AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬೀದಿ ದನಗಳ ಹಾವಳಿ; ವಾಹನ ಸವಾರರು ಹೈರಾಣ, ಪಾಲಿಕೆ ವಿರುದ್ಧ ಆಕ್ರೋಶ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರು ‌ಟ್ರಾಫಿಕ್‌. ಇನ್ನೂ ಟ್ರಾಫಿಕ್‌ ಸಮಸ್ಯೆ‌ ಒಂದಡೆಯಾದರೆ ಮತ್ತೊಂದೆಡೆ ಬೀದಿ ದನಗಳ ಹಾವಳಿ. ಒಂದಲ್ಲ ಎರಡಲ್ಲ ನಾಲ್ಕೈದು ದನಗಳು ಗುಂಪು ಕಟ್ಟಿಕೊಂಡು ಓಡಾಡೊ ದನಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಹೈರಾಣಾಗಿದ್ದಾರೆ.

ಬೆಂಗಳೂರಿನಲ್ಲಿ ಬೀದಿ ದನಗಳ ಹಾವಳಿ; ವಾಹನ ಸವಾರರು ಹೈರಾಣ, ಪಾಲಿಕೆ ವಿರುದ್ಧ ಆಕ್ರೋಶ
ಬೆಂಗಳೂರಿನಲ್ಲಿ ಬೀದಿ ದನಗಳ ಹಾವಳಿ
Vinayak Hanamant Gurav
| Edited By: |

Updated on: Jul 14, 2024 | 9:22 AM

Share

ಬೆಂಗಳೂರು, ಜುಲೈ.14: ಸಿಲಿಕಾನ್‌ ಸಿಟಿ‌ ಬೆಂಗಳೂರಿನಲ್ಲಿ‌ (Bengaluru) ಬೀದಿ ದನಗಳ ಉಪಟಳ ಮಿತಿ ಮೀರಿದೆ. ಅದರಲ್ಲೂ ಬನಶಂಕರಿಯಿಂದ ತಲಘಟ್ಟಪುರದ ಕನಕಪುರ ಮುಖ್ಯ ರಸ್ತೆಯಲ್ಲಿ ಓಡಾಡಬೇಕೆಂದರೆ ಜೀವ ಕೈಯಲ್ಲೆ ಹಿಡಿದು ಓಡಾಡಬೇಕು. ರಸ್ತೆಯ ಮಧ್ಯದಲ್ಲಿ ರಾಜರೋಷವಾಗಿ ಓಡಾಡೊ‌ ಸ್ಟ್ರೀಟ್ ಬುಲ್ಸ್​ಗಳಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ.

ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದಾರೆ. ಲಂಗು, ಲಗಾಮು ಇಲ್ಲದೇ ದನಗಳನ್ನ ಮಾಲೀಕರುಗಳು ಬೀದಿಗೆ ಬಿಟ್ಟು ಬಿಡ್ತಾರೆ. ಇದರಿಂದ ದನಗಳು ಆಹಾರ ಅರಿಸಿ ಮಾರ್ಕೆಟ್ ಏರಿಯಾ, ಸಾರ್ವಜನಿಕರು ಕಸ ಎಸೆಯುವಂತಹ ಪ್ರದೇಶಗಳಲ್ಲಿ ಓಡಾಡುವುದರಿಂದಾಗಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅವುಗಳನ್ನ ಓಡಿಸೊದಕ್ಕೆ ಹೋದರೆ ಗುಮ್ಮೊದಕ್ಕೆ ಬರುತ್ತವೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡೊಕೆ ಕಷ್ಟವಾಗುತ್ತೆ ಹೀಗಾಗಿ ಬೀದಿ ದನಗಳ‌ನ್ನ ಕಂಟ್ರೋಲ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ. Street Cattle in Bangalore; Motorists are outraged against the bbmp kannada news

ಇದನ್ನೂ ಓದಿ: ಪೋಷಕರೇ ಎಚ್ಚರ: ಕರ್ನಾಟಕದಲ್ಲಿ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ ಡೆಂಗ್ಯೂ!

ಇನ್ನೂ ಟಿವಿ9 ಕ್ಯಾಮಾರಾ ತಗೆದು ಶೂಟ್ ಮಾಡುವಾಗ ಸ್ಟ್ರೀಟ್ ಬುಲ್ಸ್ ಮೈ ಮೇಲೆ ಎಗರಿ ಅಟ್ಯಾಕ್ ಮಾಡೋ ದೃಶ್ಯ ಸೆರೆಯಾಗಿದೆ. ಅಲ್ಲದೇ ಮೆಟ್ರೊ ನಿಲ್ದಾಣ ಕೆಳಗಡೆ ನಿಲ್ಲೋ ಕಪ್ಪು ಹಸುಗಳಿಂದಾಗಿ ಬೆಳಕಿನಿಂದ ನಿಲ್ದಾಣ ಕೆಳಗೆ ಬಂದ್ರೆ ಹಸುಗಳು ಕಾಣದೇ ಅಪಘಾತ ಸಂಭವಿಸುತ್ತಿವೆ. ಸಾಕಷ್ಟು ಬಾರಿ ಬೀದಿ ದನಗಳ ಕಂಟ್ರೋಲ್‌ಗೆ ಮನವಿ ಮಾಡಿದ್ರು ತಲೆಕೆಡಿಸಿಕೊಳ್ಳದ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದು, ಬೀದಿಗೆ ದನಗಳ‌ನ್ನ ಬಿಡೋ ಮಾಲೀಕರುಗಳಿಗೆ ದಂಡದ ಬೀಸಿ ಮುಟ್ಟಿಸೋ ಮೂಲಕ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಈ ಸ್ಟ್ರೀಟ್ ಬುಲ್ಸ್‌ಗಳಿಂದಾಗಿ‌ ರಾಜಧಾನಿ ಮಂದಿ ರಸ್ತೆ ಮೇಲೆ ಓಡಾಡಲು ಭಯ ಪಡುವಂತಾಗಿದ್ದು, ಇನ್ನಾದರು ಪಾಲಿಕೆ ಎಚ್ಚೆತ್ತುಕೊಂಡು ಈ ಬೀದಿ ದನಗಳ ಉಪಟಳಕ್ಕೆ ಹೇಗೆ ಕಡಿವಾಣ ಹಾಕುತ್ತೆ ಅಂತ ಕಾದು ನೋಡಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?