AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು

ಬೆಂಗಳೂರಿನ ಕೆಂಗೇರಿಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಫ್ಲಾಟ್‌ಗಳ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಕೋಗಿಲು ನಿವಾಸಿಗಳಿಗೆ ಸರ್ಕಾರ ಮನೆ ನೀಡಲು ಮುಂದಾಗಿರುವಾಗ, ಕೆಹೆಚ್‌ಬಿ ಫ್ಲಾಟ್‌ಗಳಿಗೆ ಲಕ್ಷಾಂತರ ರೂ ಕೊಟ್ಟು ನೂರಾರು ಕುಟುಂಬಗಳು ಪರದಾಡುವಂತಾಗಿದೆ. ಸರ್ಕಾರ ತಮ್ಮ ಕಡೆ ಗಮನಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು
ಕೆಹೆಚ್‌ಬಿ ಕೆಂಗೇರಿ ಫ್ಲಾಟ್‌ಗಳು
Vinay Kashappanavar
| Edited By: |

Updated on: Jan 05, 2026 | 8:06 PM

Share

ಬೆಂಗಳೂರು, ಜನವರಿ 05: ಸದ್ಯ ರಾಜಧಾನಿಯಲ್ಲಿ ಕೋಗಿಲು (Kogilu Layout Row) ನಿವಾಸಿಗಳ ವಸತಿ ಬಗ್ಗೆ ದೊಡ್ಡ ಚರ್ಚೆ ಕೇಳಿ ಬರ್ತಿದೆ. ಕಡಿಮೆ ದುಡ್ಡನಲ್ಲಿ ಸರ್ಕಾರ ಕೊಗಿಲು ನಿವಾಸಿಗಳಿಗೆ ಮನೆ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ನಡುವೆ ಇದೀಗ ಲಕ್ಷಾಂತರ ರೂ. ಖರ್ಚು ‌ಮಾಡಿ‌ ಮನೆ ಪಡೆದಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ನಿವಾಸಿಗಳು ನಮ್ಮ ಗೋಳು ಕೇಳಿ ಎನ್ನುತ್ತಾರೆ. ಸದ್ಯ ನೂರಾರು ಕುಟುಂಬಗಳು ಭಯದಲ್ಲೇ ಬದುಕುವಂತಾಗಿದೆ.

ಕೋಗಿಲು ಬಡಾವಣೆ ಅನಧಿಕೃತ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಉಚಿತ ಮನೆ ನೀಡಲು ಸರ್ಕಾರವು ಜೋಶ್​​ನಲ್ಲಿದೆ. ಆದರೆ ಸರ್ಕಾರದ್ದೆ ಮನೆಗಳು ಬೀಳುವ ಹಂತದಲ್ಲಿ ಇದ್ದರೂ ಇಲ್ಲಿ ವಾಸಿಸುವ ಜನರ ಗೋಳು ಕೇಳೋರಿಲ್ಲ. ಕರ್ನಾಟಕ ಗೃಹ‌ ಮಂಡಳಿಯ 800 ಫ್ಲಾಟ್​​ಗಳ ಸ್ಥಿತಿ ಡೇಂಜರ್​ ಹಂತದಲ್ಲಿವೆ. ಕಳಪೆ ಕಾಮಗಾರಿಗೆ ನಿವಾಸಿಗಳು ಕಂಗಾಲಾಗಿದ್ದು, ನೂರಾರು ಕುಟುಂಬಗಳು ಭಯದಲ್ಲೇ ಬದುಕುತ್ತಿದ್ದಾರೆ.

ಇದನ್ನೂ ಓದಿ: ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ

ಕೆಂಗೇರಿಯಲ್ಲಿ ಕೆಹೆಚ್​​ಬಿ ಫ್ಲಾಟ್​​ನ ಬಹುಮಹಡಿ ವಸತಿ ಯೋಜನೆಯಲ್ಲಿ ಮನೆ ಪಡೆದವರು ಪರದಾಡುವಂತಾಗಿದೆ. ಸರ್ಕಾರದ ಮೇಲೆ ಭರವಸೆ ಇಟ್ಟು‌ 2012ರಲ್ಲಿ ಫ್ಲಾಟ್ ಖರೀದಿಸಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ. ನಾವು ಸುಮ್ಮನೆ ಭರವಸೆಗಳನ್ನು ಕೊಡುವುದಿಲ್ಲ, ಆದರೆ ಕೊಟ್ಟ ಭರವಸೆಗಳನ್ನು ಖಂಡಿತ ಈಡೇರಿಸುತ್ತೇನೆ ಎಂದು ಸುಳ್ಳು ಪ್ರಚಾರ ನೀಡಿದ್ದ ಕೆಹೆಚ್​​ಬಿ, ಕೆಹೆಚ್​​ಬಿ ಮಾತು ನಂಬಿ 13 ವರ್ಷಗಳ ಹಿಂದೆಯೇ ಸರಾಸರಿ 40 ಲಕ್ಷ ರೂ ಕೊಟ್ಟು ಫ್ಲಾಟ್ ಖರೀದಿಸಿದ್ದ ಜನರು ಈಗ ಪರದಾಡುವಂತಾಗಿದೆ. ಮನೆಯ ಗೋಡೆಗಳ ಸಿಮೆಂಟ್ ಕಿತ್ತು ಬರ್ತಿದೆ. ಮಳೆಗಾದಲ್ಲಿ ಮನೆಗಳು ಸೋರುತ್ತವೆ. ಗೋಡೆಗಳ ಸಿಮೆಂಟ್ ಕಿತ್ತು ಬರುತ್ತಿದೆ. ಗೋಡೆಯೇ ಕಿತ್ತು ಬರುತ್ತದೆಯೋ ಎಂದು ನಾಗರಜ್​​ ಎನ್ನುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು‌ 6 ಎಕರೆ 20 ಗುಂಟೆ ಜಾಗದಲ್ಲಿರುವ 808 ಫ್ಲಾಟ್​ಗಳು, 13 ವರ್ಷಗಳ ಹಿಂದೆ 3,500 ಸಾವಿರ ಚದರ ಅಡಿಗೆ ಹಣ ಕೊಟ್ಟು ಜನರು ಫ್ಲಾಟ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಫ್ಲಾಟ್ ಕಳಪೆ ಕಾಮಗಾರಿ ಬಟಬಯಲಾಗಿತ್ತು. ಸರಾಸರಿ 297, 4006, 405 ಕೋಟಿ ರೂ ವೆಚ್ಚದಲ್ಲಿ ನಿವಾಸಿಗಳು 808 ಫ್ಲಾಟ್​ಗಳು ಖರೀದಿ ಮಾಡಿದ್ದರು. ಇಷ್ಟೆಲ್ಲಾ ಖರ್ಚು ಮಾಡಿ‌ ಮನೆ ಖರೀದಿಸಿದರೂ ಇನ್ನು ಕೂಡ ಖಾತೆ ಸಿಕ್ಕಿಲ್ಲ.‌ ಎನ್​​ಓ ಸಿ ಸರ್ಟಿಫಿಕೇಟ್​​ ಕೂಡ ಫೇಕ್ ನೀಡಲಾಗಿದೆಯಂತೆ. ಈ ನಡುವೆ ಇರುವ ಮನೆಗಳ ಗೋಡೆಗಳು ಕೂಡ ಕೈಗೆ ಕಿತ್ತು ಬರುತ್ತಿವೆ. ಸ್ವಿಮ್ಮಿಂಗ್ ಪೂಲ್ ಕೂಡ ಸಂಪೂರ್ಣ ಕಳಪೆಯಾಗಿದ್ದು, ನಮ್ಮ ಗೋಳು ಕೇಳಿ ಅಂತಿದ್ದಾರೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಒತ್ತುವರಿ ಮಾಡಿಕೊಂಡು ಕೋಗಿಲು ಲೇಔಟ್​ನಲ್ಲಿ ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಸರ್ಕಾರ ಹಿಂದೆ ಮುಂದೆ ನೋಡದೆ ಕಡಿಮೆ ಬಜೆಟ್​ನಲ್ಲಿ ಮನೆಗಳನ್ನ ನೀಡಲು ಮುಂದಾಗಿದೆ. ಆದರೆ ಲಕ್ಷಾಂತರ ರೂ ಹಣ ನೀಡಿ ಮನೆ ಪಡೆದ ನಿವಾಸಿಗಳಿಗೆ ಸರ್ಕಾರ ಕಳಪೆ ಮನೆ ನೀಡಿದೆ. ಇನ್ನಾದರೂ ಸರ್ಕಾರ ಕೆಹೆಚ್​ಬಿ ಕೊಂಚ ಇತ್ತ ಗಮನ ಹರಿಬೇಕಿದೆ ಅಂತಿದ್ದಾರೆ ನಿವಾಸಿಗಳು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Vinay Kashappanavar
Vinay Kashappanavar
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!