AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ

ಬೆಂಗಳೂರಿನ ನಗರತ್​ಪೇಟೆಯಲ್ಲಿರುವ ಮೊಬೈಲ್​ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ, ಆರೋಪಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ವೇಳೆ ಬಹಿರಂಗಗೊಂಡ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ.

ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ
ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು
TV9 Web
| Updated By: Ganapathi Sharma|

Updated on:Mar 20, 2024 | 12:35 PM

Share

ಬೆಂಗಳೂರು, ಮಾ.19: ನಗರ್ತಪೇಟೆಯಲ್ಲಿರುವ (Nagarathpete) ಮೊಬೈಲ್​ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ (Assault) ನಡೆಸಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಆರೋಪಿಗಳ ಮತಾಂಧತೆ ಹೊರಬಿದ್ದಿದೆ. ಅಷ್ಟಕ್ಕೂ ಭಾನುವಾರ ಸಂಜೆ ಸಿದ್ದಣ್ಣ ಗಲ್ಲಿಯಲ್ಲಿ ನಡೆದಿದ್ದೇನು? ಈ ಬಗ್ಗೆ ತನಿಖೆಯಿಂದ ಹೊರಬಿದ್ದ ಎಕ್ಸ್​ಕ್ಲೂಸಿವ್ ಮಾಹಿತಿ ಟಿವಿ9 ಬಿಚ್ಚಿಟ್ಟಿದೆ.

ಭಾನುವಾರ ಸಂಜೆ 6.20 ರ ಸುಮಾರಿಗೆ ಏರಿಯಾದಲ್ಲಿ ಅಂಗಡಿ ಮುಂದೆ ನಿಂತಿದ್ದ ಆರು ಯುವಕರು, ಸತೀಶ್ ಟೀ ಸ್ಟಾಲ್ ಕಡೆಯಿಂದ ಮಸೀದಿ ಕಡೆಗೆ ಹೋಗಿದ್ದಾರೆ. ದಾರಿ ಮಧ್ಯೆ ಕೃಷ್ಣಾ ಟೆಲಿಕಾಂ ಮುಂದೆ ಹಾದು ಹೋಗಿದ್ದಾರೆ. ಈ ವೇಳೆ ಮುಖೇಶ್ ಎಂಬ ಯುವಕ ತನ್ನ ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆ ಹಾಕಿಕೊಂಡು ಕುಳಿತಿದ್ದನು.

ಇದನ್ನು ಕೇಳಿದ ಆರೋಪಿಗಳು ಅಂಗಡಿಯ ಮುಂದೆ ಹೋಗಿದ್ದರೂ ವಾಪಸ್ ಆಗಮಿಸಿ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ನಾನು ಯಾಕೆ ಸೌಂಡ್ ಕಡಿಮೆ ಮಾಡಲಿ? ನಮ್ಮ ಅಂಗಡಿಯಲ್ಲಿ ನಾನು ಸೌಂಡ್ ಕೊಡುತ್ತೇನೆ ಎಂದು ಮುಖೇಶ್ ಹೇಳಿದ್ದಾನೆ. ಅವಾಗ ರಂಜಾನ್ ಸಮಯ ಹಬ್ಬ ಇದೇ ಮಸೀದಿಯಲ್ಲಿ ಆಜಾನ್ ಕೂಗುತ್ತಾರೆ ಎಂದು ಆರೋಪಿಗಳು ಮತಾಂಧತೆಯ ಮಾತುಗಳೊಂದಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೊಬೈಲ್ ಶಾಪ್​ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ್ದ ಐವರು ಅರೆಸ್ಟ್​

ಆಗ ತಾನು ಕಡಿಮೆ ಮಾಡಲ್ಲ ಸ್ಪೀಕರ್ ಸೌಂಡ್ ಜೋರಾಗಿ ಇದ್ದರೆ ಜನಕ್ಕೆ ಗೊತ್ತಾಗುವುದು ಎಂದು ಮುಖೇಶ್ ಹೇಳಿದ್ದಾನೆ. ಆಗ ಮಾತಿಗೆ ಮಾತು ಮುಂದುವರೆದಿದೆ. ಅದರಂತೆ ಆರೋಪಿಗಳಲ್ಲಿ ಒಬ್ಬ ಮುಖೇಶ್ ಕೊರಳ ಪಟ್ಟಿಗೆ ಕೈ ಹಾಕಿದ್ದಾನೆ. ಈ ವೇಳೆ ಮುಖೇಶ್ ಆತನಿಗೆ ಒಂದೇಟು ಹೊಡೆದಿದ್ದಾನೆ. ನಂತರ ಆರೋಪಿಗಳ ಗುಂಪು ಮುಖೇಶ್​ನನ್ನು ಹೊರಗೆ ಏಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.

ಚಾರ್ಜರ್ ವಿಚಾರಕ್ಕೆ ಮುಖೇಶ್ ಜೊತೆ ಜಗಳ

ಮುಖೇಶ್ ಮೊಬೈಲ್ ಅಂಗಡಿ ತೆರೆದು ಮೂರು ತಿಂಗಳಾಗಿವೆ ಅಷ್ಟೆ. ಆದರೆ, ನಡೆಯಬಾರದ ಎರಡು ಘಟನೆಗಳು ನಡೆದಿವೆ. ಈ ಹಿಂದೆ ಒಂದು ಚಾರ್ಜರ್ ಕೊಡು ಎನ್ನುವ ವಿಚಾರಕ್ಕೆ ಇದೇ ಹುಡುಗರು ಮತ್ತು ಮುಖೇಶ್ ನಗುವೆ ವಾಗ್ವಾದ ನಡೆದಿತ್ತು ಎನ್ನುವ ವಿಚಾರ ಇದೀಗ ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ.

ಆರೋಪಿಯ ಅಪ್ರಾಪ್ತ ಸಹೋದರನಿಂದ ಸ್ಟೇಟಸ್

ಹಲ್ಲೆ ಮಾಡಿದ ಅಣ್ಣ ಸುಲೇಮಾನ್ ಜೈಲು ಪಾಲಾದರೂ ಮನೆಯಲ್ಲಿರುವ ಅಪ್ರಾಪ್ತ ಸಹೋದರ ಮೊಂಡುತನ ತೋರಿದ್ದಾನೆ. “ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೆ ಪುರಾಣ” ಅಂತಾ ನಿನ್ನೆ ಬೆಳಗ್ಗೆ ಸ್ಟೇಟಸ್ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ: ಹಿಂದೂ ಕಾರ್ಯಕರ್ತರ ರ್‍ಯಾಲಿ, ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಭಕ್ತಿಗೆ ನಮಾಜ್​ಗೆ ತೊಂದರೆ ಆಗುತ್ತಿರಲಿಲ್ಲ: ಅಬು ತಾಲೀಬ್

ಘಟನೆಯನ್ನು ಖಂಡಿಸಿದ ಅಬು ತಾಲೀಬ್ ಎಂಬವರು ಟಿವಿ9 ಜೊತೆ ಮಾತನಾಡಿದ್ದು, 60 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಯಾವತ್ತು ಇಂತಹ ಘಟನೆ ನಡೆದಿರಲಿಲ್ಲ. ಮೊನ್ನೆ ಸಂಜೆ ರಂಜಾನ್ ಉಪವಾಸ ಬಿಡುವ ಸಮಯದಲ್ಲಿ ಆ ಅಂಗಡಿ ಮಾಲೀಕ ಹಾಡು ಹಾಕಿಕೊಂಡಿದ್ದನಂತೆ. ಕೆಲ ಯುವಕರು ಅಲ್ಲಿಂದ ಬರುವಾಗ ಹಾಡು ಆಫ್ ಮಾಡು ಅಂತ ಹೇಳಿದ್ದಾರೆ. ಅದಕ್ಕೆ ಜಗಳ ಆಗಿದೆ. ಆದರೆ ಅವನು ಹಾಕಿದ್ದ ಹಾಡು ನಮಾಜ್ ಗೆ ತೊಂದರೆ ಆಗುತ್ತಿರಲಿಲ್ಲ. ನಮಗೆ ಇದರಿಂದ ತುಂಬಾ ನೋವಾಗಿದೆ. ಸುತ್ತಮುತ್ತಲಿನ ಜನರು ನಮ್ಮ ಮಸೀದಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಆದರೆ ಈ ಘಟನೆಯಿಂದ ತಪ್ಪು ಭಾವನೆ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಪಿಗಳ ವಿವರ ಮತ್ತು ಹಿನ್ನೆಲೆ

ಸುಲೇಮಾನ್: ಕಬ್ಬನ್ ಪೇಟೆ ನಿವಾಸಿ, ಈ ಹಿಂದೆ 2018, 2023 ರಲ್ಲಿ ಕಿಡ್ನಾಪ್ ಮತ್ತು ಸುಲಿಗೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಮೊಬೈಲ್ ಅಂಗಡಿ ಮಾಲೀಕನ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾನೆ. ಕಬ್ಬನ್ ಪೇಟೆ ನಿವಾಸಿ ಶಹನವಾಜ್, ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ರೋಹಿತ್, ಕಬ್ಬನ್ ಪೇಟೆಯ ಕೆಎಎಸ್​ಲೈನ್ ನಿವಾಸಿ ಜಾಹಿದ್, ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ತರಣ್ ಅಲಿಯಾಸ್ ದಡಿಯಾ ಪ್ರಕರಣದಲ್ಲಿ ಭಾಗಿಯಾದವರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Tue, 19 March 24

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್