ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ರಣ ಬಿಸಿಲಿಗೆ ಅಕ್ಷರಶಃ ಜನರು ಬೆಂದು ಹೋಗಿದ್ದಾರೆ. ಇದರಿಂದ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಹನಿ ನೀರಿಗಾಗಿ ಸಂಕಷ್ಟ ಎದುರಾಗಿದೆ. ಈ ಹಿನ್ನಲೆ ಎಚ್ಚೆತ್ತ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಲೇಔಟ್(Basaveshwara Layout) ನಿವಾಸಿಗಳು, ಈ ಲೇಔಟ್​ನಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು, 2000 ಕ್ಕೂ ಹೆಚ್ಚು ಮತಗಳಿವೆ. ನೀರು ಕೊಡದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ‌ ನೀಡಿದ್ದಾರೆ.

ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
Edited By:

Updated on: Apr 17, 2024 | 4:21 PM

ಬೆಂಗಳೂರು, ಏ.17: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ನೀರಿಗಾಗಿ ಹಾಹಾಕಾರ(Water Crisis) ಶುರುವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೀರಿನ ಸಮಸ್ಯೆ ಉದ್ಬವಿಸಿದೆ. ಈ ಹಿನ್ನಲೆ ಎಚ್ಚೆತ್ತ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಲೇಔಟ್(Basaveshwara Layout) ನಿವಾಸಿಗಳು ಮತದಾನ ಬಹಿಷ್ಕಾರದ ಎಚ್ಚರಿಕೆ‌ ನೀಡಿದ್ದಾರೆ. ನೀರು ಕೊಡುವವರೆಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವ್ಯಾರು ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಲೇಔಟ್​ಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲವಂತೆ, ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಈ ಬಾರಿ ಬಿರುಬಿಸಿಲಿಗೆ ಏರಿಯಾದಲ್ಲಿರುವ ಎಲ್ಲಾ ಬೋರ್ವೆಲ್​​ಗಳು ಬತ್ತಿ ಹೋಗಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮನೆಗಳಿಗೆ ನೀರು ಬಂದಿದ್ದು, ಆಮೇಲೆ ನೀರೇ ಬಂದಿಲ್ಲ.

ಇದನ್ನೂ ಓದಿ:ನೀರಿಗಾಗಿ ಹಾಹಾಕಾರ: ಟ್ಯಾಂಕರ್ ಮೂಲಕ ಮನೆ-ಮನೆಗೆ ನೀರು ನೀಡ್ತಿರುವ ಯುವಕರು

ಈ ಲೇಔಟ್​ನಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು, 2000 ಕ್ಕೂ ಹೆಚ್ಚು ಮತಗಳಿವೆ. ಕುಡಿಯಲು ನೀರಿಲ್ಲದೆ ಬಾಡಿಗೆ ಮನೆ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಟ್ಯಾಂಕರ್​ಗೆ ಹಣ ಕೊಟ್ಟು ನೀರು ತರಿಸಿಕೊಳ್ಳೋಣಾವೆಂದರೆ, ಒನ್ ಟೂ ಡಬಲ್ ಕೇಳುತ್ತಾರೆ. ಈ ಹಿಂದೆ 500 ರಿಂದ 600 ರುಪಾಯಿ ಕೇಳ್ತಿದ್ದ ಟ್ಯಾಂಕರ್​ನವರು, ಇದೀಗ 1500 ರಿಂದ 2 ಸಾವಿರ ಕೇಳುತ್ತಿದ್ದಾರೆ. ಇತ್ತ ಕೆಟ್ಟು ಹೋಗಿರುವ ಬೋರ್ವೆಲ್ ಕೂಡ ರಿಪೇರಿ ಮಾಡುತ್ತಿಲ್ಲ. ನಿವಾಸಿಗಳೇ ಬೋರ್ವೆಲ್ ರಿಪೇರಿ ಮಾಡಿಸಿಕೊಳ್ಳುತ್ತೇವೆ ಎಂದರೂ ಕೂಡ ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us