AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಲ್​ಡೌನ್ ಏರಿಯಾದಲ್ಲಿ ಮೃತದೇಹದಿಂದ ಉಂಟಾಯ್ತು ದೊಡ್ಡ ಗಲಾಟೆ!

ಬೆಂಗಳೂರು: ಶಂಕರನಗರದಲ್ಲಿ ಸಾವೊಂದು ಆತಂಕ ಸೃಷ್ಟಿಸಿದೆ. ಸಾವಿನ ಮನೆ ಮುಂದೆ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿರುವ ಘಟನೆ ನಡೆದಿದೆ. ಶಂಕರನಗರ ಸೀಲ್​ಡೌನ್ ಆಗಿರುವ ಏರಿಯಾ. ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆದರೆ ಆ ಮನೆಯವರು ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡದೆ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಮುಂಬೈನಲ್ಲಿರುವ ಮಕ್ಕಳು ಬರಬೇಕೆಂದು ಮನೆಯಲ್ಲೇ ಮೃತದೇಹ ಇರಿಸಿಕೊಂಡಿದ್ರು. ಮೃತ ಮಹಿಳೆಯ ಮಕ್ಕಳು ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಂದ ಕೊರೊನಾ ಹರಡುವ ಭೀತಿ ಜನರಲ್ಲಿ ಹೆಚ್ಚಾಗಿದೆ. ಸಾವಿನ ಮನೆ ಮುಂದೆಯೇ ಅಕ್ಕಪಕ್ಕದ […]

ಸೀಲ್​ಡೌನ್ ಏರಿಯಾದಲ್ಲಿ ಮೃತದೇಹದಿಂದ ಉಂಟಾಯ್ತು ದೊಡ್ಡ ಗಲಾಟೆ!
ಆಯೇಷಾ ಬಾನು
|

Updated on:Jun 12, 2020 | 2:27 PM

Share

ಬೆಂಗಳೂರು: ಶಂಕರನಗರದಲ್ಲಿ ಸಾವೊಂದು ಆತಂಕ ಸೃಷ್ಟಿಸಿದೆ. ಸಾವಿನ ಮನೆ ಮುಂದೆ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿರುವ ಘಟನೆ ನಡೆದಿದೆ. ಶಂಕರನಗರ ಸೀಲ್​ಡೌನ್ ಆಗಿರುವ ಏರಿಯಾ. ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆದರೆ ಆ ಮನೆಯವರು ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡದೆ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಮುಂಬೈನಲ್ಲಿರುವ ಮಕ್ಕಳು ಬರಬೇಕೆಂದು ಮನೆಯಲ್ಲೇ ಮೃತದೇಹ ಇರಿಸಿಕೊಂಡಿದ್ರು.

ಮೃತ ಮಹಿಳೆಯ ಮಕ್ಕಳು ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಂದ ಕೊರೊನಾ ಹರಡುವ ಭೀತಿ ಜನರಲ್ಲಿ ಹೆಚ್ಚಾಗಿದೆ. ಸಾವಿನ ಮನೆ ಮುಂದೆಯೇ ಅಕ್ಕಪಕ್ಕದ ಮನೆಯವರು ಗಲಾಟೆ ಶುರು ಮಾಡಿದ್ದಾರೆ. ಕೊನೆಗೆ ಕುಟುಂಬಸ್ಥರು ಌಂಬುಲೆನ್ಸ್​ನಲ್ಲಿ ಶವ ಕೊಂಡೊಯ್ದಿದ್ದಾರೆ.

Published On - 1:26 pm, Fri, 12 June 20