ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ನೋಯ್ಡಾ ಟವರ್​​ನ್ನು ನೆಲಸಮ ಮಾಡಿದಂತೆ ಮಾಡಲಾಗುವುದು: ಸಚಿವ ಆರ್ ಅಶೋಕ

ಅಕ್ರಮವಾಗಿ ನಿರ್ಮಿಸಲಾದ  ಕಟ್ಟಡಗಳನ್ನು ಕೆಡವಲು ನಿಯಂತ್ರಿತ ಸ್ಫೋಟ ಬಳಸುತ್ತೇವೆ ಎಂದ ಅವರು ನೋಯ್ಡದಲ್ಲಿ ಇತ್ತೀಚೆಗೆ ಕೆಡವಲಾದ ಅವಳಿ ಗೋಪುರಗಳ ಮಾದರಿಯಲ್ಲಿ ನಾವು ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ನೋಯ್ಡಾ ಟವರ್​​ನ್ನು ನೆಲಸಮ ಮಾಡಿದಂತೆ ಮಾಡಲಾಗುವುದು: ಸಚಿವ ಆರ್ ಅಶೋಕ
ಆರ್ ಅಶೋಕ
Updated By: ರಶ್ಮಿ ಕಲ್ಲಕಟ್ಟ

Updated on: Sep 13, 2022 | 1:40 PM

ಬೆಂಗಳೂರು: ಭಾರಿ ಮಳೆ ಮತ್ತು ಪ್ರವಾಹ ಬೆಂಗಳೂರಿನ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಹೊತ್ತಲ್ಲಿ ಅಕ್ರಮ ನಿರ್ಮಾಣಗಳನ್ನು ನೋಯ್ಡಾ ಅವಳಿ ಟವರ್​​ಗಳಂತೆ ನೆಲಸಮ ಮಾಡಲಾಗುವುದು ಎಂದು ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ (R Ashoka) ಎಚ್ಚರಿಸಿದ್ದಾರೆ. ಬೆಂಗಳೂರಿನ ನಾಗರಿಕ ಸಂಸ್ಥೆಗಳು 700 ಅತಿಕ್ರಮಣಗಳನ್ನು ಗುರುತಿಸಿವೆ, ಅದು ನಗರದಾದ್ಯಂತ ಮಳೆನೀರಿನ ಚರಂಡಿಗಳಿಗೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಲೇ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಐಟಿ ನಗರದಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಒತ್ತುವರಿ ತೆರವುಗೊಳ್ಳುವವರೆಗೂ ಕೆಡವುವ ಕಾರ್ಯ ಮುಂದುವರಿಯಲಿದೆ ಎಂದು ಆರ್ ಅಶೋಕ ಹೇಳಿದ್ದಾರೆ.  ಅಕ್ರಮವಾಗಿ ನಿರ್ಮಿಸಲಾದ  ಕಟ್ಟಡಗಳನ್ನು ಕೆಡವಲು ನಿಯಂತ್ರಿತ ಸ್ಫೋಟ ಬಳಸುತ್ತೇವೆ ಎಂದ ಅವರು ನೋಯ್ಡದಲ್ಲಿ ಇತ್ತೀಚೆಗೆ ಕೆಡವಲಾದ ಅವಳಿ ಗೋಪುರಗಳ ಮಾದರಿಯಲ್ಲಿ ನಾವು ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡುತ್ತೇವೆ ಎಂದಿದ್ದಾರೆ.

ಕುತುಬ್ ಮಿನಾರ್‌ಗಿಂತಲೂ ಎತ್ತರದ ಕಟ್ಟಡವಾಗಿದ್ದ ನೋಯ್ಡಾದ ಅವಳಿ ಕಟ್ಟಡಗಳನ್ನು 3,700 ಕೆಜಿ ಸ್ಫೋಟಕಗಳನ್ನು ಸಿಡಿಸಿ ಸೆಕೆಂಡುಗಳಲ್ಲಿ ನೆಲಸಮ ಮಾಡಲಾಯಿತು.ಅದೇ ವೇಳೆ ಅಕ್ರಮಕ್ಕೆ ಅನುಮತಿ ನೀಡಿದ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಅಶೋಕ ಹೇಳಿದ್ದಾರೆ.

Published On - 1:32 pm, Tue, 13 September 22