AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Reality Check: ಬೆಂಗಳೂರಿನಲ್ಲಿ ಸಂಜೆ 7 ಗಂಟೆ ನಂತರ ಬಿಎಂಟಿಸಿ ಬಸ್​ಗಳಿಗೆ ಬರ! ಟಿವಿ9 ಕ್ಯಾಮೆರಾದಲ್ಲಿ ಅಸಲಿಯತ್ತು ಬಯಲು

ಜನರು ಕಾಲೇಜು, ಆಫೀಸ್ ಮುಗಿಸಿ ಮನೆಗೆ ಹೋಗುವ ಸಮಯ ಅಂದರೆ ಅದು ಸಂಜೆ ಹೊತ್ತು. ಈ ಸಮಯದಲ್ಲೇ ಬಿಎಂಟಿಸಿ ಬಸ್​ಗಳು ಸೇವೆ ನೀಡದೆ ತಮ್ಮ ಪಾಡಿಗೆ ತಾವು ನಿಲ್ಲುತ್ತಿವೆ. ಹೀಗಾಗಿ ಮನೆಗೆ ಹೋಗಲು ಜನರು ಪರದಾಡುತ್ತಿದ್ದಾರೆ.

TV9 Reality Check: ಬೆಂಗಳೂರಿನಲ್ಲಿ ಸಂಜೆ 7 ಗಂಟೆ ನಂತರ ಬಿಎಂಟಿಸಿ ಬಸ್​ಗಳಿಗೆ ಬರ! ಟಿವಿ9 ಕ್ಯಾಮೆರಾದಲ್ಲಿ ಅಸಲಿಯತ್ತು ಬಯಲು
ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)
TV9 Web
| Edited By: sandhya thejappa|

Updated on:Apr 30, 2022 | 3:51 PM

Share

ಬೆಂಗಳೂರು: ಬೃಹತ್ ನಗರವಾಗಿರುವ ಬೆಂಗಳೂರಿಗೆ ಜನರು ವಿದ್ಯಾಭ್ಯಾಸ, ಕೆಲಸಕ್ಕೆಂದು ಆಗಮಿಸುತ್ತಾರೆ. ಹೀಗೆ ಬೆಂಗಳೂರಿನಲ್ಲಿ (Bengaluru) ಕಾಲೇಜು, ಆಫೀಸಿಗೆ ಹೋಗಲು ಜನರು ಬಿಎಂಟಿಸಿ (BMTC) ಬಸ್​ಗಳನ್ನೆ ನಂಬಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಬೇರೆ ಏರಿಕೆಯಾಗಿದೆ. ಇಂಧನ ದರ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹೀಗಾಗಿ ಬಸ್​ಗಳಲ್ಲೆ ಹೋಗುವುದು ಬೆಸ್ಟ್ ಅಂತಾರೆ. ಆದರೆ ಬಡವರ ಬಂಧು ಅಂತ ಅನಿಸಿಕೊಂಡಿದ್ದ ಬಿಎಂಟಿಸಿ ಲಾಭಕ್ಕೆ ಒತ್ತು ಕೊಡುತ್ತಿದೆಯಾ? ಎಂಬ ಅನುಮಾನ ಮೂಡಿದೆ.

ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬಿಎಂಟಿಸಿಗೆ ಸಂಬಂಧಿಸಿದ ಕಟು ಸತ್ಯವೊಂದು ಬಯಲಾಗಿದೆ. ಇದೇನಾ ದೇಶದ ನಂಬರ್ ಓನ್ ಸಾರಿಗೆ ಸಂಸ್ಥೆಯ ಬದ್ಧತೆ? ಪ್ರಯಾಣಿಕರ ಹಿತವೇ ನಮಗೆ ಮುಖ್ಯ ಅಂತಿರೋ ನಿಗಮ, ಹಿತದ ಬದಲು ಲಾಭಕ್ಕೆ ಒತ್ತು ಕೊಡುತ್ತಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ನಗರದಲ್ಲಿ ಆರೂವರೆ ಸಾವಿರ ಬಿಎಂಟಿಸಿ ಬಸ್​ಗಳು ಓಡಾಟ ನಡೆಸುತ್ತವೆ. ಆದರೆ ಸಂಜೆಯಾಗುತ್ತಿದ್ದಂತೆ ತನ್ನ ಕೆಲಸ ನಿಲ್ಲಿಸಿ ಗೂಡು ಸೇರುತ್ತಿವೆ. ಸಂಜೆ 7 ಗಂಟೆಗೆ ಬಿಎಂಟಿಸಿಬಸ್ ಸೇವೆ ಸ್ಥಬ್ಧವಾಗುತ್ತಿದೆ. ಕೊರೊನಾ ಬಳಿಕ ಸಂಜೆಯಾಗುತ್ತಿದ್ದಂತೆ ಬಿಎಂಟಿಸಿ ಬಸ್​ಗಳೂ ಸಂಚಾರ ನಡೆಸದೆ ಸ್ಟಾಪ್ ಆಗುತ್ತಿವೆ. ಈ ಎಲ್ಲಾ ದೃಶ್ಯಗಳು ಟಿವಿ9 ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನರು ಕಾಲೇಜು, ಆಫೀಸ್ ಮುಗಿಸಿ ಮನೆಗೆ ಹೋಗುವ ಸಮಯ ಅಂದರೆ ಅದು ಸಂಜೆ ಹೊತ್ತು. ಈ ಸಮಯದಲ್ಲೇ ಬಿಎಂಟಿಸಿ ಬಸ್​ಗಳು ಸೇವೆ ನೀಡದೆ ತಮ್ಮ ಪಾಡಿಗೆ ತಾವು ನಿಲ್ಲುತ್ತಿವೆ. ಹೀಗಾಗಿ ಮನೆಗೆ ಹೋಗಲು ಜನರು ಪರದಾಡುತ್ತಿದ್ದಾರೆ. ಹಗಲು, ರಾತ್ರಿ ಎನ್ನದೆ ಬೆಂಗಳೂರಿನಲ್ಲಿ 24 ಗಂಟೆಯೂ ವಹಿವಾಟು ನಡೆಯುತ್ತದೆ. ಹೀಗಿರುವಾಗ ಸಂಜೆ 7 ರ ಬಳಿಕ ಬಿಎಂಟಿಸಿ ಬಸ್​ಗೆ ಬರ ಬಂದತಾಗಿದೆ. ನಷ್ಟದ ನೆಪ ಹೇಳಿ ಬಸ್ ಸಂಖ್ಯೆ ಇಳಿಮುಖ ಮಾಡಿರುವ ಬಿಎಂಟಿಸಿ, ನೌಕರರ ಶಿಫ್ಟ್ ಬದಲಾಯಿಸಿದೆ.

ಸಂಜೆ 7 ರ ಬಳಿಕ ಬಸ್ ಹತ್ತೋಕೆ ಜನರು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಕೊವಿಡ್​ಗೂ ಮೊದಲು ಬಿಎಂಟಿಸಿ ನೌಕರರಿಗೆ 5 ಪಾಳಿ ಇತ್ತು. ಈಗ ಬಿಎಂಟಿಸಿ 5ರಿಂದ 2 ಶಿಫ್ಟ್​ಗೆ ಇಳಿಸಿದೆ. ಬೆಳಿಗ್ಗೆ ಪಾಳಿ ಮತ್ತು ಜನರಲ್ ಶಿಫ್ಟ್ ಮುಗಿಸಿ ನೌಕರರು ಮನೆ ಸೇರುತ್ತಾರೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬಸ್​ಗಳು ಡಿಪೋ ಸೇರಿಕೊಳ್ಳುತ್ತಿವೆ. ಬಸ್​ಗಳ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಜೊತೆಗೆ  ಬಿಎಂಟಿಸಿ ವರ್ತನೆಯಿಂದ ಹಿಡಿ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ

ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು

ಆರ್ಥಿಕತೆ ಉತ್ತಮವಾಗಿದೆ, ಬಿಸಿಲು ಭಯಂಕರವಾಗಿದೆ; ಹಾಗಾಗಿ ವಿದ್ಯುತ್​ ಬೇಡಿಕೆ ಅಗಾಧವಾಗಿದೆ- ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ

Published On - 3:46 pm, Sat, 30 April 22

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?