AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLA Salary: ಶಾಸಕರ ವೇತನ ಪರಿಷ್ಕರಣೆ; ತಿಂಗಳಿಗೆ 2 ಲಕ್ಷ ದಾಟಿತು ಎಂಎಲ್​ಎಗಳ ವೇತನ

ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್​ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ […]

MLA Salary: ಶಾಸಕರ ವೇತನ ಪರಿಷ್ಕರಣೆ; ತಿಂಗಳಿಗೆ 2 ಲಕ್ಷ ದಾಟಿತು ಎಂಎಲ್​ಎಗಳ ವೇತನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 19, 2022 | 2:12 PM

Share

ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್​ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ 20 ಸಾವಿರ, ದೂರವಾಣಿ ಭತ್ಯೆ 20 ಸಾವಿರ ರೂ, ಅಂಚೆ ವೆಚ್ಚ ₹ 5 ಸಾವಿರ ನಿಗದಿಪಡಿಸಲಾಗಿದೆ.

ವಿಧಾನಮಂಡಲದ ಬಜೆಟ್ ಅಧಿವೇಶನಕ್ಕೂ ಮೊದಲೇ ಶಾಸಕರ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್​ಗಳಲ್ಲಿ ಅಂಗೀಕರಿಸಲಾಗಿತ್ತು. ಈ ಮೊದಲು ಶಾಸಕರು ಪಡೆಯುತ್ತಿದ್ದ ವೇತನ / ಭತ್ಯೆಗಳಿಗೆ ಹೋಲಿಸಿದರೆ ಪರಿಷ್ಕೃತ ಮೊತ್ತದಿಂದ ಶೇ 50ರಷ್ಟು ಏರಿಕೆ ಕಂಡಂತೆ ಆಗಿದೆ. ಏಪ್ರಿಲ್ 1, 2022ರಿಂದ ಪರಿಷ್ಕೃತ ವೇತನವನ್ನು ಶಾಸಕರು ಪಡೆಯುತ್ತಾರೆ.

ಕೊರೊನಾ ಪಿಡುಗಿನಿಂದ ರಾಜ್ಯದ ಆರ್ಥಿಕತೆ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರ ವೇತನ / ಭತ್ಯೆ ಹೆಚ್ಚಿಸಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ. ಅದರಲ್ಲಿಯೂ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ತಿಂಗಳಿಗೆ ₹ 500 ಕೊಟ್ಟರೆ ಅನ್​ಲಿಮಿಟೆಡ್ ಕಾಲ್ ಮತ್ತು ಇಂಟರ್ನೆಟ್​ ಸೌಕರ್ಯ ಸಿಗುವ ಸಂದರ್ಭದಲ್ಲಿ ಶಾಸಕರಿಗೆ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿದ ಔಚಿತ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

MLA-Allownace

ಶಾಸಕರಿಗೆ ಸಿಗುತ್ತಿರುವ ಭತ್ಯೆ / ವೇತನಗಳ ವಿವರ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ