ್ಧ ಗಾಳಿ ದಾಖಲಾಗಿದ್ದರೆ, ಕಲಬುರಗಿಯಲ್ಲಿ ವಾಯು ಮಾಲಿನ್ಯದ ಮಟ್ಟವು ತೀವ್ರ ಅಪಾಯಕಾರಿ ಹಂತ ತಲುಪಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Bengaluru Air Quality: ಮಳೆರಾಯನ ಕೃಪೆಯಿಂದ ಬೆಂಗಳೂರಿಗೆ ಸಿಕ್ತು ಶುದ್ಧ ಗಾಳಿ; ರಾಜ್ಯದ ಈ ಜಿಲ್ಲೆಯಲ್ಲಿ ವಾತಾವರಣ ಕ್ಲೀನ್!
ರಾಜ್ಯದ ಈ ಜಿಲ್ಲೆಯಲ್ಲಿ ವಾತಾವರಣ ಕ್ಲೀನ್!

Updated on: May 24, 2026 | 7:49 AM

ಬೆಂಗಳೂರು, ಮೇ 24: ಇಂದು ಕರ್ನಾಟಕದ ಪ್ರಮುಖ ನಗರಗಳು ಮತ್ತು ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಒಟ್ಟಾರೆಯಾಗಿ ತೃಪ್ತಿಕರ ಮತ್ತು ಉತ್ತಮ ಮಟ್ಟದಲ್ಲಿದೆ. ಇತ್ತೀಚಿನ ಮಳೆ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

ಮುಖ್ಯಾಂಶಗಳು

  • ಮಳೆಯ ಕಾರಣದಿಂದ ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ತೃಪ್ತಿಕರವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತಿ ಶುದ್ಧ ಗಾಳಿ ದಾಖಲಾಗಿದೆ.
  • ಕಲಬುರಗಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 47 ರಿಂದ 86 ರ ಆಸುಪಾಸಿನಲ್ಲಿದ್ದು, ‘ಉತ್ತಮ’ (Good) ದಿಂದ ‘ಸಾಧಾರಣ’ (Moderate) ವಿಭಾಗದಲ್ಲಿದೆ.

  • ಸಿಲ್ಕ್ ಬೋರ್ಡ್: 97 (ಸಾಧಾರಣ)
  • ಕಡಬೀಸನಹಳ್ಳಿ : 92 (ಸಾಧಾರಣ)
  • ಜಯನಗರ 5ನೇ ಬ್ಲಾಕ್: 84 (ಸಾಧಾರಣ)
  • ಸಿಟಿ ರೈಲ್ವೆ ಸ್ಟೇಷನ್: 82 (ಸಾಧಾರಣ)
  • ಪೀಣ್ಯ: 77 (ಸಾಧಾರಣ)
  • ಹೆಬ್ಬಾಳ: 75 (ಸಾಧಾರಣ)
  • ಬಾಪೂಜಿ ನಗರ: 38 (ಉತ್ತಮ)

ಬೆಂಗಳೂರಿನಲ್ಲಿ ಸದ್ಯಕ್ಕೆ ವಾಯು ಮಾಲಿನ್ಯದ ಭೀತಿ ಇಲ್ಲದಿದ್ದರೂ, ಶ್ವಾಸಕೋಶದ ತೊಂದರೆ ಅಥವಾ ಅಸ್ತಮಾ ಇರುವವರು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಕೊಂಚ ಜಾಗ್ರತೆ ವಹಿಸುವುದು ಸೂಕ್ತ.

ರಾಜ್ಯದ ಇತರ ನಗರಗಳ ವಾಯು ಗುಣಮಟ್ಟದ ಸ್ಥಿತಿ

ಕರ್ನಾಟಕದ ಉಳಿದ ಪ್ರಮುಖ ನಗರಗಳಲ್ಲೂ ಇಂದು ಗಾಳಿಯ ಗುಣಮಟ್ಟವು ಅತ್ಯಂತ ಆರೋಗ್ಯಕರವಾಗಿದೆ. ಕೆಲವು ಪ್ರಮುಖ ನಗರಗಳ ಇಂದಿನ ಅಪ್ಡೇಟ್ ಇಲ್ಲಿದೆ

  • ಗದಗ: 18 (ಉತ್ತಮ)
  • ಬೆಳಗಾವಿ: 22 (ಉತ್ತಮ)
  • ಮೈಸೂರು: 30 (ಉತ್ತಮ)
  • ಮಡಿಕೇರಿ: 38 (ಉತ್ತಮ)

ಇಂದಿನ ಹವಾಮಾನದ ಪ್ರಕಾರ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟವು ನಾಗರಿಕರ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us