AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸದಾಗಿ ಖರೀದಿಸಿದ ಕಾರಿನಿಂದ ಪತ್ನಿಯ ಅನೈತಿಕ ಸಂಬಂಧ ಬೆಳಕಿಗೆ; ಠಾಣೆ ಮೆಟ್ಟಿಲೇರಿದ ಗಂಡ

ಹೊಸದಾಗಿ ಖರೀದಿಸಿದ ಹುಂಡೈ i20 ಕಾರಿನಿಂದ ಪತ್ನಿಯ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ. ಹೌದು ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಪ್ರಿಯಕರನ ಜೊತೆ ನೈಟ್ ಔಟ್ ಹೋಗಿದ್ದು, ಎಲ್ಲವೂ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್​ನಿಂದ ಗೊತ್ತಾಗಿರುವ ಘಟನೆ ನಡೆದಿದೆ.

ಹೊಸದಾಗಿ ಖರೀದಿಸಿದ ಕಾರಿನಿಂದ ಪತ್ನಿಯ ಅನೈತಿಕ ಸಂಬಂಧ ಬೆಳಕಿಗೆ; ಠಾಣೆ ಮೆಟ್ಟಿಲೇರಿದ ಗಂಡ
ಸಾಂದರ್ಭಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on:Mar 25, 2023 | 1:22 PM

Share

ಬೆಂಗಳೂರು: ಹೊಸದಾಗಿ ಖರೀದಿಸಿದ ಹುಂಡೈ i20(Hyundai i20)ಕಾರಿಗೆ ಅಳವಡಿಸಲಾಗಿದ್ದ ಜಿಪಿಎಸ್​ ಮೂಲಕ ಪತ್ನಿಯ ಅನೈತಿಕ ಸಂಬಂಧ(Illegal Affair) ಬೆಳಕಿಗೆ ಬಂದಿದೆ. ಹೌದು ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಪ್ರಿಯಕರನ ಜೊತೆ ನೈಟ್ ಔಟ್  ಹೋಗಿ ನಡೆಸಿದ ಚೆಲ್ಲಾಟವು  ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್​ನಿಂದ ಗೊತ್ತಾಗಿದೆ.  2014 ರಲ್ಲಿ ನಿಖಿಲ್ ಅಂಗಡಿ ಮತ್ತು ಪ್ರಿಯಾಂಕಾ ಮದುವೆಯಾಗಿದ್ದರು.  ದಂಪತಿಗೆ ಮುದ್ದಾದ 6 ವರ್ಷದ ಮಗು  ಇದೆ. ಮುದೊಂದು ದಿನ ಪ್ರಿಯಾಂಕಾಳಿಗೆ ಪವನ್ ಎಂಬಾತನ ಪರಿಚಯವಾಗಿದೆ. ಈ ಪರಿಚಯ ಅಡ್ಡ ದಾರಿಗೆ ತಿರುಗಿದ್ದು, ಇಬ್ಬರ ನಡುವೆ  ಅಕ್ರಮ ಸಂಬಂಧ  ಏರ್ಪಟ್ಟಿದೆ. ಇದನ್ನ ತಿಳಿದ ಪತಿ ಇದೀಗ ಪೊಲೀಸ್​ ಮೆಟ್ಟಿಲೇರಿದ್ದಾನೆ.

ಪತ್ನಿಯ ಅನೈತಿಕ ಸಂಬಂಧ ಬಯಲು ಮಾಡಿದ ಹುಂಡೈ i20 ಕಾರು

ಹೌದು ಹೊಸದಾಗಿ ತೆಗೆದುಕೊಂಡು ಕಾರಿನಿಂದ ಪತ್ನಿಯ ಕಳ್ಳಾಟ ಬಯಲಾಗಿದೆ. 2020 ರಲ್ಲಿ ಪತಿ ನಿಖಿಲ್ ಅಂಗಡಿ ಎಂಬುವವರು ಹೊಸದಾಗಿ ಹುಂಡೈ i20 ಕಾರು ಖರೀದಿಸಿದ್ದರು. ಇದಕ್ಕೆ ಜಿಪಿಎಸ್ ಅಳವಡಿಕೆಯಾಗಿತ್ತು. ಹೀಗೆ ಒಂದು ದಿನ ಗಂಡ ರಾತ್ರಿ ಪಾಳಿ ಕೆಲಸಕ್ಕೆ ಹೋದಾಗ ಪತ್ನಿಗೆ ಜಿಪಿಎಸ್ ಇರುವುದು ಗೊತ್ತಾಗದೆ ಕಾರು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಏರ್​ಪೋರ್ಟ್​ ಬಿ.ಇ.ಎಲ್ ಸರ್ಕಲ್ ಬಳಿ ಇರುವ ಲಾಡ್ಜ್​ಗೆ ಬಂದಿದ್ದ ಕಾರು, ಅಲ್ಲಿದ್ದ ಖಾಸಗಿ ಹೊಟೇಲ್​ನ ಮುಂದೆ ಬೆಳಗಿನ ಜಾವ 5 ಗಂಟೆಯವರೆಗೂ ಕಾರು ಪಾರ್ಕ್ ಆಗಿತ್ತು. ಇವೆಲ್ಲವನ್ನು ಪತಿ ಜಿಪಿಎಸ್ ಮುಖಾಂತರ ಮೊಬೈಲ್​ನಲ್ಲಿ ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ:Bengaluru Habba: ಮಾ. 25, 26ರಂದು ನಡೆಯಲಿರುವ ಬೆಂಗಳೂರು ಹಬ್ಬದ ಬಗ್ಗೆ ನೀವು ತಿಳಿಯಲೇಬೇಕಾದ 5 ಸಂಗತಿಗಳು

ಬಳಿಕ ಅನುಮಾನಗೊಂಡು ಹೊಟೇಲ್​ನಲ್ಲಿ ವಿಚಾರಿಸಿದಾಗ ಪತ್ನಿಯ ಪ್ರಿಯಕರ ಹಾಗು ಪತ್ನಿ ಇಬ್ಬರು ಓಟರ್ ಐಡಿ ಒಂದೇ ರೂಂಗೆ ಬುಕ್ ಆಗಿತ್ತು. ಇದನ್ನ ಪ್ರಶ್ನಿಸಲು ಹೋದಾಗ ಪತ್ನಿ‌ ಪ್ರಿಯಾಂಕ ಜೀವ ಬೆದರಿಕೆ ಹಾಕಿದ್ದಾರಂತೆ. ನಂತರ ತನ್ನನ್ನು ಪತ್ನಿ ವಂಚಿಸಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Sat, 25 March 23

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ