AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್
ಪ್ರಾತಿನಿಧಿಕ ಚಿತ್ರImage Credit source: kannadaprabha.com
ಗಂಗಾಧರ​ ಬ. ಸಾಬೋಜಿ
|

Updated on:Mar 25, 2023 | 10:03 PM

Share

ಬೆಂಗಳೂರು: ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ (Namma Bengaluru Festival 2023) ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕಲರ್​ ಕಲರ್​ ಲೈಟ್​ಗಳಿಂದ ವಿಧಾನಸೌಧ ಕಂಗೊಳಿಸುತ್ತಿದೆ. ಹೆಸರಾಂತ ಗಾಯಕರಾದ ಅನನ್ಯ ಭಟ್, ನವೀನ್ ಸಜ್ಜು ಹಾಗೂ ಜನರ್ಧನ್​ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಚಿತ್ರಸಂತೆ ಮಾದರಿಯಲ್ಲಿ ಬೆಂಗಳೂರು ಹಬ್ಬ-2023 ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ, ನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ಹಂಪಿ ವಿಜಯನಗರ ಸಾಮ್ರಾಜ್ಯದ ಸ್ಟೇಜ್ ನಿರ್ಮಾಣ ಮಾಡಿದ್ದು, ಕಾರ್ಯಕ್ರಮ ವೀಕ್ಷಣೆಗೆ ಎಲ್ಲ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ವೀಕ್ ಎಂಡ್ ಹಿನ್ನಲೆ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ.

ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಬೆಂಗಳೂರು ಹಬ್ಬ: ಆರ್.ಅಶೋಕ್​

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್​ 2010 ರಿಂದ ಬೆಂಗಳೂರು ಹಬ್ಬ ಮಾಡಬೇಕು ಅಂದುಕೊಂಡಿದ್ದೆ. ಆದರೆ ಈ ಆಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ಜನ ಬಂದಿದ್ದಾರೆ. ಅವರಿಗೆ ಬೆಂಗಳೂರಿನ ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸಿಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ: ಡಾ ಜಿ ಪರಮೇಶ್ವರ್‌

ಬೆಂಗಳೂರು ಪ್ರಾರಂಭವಾಗಿದ್ದು ಸಂಕ್ರಾಂತಿ ದಿನ. ಆದ್ದರಿಂದ ಮುಂದಿನ ವರ್ಷದಿಂದ ಸಂಕ್ರಾಂತಿ ಹಬ್ಬದ ಮೊದಲ ಶನಿವಾರ ಭಾನುವಾರ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ‌. ಪ್ರತಿ ವರ್ಷ ದಸರಾ ಮಾದರಿಯಲ್ಲಿ ಬೆಂಗಳೂರು ಹಬ್ಬ ಆಚರಣೆ ಮಾಡಲಾಗುವುದು. ಭಾರತ ದೇಶದ ಎಲ್ಲ ಸಂಸ್ಕೃತಿ ಕಲೆಯನ್ನ ಇಲ್ಲಿಗೆ ಬರಮಾಡಿಕೊಂಡು ನಮ್ಮ ಭಾಷೆ ಸಂಸ್ಕೃತಿಯನ್ನ ಕಲಿಸಬೇಕು. ಇಲ್ಲಿಯವರೆಗೆ ಸಾಕಷ್ಟು ರಾಜ್ಯಗಳಿಂದ IAS IPS ಆಫೀಸ್​ಗಳು ಬಂದಿದ್ದಾರೆ. ಅವರು ಯಾರು ಇಲ್ಲಿಯವರೆಗೆ ವಾಪಸ್ಸು ಹೋಗಿಲ್ಲ. ಬೇರೆ ರಾಜ್ಯಕ್ಕೆ ಹೋಗಿರುವ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ಸು ಆಗಿದ್ದಾರೆ. ಇದು ಬೆಂಗಳೂರಿನ ಚೆಂದ ಅಂದ. ಗಲಾಟೆ ಇಲ್ಲದೆ ಯಾವುದಾದ್ರೂ ಒಂದು ನಗರ ಇದ್ರೆ ಅದು ಬೆಂಗಳೂರು ಎಂದು ಆರ್.ಅಶೋಕ್ ಹೇಳಿದರು.

ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದೆ: ನಿರ್ಮಾಲನಂದನಾಥ ಸ್ವಾಮಿಜಿ

ನಿರ್ಮಾಲನಂದನಾಥ ಸ್ವಾಮಿಜಿ ಮಾತನಾಡಿ, ಸಾಮ್ರಾಟ್ ಎಂದು ಬಾಲಗಂಗಾಧರ ನಾಥ ಗುರೂಜಿ ಆರ್ ಅಶೋಕ್​ರನ್ನು ಕರೆಯುತಿದ್ದರು. ಬೆಂಗಳೂರು ಟೆಕ್ನಿಕಲ್ ಸೇರಿದಂತೆ ಹಲವು ಹೆಸರುಗಳಲ್ಲಿ ಕರೆಯಲಾಗುತಿತ್ತು. ನಗರವನ್ನು ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದ್ದಾರೆ. ಐದನೂರು ವರ್ಷದ ಹಿಂದೆ ನಾಡು ಕಟ್ಟಿದರು. ತಾವು ಬೆಳೆಯೊದರ ಜೊತೆಗೆ ಎಲ್ಲ ಧರ್ಮಗಳ ಜನಾಂಗದವರನ್ನು ಬೆಳೆಸಿದರು. ಹೀಗಾಗೆ ನಗರದಲ್ಲಿ 64 ಪೇಟೆಗಳನ್ನು ಕಟ್ಟಿ ಹೊಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮುನಿಯಪ್ಪಗೆ ದೇವನಹಳ್ಳಿ ಟಿಕೇಟ್ ಘೋಷಣೆ: ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಿದ ಬೆಂಬಲಿಗರು

ಒಂದೊಂದು ಪೇಟೆಯೂ ಜನಾಂಗಗಳ ಅವರವರ ಕೌಶಲ್ಯ ಆಧರಿತ ಪೇಟೆಗಳನ್ನು ಕಟ್ಟಿಕೊಟ್ಟಿದ್ದಾರೆ. ಆರು ತಿಂಗಳ ಹಿಂದೆಯೇ ವಿಧಾನಸೌಧ ಮುಂದೆ ಕೆಂಪೇಗೌಡರ ಪ್ರತಿಮೆ ಇಡುವ ಬಗ್ಗೆ ಚರ್ಚೆಯಾಗಿತ್ತು. ಆರ್ ಅಶೋಕ್ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದರು. ಅದರಂತೆ ನಾಳೆ ಬಸವಣ್ಣ ಹಾಗೂ ಕೆಂಪೆಗೌಡರ ಪ್ರತಿಮೆ ಅನಾವರಣವಾಗಲಿದೆ ಎಂದು ಹೇಳಿದರು.

ವಿಶ್ವವೇ ತಿರುಗುನೊಡುವಂತೆ ಬೆಂಗಳೂರು ಹಬ್ಬವಾಗಲಿ: ನಂಜಾವದೂತ ಸ್ವಾಮೀಜಿ 

ನಂಜಾವದೂತ ಸ್ವಾಮೀಜಿ ಮಾತನಾಡಿ, ಬೆಂಗಳೂರು ಹಬ್ಬವನ್ನು ನಮ್ಮ ಕೆಂಪೇಗೌಡರ ಬೆಂಗಳೂರು ಹಬ್ಬ ಎಂದು ಮಾಡಬೇಕೆಂದು ಕೇಳಿಕೊಂಡಿದ್ದೇನೆ‌. ಕೆಲವರೇ ಟ್ರವಲ್ ಶೂಟರ್​ನಲ್ಲಿ ಅಶೋಕ್ ಒಬ್ಬರು. ಬಹಳ ಸಮಸ್ಯೆಯಾದಗ ಇವರನ್ನು ಬಿಡುತ್ತಾರೆ. ಅಂತ ಸಂದರ್ಭದಲ್ಲೂ ಎಲ್ಲರಿಗೂ ನ್ಯಾಯಾ ಕೊಡಿಸುವ ಕೆಲಸ ಅಶೋಕ್ ಮಾಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಹಬ್ಬದಂತೆ ವಿಶ್ವವೇ ತಿರುಗುನೊಡುವಂತೆ ಕೆಂಪೇಗೌಡರ ಬೆಂಗಳೂರು ಹಬ್ಬ ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:03 pm, Sat, 25 March 23

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್