AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್

ಖದೀಮರ ಗ್ಯಾಂಗ್ವೊಂದು ಇಂದಿರಾನಗರದಿಂದ ಕದ್ದ ಬೈಕ್ನಲ್ಲಿ ಬಂದು ದೊಡ್ಡ ಏರಿಯಾದಲ್ಲಿ ದೊಡ್ಡ ಶಾಪ್ಗೆ ಎಂಟ್ರಿ ಕೊಟ್ಟು ಲಕ್ಷ ಲಕ್ಷ ಹಣ ಲೂಟಿ ಮಾಡುವ ಕನಸು ಕಂಡಿದ್ದರು. ಆದ್ರೆ ಒಂದು ಗಂಟೆಗಳ ಕಾಲ ಎಷ್ಟೇ ಹರಸಾಹಸ ಮಾಡಿದರೂ ಲಾಕರ್ ತೆರಯಲಾಗದೆ ಪರದಾಡಿದ್ದಾರೆ.

ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್
ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್
TV9 Web
| Edited By: |

Updated on: Apr 05, 2022 | 9:44 AM

Share

ಬೆಂಗಳೂರು: ಮಾಜಿ ಸಿಎಂ ಮನೆ ಪಕ್ಕದಲ್ಲೇ ಕಳ್ಳತನ ಯತ್ನ ನಡೆದಿದ್ದು ಲಾಕರ್ನಲ್ಲಿದ್ದ ಲಕ್ಷ ಲಕ್ಷ ಹಣ ಕಳ್ಳತನಕ್ಕೆ ಯತ್ನಿಸಿ ಲಾಕರ್ ಓಪನ್ ಮಾಡಲಾಗದೆ ಕಳ್ಳರು ಹರಸಾಹಸಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೀಸೆ ಚಿಗುರುವ ವಯಸ್ಸಿನ ಕದೀಮರು ಲಾಕರ್ ತೆರೆಯಲು ಪರದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖದೀಮರ ಗ್ಯಾಂಗ್ವೊಂದು ಇಂದಿರಾನಗರದಿಂದ ಕದ್ದ ಬೈಕ್ನಲ್ಲಿ ಬಂದು ದೊಡ್ಡ ಏರಿಯಾದಲ್ಲಿ ದೊಡ್ಡ ಶಾಪ್ಗೆ ಎಂಟ್ರಿ ಕೊಟ್ಟು ಲಕ್ಷ ಲಕ್ಷ ಹಣ ಲೂಟಿ ಮಾಡುವ ಕನಸು ಕಂಡಿದ್ದರು. ಆದ್ರೆ ಒಂದು ಗಂಟೆಗಳ ಕಾಲ ಎಷ್ಟೇ ಹರಸಾಹಸ ಮಾಡಿದರೂ ಲಾಕರ್ ತೆರಯಲಾಗದೆ ಪರದಾಡಿದ್ದಾರೆ. ಒಂದೇ ರಾತ್ರಿ ಸರಣಿಗಳ್ಳತನ ಯತ್ನ ಮಾಡಿದ್ದಾರೆ. ಬೆಂಗಳೂರಿನ ಸಂಜಯ್ ನಗರದಲ್ಲಿ ಒಂದಲ್ಲಾ.. ಎರಡಲ್ಲಾ.. ಸತತ ಮೂರು ಅಂಗಡಿಗಳನ್ನು ದೋಚುವ ಯತ್ನ ಮಾಡಿದ ಖದೀಮರು ಕೈಗೆ ಚಿಕ್ಕ ಪುಡಿಕಾಸು, ವಸ್ತುಗಳನ್ನು ಕದ್ದಿದ್ದಾರೆ.

ಮೊದಲಿಗೆ ಸಂಜಯ್ ನಗರದ ಎರಡು ಅಂಗಡಿಯಲ್ಲಿ ನಡೆಸಿದ ಕಳ್ಳತನ ಪ್ರಯತ್ನ ವಿಫಲವಾಗಿದೆ. ಆದ್ರೆ ಆರ್ ಎಂವಿ 2ನೇ ಸ್ಟೇಜ್ನ ಅಂಗಡಿ ಓಪನ್ ಆಗಿದ್ದು ಲಾಕರ್ ಓಪನ್ ಮಾಡಲು ಆಗದೇ ಈ ಕಳ್ಳರ ಗ್ಯಾಂಗ್ ತಡಕಾಡಿದೆ. ಮಿಡ್ ನೈಟ್ ನಲ್ಲಿ ಕಳ್ಳರ ಪರದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ನಿಮಿಷಗಳ ಕಾಲ ತಡಕಾಡಿ ಕೊನೆಗೆ ಚಿಲ್ಲರೆ ಇದ್ದ ಬಾಕ್ಸ್ ಹಾಗೂ ಚಾಕ್ಲೆಟ್ ಕದ್ದಿದ್ದಾರೆ. ಚಾಕ್ಲೆಟ್ ತಿನ್ನುತ ಧನಸಹಾಯದ ಚಿಕ್ಕ ಬಾಕ್ಸ್ ಕದ್ದು ಹೋಗ ಕಳ್ಳರ ಗ್ಯಾಂಗ್ನ ದೃಶ್ಯಗಳು ಸೆರೆಯಾಗಿವೆ. ಮರುದಿನ ಅಂಗಡಿ ಮಾಲೀಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ದೂರು ದಾಖಲಾದ ನಂತರ ತನಿಖೆ ಕೈಗೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ರೋಹಿತ್ ಗಿರಿ (21) ಬಂಧಿತ ಆರೋಪಿ. ಈ ಹಿಂದೆ ಜೈಲು ಸೇರಿ ಬಂದರು ಬುದ್ಧಿ ಕಲಿಯದ ಕಿಲಾಡಿ. ಸಿಗರೇಟಿನ ಶೋಕಿಗಾಗಿ ಅಂಗಡಿಗೆ ಕನ್ನ ಹಾಕಲು ಹೋಗಿ ಪೊಲೀಸರ ಕೈಗಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆ ಸಾಥ್ ನೀಡಿದ್ದ ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ದೇಹದಲ್ಲಿರುವ ನಂಜಿನಾಂಶವನ್ನು ಹೊರಹಾಕಲು ಈ ಆಹಾರವನ್ನು ಸೇವಿಸಿ

ಚಕಾ ಚಕ್ ಹಾಡಿಗೆ ಪುಟ್ಟ ಪೋರಿಯ ಮುದ್ದಾದ ಡ್ಯಾನ್ಸ್​; ಕ್ಯೂಟಿ, ಹಾಟಿ, ಸ್ವೀಟಿ ಎಂದ ನೆಟ್ಟಿಗರು

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ