ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ

Rail coach restaurant: ಕೊನೆಗೂ ಬೆಂಗಳೂರಿನ ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ ರೈಲು ನಿಲ್ದಾಣದ ಪ್ರಯಾಣಿಕರ ಬೇಡಿಕೆ ಈಡೇರಿದೆ. ಪ್ರಯಾಣಿಕರ ಹಸಿವು ನೀಗಿಸಲು ಅದ್ಭುತವಾದ ರೆಸ್ಟೋರೆಂಟ್ ಒಂದನ್ನು ರೈಲ್ವೆ ಇಲಾಖೆ ಆರಂಭಿಸಿದೆ. ಆದರೆ, ಈ ರೆಸ್ಟೋರೆಂಟ್ ನಿರ್ಮಾಣವಾಗಿರುವುದು ಹಳೆಯ ರೈಲು ಬೋಗಿಯಲ್ಲಿ! ರೈಲು ಬೋಗಿ ರೆಸ್ಟೋರೆಂಟ್​​ನ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ
ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್ ಒಳಭಾಗದ ನೋಟ
Follow us
| Updated By: ಗಣಪತಿ ಶರ್ಮ

Updated on: Apr 17, 2024 | 8:11 AM

ಬೆಂಗಳೂರು, ಏಪ್ರಿಲ್ 17: ಬೆಂಗಳೂರಿನ ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ (Sir M Visvesvaraya Terminal) ರೈಲು ನಿಲ್ದಾಣಕ್ಕೆ ಪ್ರತಿದಿನ ಬೇರೆಬೇರೆ ರಾಜ್ಯಗಳಿಂದ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಆದರೆ, ಅವರಿಗೆ ಕುಳಿತುಕೊಂಡು ಊಟ ಮಾಡಲು ಒಂದೊಳ್ಳೆಯ ರೆಸ್ಟೋರೆಂಟ್ ಇರಲಿಲ್ಲ. ಅದಕ್ಕೆ ವಿಭಿನ್ನವಾಗಿ ಯೋಚನೆ ಮಾಡಿದ ಮಾಡಿದ ರೈಲ್ವೆ ಇಲಾಖೆ (Indian Railways), ರೈಲಿನಲ್ಲೇ ಅದ್ಭುತವಾದ ಎಸಿ ರೆಸ್ಟೋರೆಂಟ್ (Rail coach restaurant) ಓಪನ್ ಮಾಡಿದೆ! ಆ ಮೂಲಕ, ಕಡೆಗೂ ಪ್ರಯಾಣಿಕರ ಹಲವು ದಿನಗಳ ಕನಸು ನನಸಾಗಿದೆ.

ನೈರುತ್ಯ ರೈಲ್ವೆ ವಲಯವು ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ರೈಲ್ವೆ ಕೋಚ್​ನಲ್ಲಿ ರೆಸ್ಟೋರೆಂಟ್ ನಿರ್ಮಾಣ ಮಾಡಿದೆ. ಹಳೆಯ ರೈಲ್ವೆ ಕೋಚ್​​ಗಳನ್ನು ನವೀಕರಣ ಮಾಡಿ ಅವುಗಳಿಗೆ ರೆಸ್ಟೋರೆಂಟ್ ರೂಪ ಕೊಡಲಾಗಿದೆ. ಇದು ಹಲವು ದಿನಗಳ ಕನಸಾಗಿದ್ದು, ಕಡೆಗೂ ಇದೀಗ ಆರಂಭಗೊಂಡಿದೆ. ಈ ರೆಸ್ಟೋರೆಂಟ್ ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಸಂಪೂರ್ಣ ಹವಾ ನಿಯಂತ್ರಿತ: 40 ಜನ ಕುಳಿತುಕೊಳ್ಳಲು ವ್ಯವಸ್ಥೆ

ರೈಲ್ವೆ ಕೋಚ್ ರೆಸ್ಟೋರೆಂಟ್​​ನಲ್ಲಿ 40 ಜನರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಕೋಚ್ ಒಳಗೆ ಮತ್ತು ಹೊರಗೂ ಕುಳಿತುಕೊಳ್ಳಲು ಅವಕಾಶ ಇದೆ. ಹಳೆಯ ಬಳಕೆಗೆ ಬಾರದ ಸ್ಕ್ರ್ಯಾಪ್ ರೈಲ್ವೆ ಕೋಚ್​​ಗಳನ್ನು ಬಳಸಿ, ಅವುಗಳ ಒಳಾಂಗಣವನ್ನು ವಿನ್ಯಾಸಗೊಳಿಸಿ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಇದು 24×7 ರೆಸ್ಟೋರೆಂಟ್​ ಆಗಿದ್ದು ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ. ಪ್ರತಿದಿನ ಈ ರೈಲ್ವೆ ನಿಲ್ದಾಣಕ್ಕೆ ಕರ್ನಾಟಕ ಮತ್ತು ಬೇರೆಬೇರೆ ರಾಜ್ಯಕ್ಕೆ ಸಂಚಾರ ಮಾಡಲು 58 ರೈಲುಗಳು ಬರುತ್ತವೆ. 30 ರಿಂದ 35 ಸಾವಿರ ಪ್ರಯಾಣಿಕರು ಈ ರೈಲ್ವೆ ಸ್ಟೇಷನ್ ಮೂಲಕ ಪ್ರಯಾಣ ಮಾಡುತ್ತಾರೆ. ಈ ರೈಲ್ವೆ ಕೋಚ್ ರೆಸ್ಟೋರೆಂಟ್​​​ನಲ್ಲಿ ಟಿವಿ ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಯಾವೆಲ್ಲ ಆಹಾರ ಲಭ್ಯ?

ಸೌತ್ ಇಂಡಿಯನ್, ನಾರ್ಥ್ ಇಂಡಿಯನ್ ಸೇರಿದಂತೆ ಚೈನೀಸ್ ಫುಟ್​ಗಳನ್ನು ಕೂಡ ಈ ರೆಸ್ಟೋರೆಂಟ್​​ನಲ್ಲಿ ಸವಿಯಬಹುದು. ರೈಲ್ವೆ ಇಲಾಖೆ ಈ ರೆಸ್ಟೋರೆಂಟ್ ಅನ್ನು ಖಾಸಗಿ ಹೋಟೆಲ್​​ಗೆ ಟೆಂಡರ್ ನೀಡಿದ್ದು ಇದರಿಂದ ಪ್ರತಿವರ್ಷ ‌37 ಲಕ್ಷ ರೂಪಾಯಿ ಆದಾಯ ಬರಲಿದೆಯಂತೆ.

ಪ್ರಯಾಣಿಕರು ಏನಂತಾರೆ?

ಈ ಬಿಸಿಲಿನಲ್ಲಿ ಹೊರಗೆ ಕುಳಿತುಕೊಂಡು ಊಟ ಮಾಡಲು ತುಂಬಾ ಕಷ್ಟ ಆಗುತ್ತದೆ. ಈ ಧೂಳಿ‌ನಲ್ಲಿ ಊಟ ಮಾಡಲು ಆಗುವುದಿಲ್ಲ. ಯಾವುದೇ ದೊಡ್ಡ ರೆಸ್ಟೋರೆಂಟ್​​ಗೂ ಕಡಿಮೆ ಇಲ್ಲದಂತೆ ರೆಡಿ ಮಾಡಿದ್ದಾರೆ. ನಾನು ನಾರ್ಥ್ ಮೀಲ್ಸ್ ಆರ್ಡರ್ ಮಾಡಿದೆ. ರುಚಿ ತುಂಬಾ ಚೆನ್ನಾಗಿದೆ ಎಂದು ಮಾತಾನಾಡಿದ ಗ್ರಾಹಕ ಪರಮೇಶ್ ಎಂಬವರು ‘ಟಿವಿ9’ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ವಕೀಲರಿಗೆ ಕಪ್ಪು ಕೋಟಿನಿಂದ ತಾತ್ಕಾಲಿಕ ಮುಕ್ತಿ! ಕಾರಣ ಇಲ್ಲಿದೆ

ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ರಾಜಧಾನಿಯ ಬೇರೆ ಬೇರೆ ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ರೆಸ್ಟೋರೆಂಟ್ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್