AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLA Salary: ಶಾಸಕರ ವೇತನ ಪರಿಷ್ಕರಣೆ; ತಿಂಗಳಿಗೆ 2 ಲಕ್ಷ ದಾಟಿತು ಎಂಎಲ್​ಎಗಳ ವೇತನ

ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್​ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ […]

MLA Salary: ಶಾಸಕರ ವೇತನ ಪರಿಷ್ಕರಣೆ; ತಿಂಗಳಿಗೆ 2 ಲಕ್ಷ ದಾಟಿತು ಎಂಎಲ್​ಎಗಳ ವೇತನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 19, 2022 | 2:12 PM

Share

ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್​ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ 20 ಸಾವಿರ, ದೂರವಾಣಿ ಭತ್ಯೆ 20 ಸಾವಿರ ರೂ, ಅಂಚೆ ವೆಚ್ಚ ₹ 5 ಸಾವಿರ ನಿಗದಿಪಡಿಸಲಾಗಿದೆ.

ವಿಧಾನಮಂಡಲದ ಬಜೆಟ್ ಅಧಿವೇಶನಕ್ಕೂ ಮೊದಲೇ ಶಾಸಕರ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್​ಗಳಲ್ಲಿ ಅಂಗೀಕರಿಸಲಾಗಿತ್ತು. ಈ ಮೊದಲು ಶಾಸಕರು ಪಡೆಯುತ್ತಿದ್ದ ವೇತನ / ಭತ್ಯೆಗಳಿಗೆ ಹೋಲಿಸಿದರೆ ಪರಿಷ್ಕೃತ ಮೊತ್ತದಿಂದ ಶೇ 50ರಷ್ಟು ಏರಿಕೆ ಕಂಡಂತೆ ಆಗಿದೆ. ಏಪ್ರಿಲ್ 1, 2022ರಿಂದ ಪರಿಷ್ಕೃತ ವೇತನವನ್ನು ಶಾಸಕರು ಪಡೆಯುತ್ತಾರೆ.

ಕೊರೊನಾ ಪಿಡುಗಿನಿಂದ ರಾಜ್ಯದ ಆರ್ಥಿಕತೆ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರ ವೇತನ / ಭತ್ಯೆ ಹೆಚ್ಚಿಸಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ. ಅದರಲ್ಲಿಯೂ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ತಿಂಗಳಿಗೆ ₹ 500 ಕೊಟ್ಟರೆ ಅನ್​ಲಿಮಿಟೆಡ್ ಕಾಲ್ ಮತ್ತು ಇಂಟರ್ನೆಟ್​ ಸೌಕರ್ಯ ಸಿಗುವ ಸಂದರ್ಭದಲ್ಲಿ ಶಾಸಕರಿಗೆ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿದ ಔಚಿತ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

MLA-Allownace

ಶಾಸಕರಿಗೆ ಸಿಗುತ್ತಿರುವ ಭತ್ಯೆ / ವೇತನಗಳ ವಿವರ

Follow Us
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ