AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್
ಪ್ರಾತಿನಿಧಿಕ ಚಿತ್ರImage Credit source: kannadaprabha.com
ಗಂಗಾಧರ​ ಬ. ಸಾಬೋಜಿ
|

Updated on:Mar 25, 2023 | 10:03 PM

Share

ಬೆಂಗಳೂರು: ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ (Namma Bengaluru Festival 2023) ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕಲರ್​ ಕಲರ್​ ಲೈಟ್​ಗಳಿಂದ ವಿಧಾನಸೌಧ ಕಂಗೊಳಿಸುತ್ತಿದೆ. ಹೆಸರಾಂತ ಗಾಯಕರಾದ ಅನನ್ಯ ಭಟ್, ನವೀನ್ ಸಜ್ಜು ಹಾಗೂ ಜನರ್ಧನ್​ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಚಿತ್ರಸಂತೆ ಮಾದರಿಯಲ್ಲಿ ಬೆಂಗಳೂರು ಹಬ್ಬ-2023 ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ, ನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ಹಂಪಿ ವಿಜಯನಗರ ಸಾಮ್ರಾಜ್ಯದ ಸ್ಟೇಜ್ ನಿರ್ಮಾಣ ಮಾಡಿದ್ದು, ಕಾರ್ಯಕ್ರಮ ವೀಕ್ಷಣೆಗೆ ಎಲ್ಲ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ವೀಕ್ ಎಂಡ್ ಹಿನ್ನಲೆ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ.

ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಬೆಂಗಳೂರು ಹಬ್ಬ: ಆರ್.ಅಶೋಕ್​

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್​ 2010 ರಿಂದ ಬೆಂಗಳೂರು ಹಬ್ಬ ಮಾಡಬೇಕು ಅಂದುಕೊಂಡಿದ್ದೆ. ಆದರೆ ಈ ಆಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ಜನ ಬಂದಿದ್ದಾರೆ. ಅವರಿಗೆ ಬೆಂಗಳೂರಿನ ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸಿಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ: ಡಾ ಜಿ ಪರಮೇಶ್ವರ್‌

ಬೆಂಗಳೂರು ಪ್ರಾರಂಭವಾಗಿದ್ದು ಸಂಕ್ರಾಂತಿ ದಿನ. ಆದ್ದರಿಂದ ಮುಂದಿನ ವರ್ಷದಿಂದ ಸಂಕ್ರಾಂತಿ ಹಬ್ಬದ ಮೊದಲ ಶನಿವಾರ ಭಾನುವಾರ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ‌. ಪ್ರತಿ ವರ್ಷ ದಸರಾ ಮಾದರಿಯಲ್ಲಿ ಬೆಂಗಳೂರು ಹಬ್ಬ ಆಚರಣೆ ಮಾಡಲಾಗುವುದು. ಭಾರತ ದೇಶದ ಎಲ್ಲ ಸಂಸ್ಕೃತಿ ಕಲೆಯನ್ನ ಇಲ್ಲಿಗೆ ಬರಮಾಡಿಕೊಂಡು ನಮ್ಮ ಭಾಷೆ ಸಂಸ್ಕೃತಿಯನ್ನ ಕಲಿಸಬೇಕು. ಇಲ್ಲಿಯವರೆಗೆ ಸಾಕಷ್ಟು ರಾಜ್ಯಗಳಿಂದ IAS IPS ಆಫೀಸ್​ಗಳು ಬಂದಿದ್ದಾರೆ. ಅವರು ಯಾರು ಇಲ್ಲಿಯವರೆಗೆ ವಾಪಸ್ಸು ಹೋಗಿಲ್ಲ. ಬೇರೆ ರಾಜ್ಯಕ್ಕೆ ಹೋಗಿರುವ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ಸು ಆಗಿದ್ದಾರೆ. ಇದು ಬೆಂಗಳೂರಿನ ಚೆಂದ ಅಂದ. ಗಲಾಟೆ ಇಲ್ಲದೆ ಯಾವುದಾದ್ರೂ ಒಂದು ನಗರ ಇದ್ರೆ ಅದು ಬೆಂಗಳೂರು ಎಂದು ಆರ್.ಅಶೋಕ್ ಹೇಳಿದರು.

ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದೆ: ನಿರ್ಮಾಲನಂದನಾಥ ಸ್ವಾಮಿಜಿ

ನಿರ್ಮಾಲನಂದನಾಥ ಸ್ವಾಮಿಜಿ ಮಾತನಾಡಿ, ಸಾಮ್ರಾಟ್ ಎಂದು ಬಾಲಗಂಗಾಧರ ನಾಥ ಗುರೂಜಿ ಆರ್ ಅಶೋಕ್​ರನ್ನು ಕರೆಯುತಿದ್ದರು. ಬೆಂಗಳೂರು ಟೆಕ್ನಿಕಲ್ ಸೇರಿದಂತೆ ಹಲವು ಹೆಸರುಗಳಲ್ಲಿ ಕರೆಯಲಾಗುತಿತ್ತು. ನಗರವನ್ನು ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದ್ದಾರೆ. ಐದನೂರು ವರ್ಷದ ಹಿಂದೆ ನಾಡು ಕಟ್ಟಿದರು. ತಾವು ಬೆಳೆಯೊದರ ಜೊತೆಗೆ ಎಲ್ಲ ಧರ್ಮಗಳ ಜನಾಂಗದವರನ್ನು ಬೆಳೆಸಿದರು. ಹೀಗಾಗೆ ನಗರದಲ್ಲಿ 64 ಪೇಟೆಗಳನ್ನು ಕಟ್ಟಿ ಹೊಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮುನಿಯಪ್ಪಗೆ ದೇವನಹಳ್ಳಿ ಟಿಕೇಟ್ ಘೋಷಣೆ: ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಿದ ಬೆಂಬಲಿಗರು

ಒಂದೊಂದು ಪೇಟೆಯೂ ಜನಾಂಗಗಳ ಅವರವರ ಕೌಶಲ್ಯ ಆಧರಿತ ಪೇಟೆಗಳನ್ನು ಕಟ್ಟಿಕೊಟ್ಟಿದ್ದಾರೆ. ಆರು ತಿಂಗಳ ಹಿಂದೆಯೇ ವಿಧಾನಸೌಧ ಮುಂದೆ ಕೆಂಪೇಗೌಡರ ಪ್ರತಿಮೆ ಇಡುವ ಬಗ್ಗೆ ಚರ್ಚೆಯಾಗಿತ್ತು. ಆರ್ ಅಶೋಕ್ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದರು. ಅದರಂತೆ ನಾಳೆ ಬಸವಣ್ಣ ಹಾಗೂ ಕೆಂಪೆಗೌಡರ ಪ್ರತಿಮೆ ಅನಾವರಣವಾಗಲಿದೆ ಎಂದು ಹೇಳಿದರು.

ವಿಶ್ವವೇ ತಿರುಗುನೊಡುವಂತೆ ಬೆಂಗಳೂರು ಹಬ್ಬವಾಗಲಿ: ನಂಜಾವದೂತ ಸ್ವಾಮೀಜಿ 

ನಂಜಾವದೂತ ಸ್ವಾಮೀಜಿ ಮಾತನಾಡಿ, ಬೆಂಗಳೂರು ಹಬ್ಬವನ್ನು ನಮ್ಮ ಕೆಂಪೇಗೌಡರ ಬೆಂಗಳೂರು ಹಬ್ಬ ಎಂದು ಮಾಡಬೇಕೆಂದು ಕೇಳಿಕೊಂಡಿದ್ದೇನೆ‌. ಕೆಲವರೇ ಟ್ರವಲ್ ಶೂಟರ್​ನಲ್ಲಿ ಅಶೋಕ್ ಒಬ್ಬರು. ಬಹಳ ಸಮಸ್ಯೆಯಾದಗ ಇವರನ್ನು ಬಿಡುತ್ತಾರೆ. ಅಂತ ಸಂದರ್ಭದಲ್ಲೂ ಎಲ್ಲರಿಗೂ ನ್ಯಾಯಾ ಕೊಡಿಸುವ ಕೆಲಸ ಅಶೋಕ್ ಮಾಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಹಬ್ಬದಂತೆ ವಿಶ್ವವೇ ತಿರುಗುನೊಡುವಂತೆ ಕೆಂಪೇಗೌಡರ ಬೆಂಗಳೂರು ಹಬ್ಬ ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:03 pm, Sat, 25 March 23

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?