AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಗೆ ಬೈದಿದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ ಇಟ್ಟು ಮನಸೋ ಇಚ್ಚೆ ಹಲ್ಲೆ ನಡೆಸಿದ ಬೋರ್ ವೆಲ್ ಮಾಲೀಕ ಮತ್ತು ಗ್ಯಾಂಗ್

ಆಫೀಸ್ ನಲ್ಲೆ ಹಲ್ಲೆ ಮಾಡಿದ್ದು ಸಾಲದು ಅಂತ ರಸ್ತೆಗೆ ಎಳೆತಂದು ಅನಿಲ‌ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಇನ್ನು ಅನಿಲನ ಮೇಲೆ‌ ಈ ರೀತಿ ಆರೋಪ ಕೇಳಿ ಬರ್ತಿರೋದು ಇದೆ ಮೊದಲಲ್ಲ.

ತಾಯಿಗೆ ಬೈದಿದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ ಇಟ್ಟು ಮನಸೋ ಇಚ್ಚೆ ಹಲ್ಲೆ ನಡೆಸಿದ ಬೋರ್ ವೆಲ್ ಮಾಲೀಕ ಮತ್ತು ಗ್ಯಾಂಗ್
ಬೋರ್ ವೆಲ್ ಮಾಲೀಕ ಅನಿಲ್
TV9 Web
| Updated By: ಆಯೇಷಾ ಬಾನು|

Updated on:Nov 02, 2022 | 2:41 PM

Share

ಬೆಂಗಳೂರು: ತನ್ನ ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ ಇಟ್ಟು ನಡು ರಸ್ತೆಯಲ್ಲಿ ಹಾಡಹಗಲೇ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಯಲ್ ಬೋರ್ ವೆಲ್ ಮಾಲೀಕ ಅನಿಲ ಮತ್ತು ಆತನ ಗ್ಯಾಂಗ್ ಮಾರಾಕಸ್ತ್ರಗಳಿಂದ ಹಲ್ಲೆ ನಡೆಸಿ ನಾನ್ ಯಾರು ಗೊತ್ತಾ? ನನ್ನ ತಂಟೆಗೆ ಬಂದ್ರೆ ಸುಟ್ಟು ಬಿಡ್ತೀನಿ ಅಂತ ಗನ್ ಇಟ್ಟು ಅವಾಜ್ ಹಾಕಿದ್ದಾರೆ. ಅಣ್ಣ ತಮ್ಮನಿಗೆ ಹಣೆ ಮತ್ತು ಬಾಯಿಗೆ ಗನ್ ಇಟ್ಟು ದರ್ಪ ಮೆರೆದಿದ್ದಾರೆ. ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರದರಾಜು ಮತ್ತು ಚಂದನ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಅನಿಲ್ ಮತ್ತು ಭರತ್ ಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ.

ಬೆಂಗಳೂರಿನ ಮುದ್ದಯ್ಯನಪಾಳ್ಯ ಮುಖ್ಯರಸ್ತೆಯಲ್ಲಿ ರಾಯಲ್ ಬೋರ್ ವೆಲ್ ಮಾಲೀಕ ಅನಿಲನ ಆರ್ಭಟ ನೋಡಿ ಏರಿಯ ಜನ‌ ಕಂಗಾಲಾಗಿದ್ದಾರೆ. ಬಾಡಿಗೆ ಮನೆ ಖಾಲಿ ಮಾಡೋ ವಿಚಾರಕ್ಕೆ ಮಹಿಳೆ ಜೊತೆ ಅನಿಲನ ಭಾಮೈದ ಕಿರಿಕ್‌ ಮಾಡಿಕೊಂಡಿದ್ದ. ಹೀಗಾಗಿ ತನ್ನ ತಾಯಿಗೆ ಬೈದಿದ್ದನ್ನ ಪ್ರಶ್ನಿಸಿ ಕೌಶಿಕ್ ಎಂಬಾತ ಫೋನ್ ನಲ್ಲಿ ಮಾತನಾಡಿದ್ದ. ಈ ವೇಳೆ ಮಾತುಕತೆಗೆ ಅಂತ ಅನಿಲ‌ನ ಬೋರ್ ವೆಲ್ ಆಫೀಸ್ ಗೆ ಕೌಶಿಕ್ ಮತ್ತು ತಮ್ಮ ನಂದನ್ ಬಂದಿದ್ದರು. ಈ ವೇಳೆ ನಾವ್ಯಾರು ಅಂತ ಗೊತ್ತಿಲ್ಲದೆ ಮಾತಾಡ್ತಿಯಾ ಆಫೀಸ್ ಗೆ ಬರೋವಷ್ಟು ಧಮ್ ಇದ್ಯಾ ಎಂದು ಹಲ್ಲೆ ಮಾಡಿದ್ದಾರೆ. ಅನಿಲ, ಭರತ್ ಮತ್ತು ಆತನ ಪುಂಡ ಪಟಾಲಂ‌ ನಿಂದ ಕೌಶಿಕ್ ಹಾಗೂ ನಂದನ್ ಮೇಲೆ ಹಲ್ಲೆ ನಡೆದಿದೆ.

ಇದನ್ನೂ ಓದಿ: Bull race: ಡೇಂಜರ್-ಡೇಂಜರ್, ಹೋರಿ ಬೆದರಿಸುವ ಸ್ಪರ್ಧೆ ನೋಡಲು ಬಂದ 3 ಪ್ರೇಕ್ಷಕರು ಬಲಿ, ಇನ್ನೂ ಸಂಕ್ರಾಂತಿವರೆಗೆ ನಡೆಯುತ್ತೆ ಈ ಆಟ

ಆಫೀಸ್ ನಲ್ಲೆ ಹಲ್ಲೆ ಮಾಡಿದ್ದು ಸಾಲದು ಅಂತ ರಸ್ತೆಗೆ ಎಳೆತಂದು ಅನಿಲ‌ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಇನ್ನು ಅನಿಲನ ಮೇಲೆ‌ ಈ ರೀತಿ ಆರೋಪ ಕೇಳಿ ಬರ್ತಿರೋದು ಇದೆ ಮೊದಲಲ್ಲ. ಈ ಹಿಂದೆ ಕೂಡ ಸರ್ವಿಸ್ ಗನ್ ನಿಂದ ಏರ್ ಫೈರ್ ಮಾಡಿ ಠಾಣೆ ಮೆಟ್ಟಿಲೇರಿದ್ದ. ಸದ್ಯ ಅನಿಲ‌ ಮತ್ತು ಆತನ ಗ್ಯಾಂಗ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕೊಲೆಯತ್ನ ಸೇರಿದಂತೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಫ್​ಐಆರ್ ಆಗ್ತಿದ್ದಂತೆ ಪೊಲೀಸರಿಗೆ ಹೆದರಿ ಅನಿಲ ತಲೆ ಮರೆಸಿಕೊಂಡಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅನಿಲನನ್ನ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

Published On - 2:41 pm, Wed, 2 November 22

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್