AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ದರ್ಪ; ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ ಮ್ಯಾನೇಜರ್

ಕನ್ನಡಪರ ಸಂಘಟನೆಗಳು ಈ ವಿಷಯ ತಿಳಿಯುತ್ತಿದ್ದಂತೆ ರೆಸ್ಟೋರೆಂಟ್ ಮಾಲೀಕರನ್ನು ಸಂಪರ್ಕಿಸಿದ್ದು, ನಂತರ ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ‌ ಮಹಿಳೆಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್, ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.

ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ದರ್ಪ; ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ ಮ್ಯಾನೇಜರ್
ಮಹಿಳೆಯಿಂದ ಕನ್ನಡಪರ ಸಂಘಟನೆ ಡೆಲವರಿ ಬಾಯ್​ಗೆ ಕ್ಷಮಾಪಣೆ ಕೇಳಿಸಿದೆ
Follow us
TV9 Web
| Updated By: preethi shettigar

Updated on:Dec 24, 2021 | 9:53 AM

ಬೆಂಗಳೂರು: ಗ್ರಾಹಕರಿಗೆ ಫುಡ್ ಡೆಲಿವರಿ ತಡವಾಗುತ್ತಿದೆ ಎಂದು ಕೇಳಿದ ಹಿನ್ನೆಲೆ ಡೆಲಿವರಿ ಬಾಯ್ (Delivery Boy) ಕತ್ತು ಹಿಡಿದು ರೆಸ್ಟೋರೆಂಟ್​ನ ಮಹಿಳಾ ಸಿಬ್ಬಂದಿ ತಳ್ಳಿದ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್​ನಲ್ಲಿ ನಡೆದಿದೆ. ಗ್ರಾಹಕರು ಆರ್ಡರ್ ಮಾಡಿದ್ದ ಊಟ ಪಡೆಯಲು ಸಂಜಯ್ ಎಂಬ ಡೆಲಿವರಿ ಬಾಯ್ ರೆಸ್ಟೋರೆಂಟ್​ಗೆ ಬಂದಿದ್ದ, ಫುಡ್ ಪ್ಯಾಕೆಟ್ ಕೊಡಲು ತಡವಾದ ಹಿನ್ನಲೆ ಸಂಜಯ್ ಪ್ರಶ್ನಿಸಿದ್ದ. ಇಷ್ಟಕ್ಕೆ ಸಿಟ್ಟಾದ ಮಹಿಳಾ ಸಿಬ್ಬಂದಿ, ಸಂಜಯ್​ ಕುತ್ತಿಗೆ ಹಿಡಿದು ಹೊರ ದಬ್ಬಿದ್ದಾರೆ.

ದರ್ಪ ತೋರಿದ ಮಹಿಳಾ ಸಿಬ್ಬಂದಿಯ ವಿರುದ್ಧ ಕ್ರಮ ಕನ್ನಡಪರ ಸಂಘಟನೆಗಳು ಈ ವಿಷಯ ತಿಳಿಯುತ್ತಿದ್ದಂತೆ ರೆಸ್ಟೋರೆಂಟ್ ಮಾಲೀಕರನ್ನು ಸಂಪರ್ಕಿಸಿದ್ದು, ನಂತರ ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ‌ ಮಹಿಳೆಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್, ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಂತರ ಮಹಿಳೆಯಿಂದ ಕನ್ನಡಪರ ಸಂಘಟನೆ ಕ್ಷಮಾಪಣೆ ಕೇಳಿಸಿದೆ. ಜತೆಗೆ ಡೆಲಿವರಿ‌ ಬಾಯ್​ಗೆ ಒಂದು ದಿನದ ಸಂಬಳ‌ವನ್ನು ಕನ್ನಡಪರ ಸಂಘಟನೆಗಳು ಕೊಡಿಸಿವೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಳ್ಳಾರಿ: ತಾಯಿ-ಮಗಳ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ ಸೂಪರ್ ಮಾರ್ಕೆಟ್​ನಲ್ಲಿ ವಸ್ತುಗಳ ಖರೀದಿ ನೆಪದಲ್ಲಿ ತಾಯಿ-ಮಗಳು ತಮ್ಮ ಕೈ ಚಳಕ ತೋರಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳ್ಳಾರಿ ಸೂಪರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ತಾಯಿ ಮಗಳು ಕಳ್ಳತನ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ತಾಯಿ-ಮಗಳು ಅಂಗಡಿ ತುಂಬೆಲ್ಲಾ ಸುತ್ತಾಡಿ ವಸ್ತುಗಳ ಕಳ್ಳತನ ಮಾಡಿ ಬಟ್ಟೆಯೊಳಗೆ ಇಟ್ಟುಕೊಂಡು ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ತುಮಕೂರು: ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ಆರೋಪ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾ.ಪಂ.ನ ಮಾಳಗೊಂಡನಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಭೂಮಿಕಾ, ರಮೇಶ್‌ಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗ್ರಾಮದಲ್ಲಿ ವಾರ್ಡ್ ಸಭೆ ನಡೆಯುವ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ಭೂಮಿಕಾ ಮತ್ತು ಆಕೆಯ ಪತಿ ರಮೇಶ್‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಗ್ರಾಮದ ವೆಂಕಟೇಶಪ್ಪ, ರಾಮಚಂದ್ರಪ್ಪ, ವೆಂಕಟರವಣಪ್ಪ, ಇಂದ್ರಕುಮಾರ್, ದುರ್ಗಪ್ಪ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಅಲ್ಲದೆ ಠಾಣೆಗೆ ದೂರು ನೀಡಿದ್ರೂ ಕ್ರಮಕೈಗೊಳ್ಳುತ್ತಿಲ್ಲವೆಂದು ಮಿಡಿಗೇಶಿ ಠಾಣೆಯ ಪೊಲೀಸರ ವಿರುದ್ಧ ಭೂಮಿಕಾ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:

ಆನ್​ಲೈನ್​ನಲ್ಲಿ ನೀವು ಆರ್ಡರ್ ಮಾಡುವ ಪದಾರ್ಥಗಳನ್ನು ಜಿಪ್ ಎಲೆಕ್ಟ್ರಿಕ್ ಡೆಲಿವರಿ ಬಾಯ್​ಗಳು ಮನೆಗೆ ತಂದರೆ ಆಶ್ಚರ್ಯಪಡಬೇಡಿ!

Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ

Published On - 8:52 am, Fri, 24 December 21