AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲಿ ಸೀರೆ ಕಳ್ಳಿಯರು; ಪ್ರತಿಷ್ಟಿತ ಶೋರೂಂಗಳಲ್ಲಿ ಸೀರೆ ಕದ್ದು ಮಾರಾಟ‌

ಇವರೇ ಬೇರೆ, ಇವರ ಬ್ಯುಸಿನೆಸ್ ಕೂಡ​ ಬೇರೆ. ದುಬಾರಿ ಬೆಲೆಯ ಸೀರೆ ಕಂಡರೆ ಇವರಿಗೆ ಅದೇನೋ ಸಂತಸ. ಅದರಲ್ಲೂ ದೊಡ್ಡ ದೊಡ್ಡ ಶೋರೂಂಗಳನ್ನೆ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ಸೀರೆ ಕದ್ದು ಚಮಕ್ ಕಿಮಕ್ ಅನ್ನದೇ ಬರುತ್ತಿದ್ದರು. ಹೀಗೆ ಸೀರೆ ಕದಿಯುತ್ತಿದ್ದ ಗ್ಯಾಂಗ್​ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸಿಲಿಕಾನ್ ಸಿಟಿಯಲ್ಲಿ ಸೀರೆ ಕಳ್ಳಿಯರು; ಪ್ರತಿಷ್ಟಿತ ಶೋರೂಂಗಳಲ್ಲಿ ಸೀರೆ ಕದ್ದು ಮಾರಾಟ‌
ಬಂಧಿತ ಸೀರೆ ಕಳ್ಳಿಯರು
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 03, 2024 | 10:19 PM

Share

ಬೆಂಗಳೂರು, ಸೆ.03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೀರೆ ಕದಿಯುವ ನಾರಿಯರ ಗ್ಯಾಂಗ್​ವೊಂದು ಪ್ರತ್ಯಕ್ಷವಾಗಿದೆ. ಕಲರ್ ಪುಲ್ ಡ್ರೆಸ್, ಒಳ್ಳೆ ಮೇಕಪ್ ಮಾಡಿಕೊಂಡು ದೊಡ್ಡ ದೊಡ್ಡ ಶೋರೂಂಗಳಿಗೆ ಎಂಟ್ರಿ ಕೊಡುವ ಈ ಗ್ಯಾಂಗ್, ದುಬಾರಿ ಬೆಲೆಯ ಸೀರೆ ಕದ್ದು, ಎಸ್ಕೇಪ್ ಆಗುತ್ತಾರೆ. ಹೀಗೆ ನಗರದ ಪ್ರತಿಷ್ಟಿತ ಸೀರೆ ಶೋರೂಂಗಳಲ್ಲಿ ಕೈಚಳಕ ತೋರಿದ್ದ ನಾಲ್ವರು ಸೀರೆ ಕಳ್ಳಿಯರನ್ನು ಜೆ ಪಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆಂಧ್ರಪ್ರದೇಶ ಮೂಲದ ಪೊನ್ನೂರು ಮಲ್ಲಿ, ವೆಂಕಟೇಶ್ವರಮ್ಮ, ಮಧುಗನಿ ಜಾನಕಿ ಹಾಗೂ ಮೇಧ ರಜನಿ ಬಂಧಿತ ಮಹಿಳೆಯರು. ಈ ಗ್ಯಾಂಗ್ ಆಗಾಗ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಿಗೆ ಸೀರೆ ಖರೀದಿಗೆ ಶಾಪಿಂಗ್ ಹೋಗುತ್ತಿದ್ದರು. ಹೆಸರಾಂತ ಬಟ್ಟೆ ಅಂಗಡಿಗಳನ್ನೆ ಸೆಲೆಕ್ಟ್ ಮಾಡಿಕೊಂಡು ಶಾಪಿಂಗ್ ಮಾಡುತ್ತಿದ್ದ ಈ ಮಹಿಳೆಯರು, ದುಬಾರಿ ಬೆಲೆಯ ಸೀರೆಗಳನ್ನ ತೆಗೆಸಿ ವ್ಯಾಪಾರ ಮಾಡುವ ಸೋಗಿನಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಸೈಲೆಂಟಾಗಿ ಒಂದೊಂದೆ ಸ್ಯಾರಿಯನ್ನ ಬಟ್ಟೆ ಒಳಗೆ ಅಡಗಿಸಿಟ್ಟುಕೊಂಡು ಅಲ್ಲಿಂದ ಒಬ್ಬರ ಹಿಂದೆ ಒಬ್ಬರು ಪರಾರಿ ಆಗುತ್ತಿದ್ದರು.

ಇದನ್ನೂ ಓದಿ:ಮೈಸೂರು: ಕಲಾವಿದನ ಮನೆ ಮುಂದಿದ್ದ ಗಣೇಶನ ಮೂರ್ತಿ ಲಪಟಾಯಿಸಿದ ಕಳ್ಳರು!

ಬಂಧಿತ ಮಹಿಳೆಯರಿಂದ 17.5 ಲಕ್ಷ ಮೌಲ್ಯದ 38 ಸೀರೆಗಳು ವಶಕ್ಕೆ

ಇದೇ ರೀತಿ ಜೆಪಿ ನಗರದ ಪ್ರತಿಷ್ಟಿತ ಬಟ್ಟೆ ಅಂಗಡಿಗೆ ಶಾಪಿಂಗ್ ಹೋಗಿದ್ದ ಈ ಮಹಿಳೆಯರು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನ ಕದ್ದು ಬಂದಿದ್ದರಂತೆ. ಈ ಬಗ್ಗೆ ಜೆ ಪಿ ನಗರ ಪೊಲೀಸರು ಕೇಸ್ ದಾಖಲಿಸಿ ಈ ನಾಲ್ವರು ಸೀರೆ ಕಳ್ಳಿಯರನ್ನ ಬಂಧಿಸಿದ್ದಾರೆ. ಇನ್ನು ಬಂಧಿತ ಮಹಿಳೆಯರು ಕಡಿಮೆ ಬೆಲೆಯ ಸೀರೆಗಳನ್ನ ಮುಟ್ಟುತ್ತಿರಲಿಲ್ಲ. ತಾವು ಶ್ರೀಮಂತ ವ್ಯಕ್ತಿಗಳು ಎಂದು ಪೋಸ್ ಕೊಟ್ಕೊಂಡು ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನೆ ನೋಡಿ ಕದಿಯುತ್ತಿದ್ದರಂತೆ. ಸದ್ಯ ಬಂಧಿತ ನಾಲ್ವರು ಮಹಿಳೆಯರಿಂದ ಸುಮಾರು 17.5 ಲಕ್ಷ ಮೌಲ್ಯದ 38 ಸೀರೆಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್