AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Encroachment: ರಾಜಕಾಲುವೆ ಒತ್ತುವರಿ ಒಪ್ಪಿಕೊಂಡ ಟೆಕ್​ಪಾರ್ಕ್​; ತಪ್ಪಿಗೆ ಕಂಪನಿ ಕೊಟ್ಟ ಸಮರ್ಥನೆ ಹೀಗಿದೆ

ಬೆಂಗಳೂರಿನ ಪ್ರಸಿದ್ಧ ಡೆವಲಪರ್ ಬಾಗ್ಮನೆ ಗ್ರೂಪ್ ಅಭಿವೃದ್ಧಿಪಡಿಸಿರುವ ‘ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್’ ಮಳೆನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಿದ 15 ದೊಡ್ಡ ಹೆಸರುಗಳಲ್ಲಿ ಒಂದಾಗಿದೆ.

Encroachment: ರಾಜಕಾಲುವೆ ಒತ್ತುವರಿ ಒಪ್ಪಿಕೊಂಡ ಟೆಕ್​ಪಾರ್ಕ್​; ತಪ್ಪಿಗೆ ಕಂಪನಿ ಕೊಟ್ಟ ಸಮರ್ಥನೆ ಹೀಗಿದೆ
ಮಳೆ
TV9 Web
| Edited By: |

Updated on:Sep 15, 2022 | 6:42 AM

Share

ಬೆಂಗಳೂರು: ಪೂರ್ವ ಬೆಂಗಳೂರಿನಲ್ಲಿರುವ ಟೆಕ್ ಪಾರ್ಕ್​ ಒಂದು ಮಳೆನೀರು ಹರಿಯುವ ರಾಜಕಾಲುವೆ ಅತಿಕ್ರಮಿಸಿರುವುದನ್ನು ಒಪ್ಪಿಕೊಂಡಿದೆ. ಆದರೆ ತನ್ನ ಕೃತ್ಯಕ್ಕೆ ಪುರವಂಕರ (Purvankara) ರಿಯಲ್ ಎಸ್ಟೇಟ್ ಕಂಪನಿಯು ನಿರ್ಮಿಸಿರುವ ಪುರ್ವಾ ಪಾರ್ಕ್​ ರಿಡ್ಜ್​ (Purva Parkridge) ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಎನ್​ಡಿಟಿವಿ ಜಾಲತಾಣವು ವಿಶೇಷ ವರದಿಯನ್ನು ಪ್ರಕಟಿಸಿದೆ. ನಗರದ ಪ್ರಸಿದ್ಧ ಡೆವಲಪರ್ ಬಾಗ್ಮನೆ ಗ್ರೂಪ್ ಅಭಿವೃದ್ಧಿಪಡಿಸಿರುವ ‘ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್’ (The Bagmane World Technology Centre) ಮಳೆನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಿದ 15 ದೊಡ್ಡ ಹೆಸರುಗಳಲ್ಲಿ ಒಂದಾಗಿದೆ. ಕಳೆದ ವಾರ ನಗರದ ಕೆಲವು ಭಾಗಗಳಲ್ಲಿ ಗಂಭೀರ ಪ್ರವಾಹಕ್ಕೆ ಕಾರಣವಾದ ಅಂಶಗಳಲ್ಲಿ ಈ ಅತಿಕ್ರಮಣವೂ ಒಂದು. ಇದರ ಜೊತೆಗೆ ಪಕ್ಕದ ಉಬರ್-ರಿಚ್ ಪುರವಂಕರ ಪುರ್ವಾ ರಿಡ್ಜ್ ಪ್ರದೇಶದ ಎರಡು ವಿಲ್ಲಾಗಳನ್ನು ರಾಜಕಾಲುವೆಗಳನ್ನು ಅತಿಕ್ರಮಿಸಿ ಕಟ್ಟಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಇದೇ ಪ್ರದೇಶದಲ್ಲಿ ನಿನ್ನೆ (ಸೆ 14) ಬಿಬಿಎಂಪಿ ಎರಡನೇ ಸಮೀಕ್ಷೆ ನಡೆಸಿತು.

ಪೂರ್ವ ಬೆಂಗಳೂರಿನ ಐಟಿ ಕಾರಿಡಾರ್​ಗೆ ಹೊಂದಿಕೊಂಡಂತೆ ಇರುವ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದು. ಇಲ್ಲಿ ಮಳೆನೀರು ಹರಿಯುವ ಕಾಲುವೆಗಳನ್ನು 2.4 ಮೀಟರ್​ಗಳಷ್ಟು (7.8 ಅಡಿ) ಅತಿಕ್ರಮಣ ಮಾಡಿರುವುದು ಬೆಳಕಿಗೆ ಬಂತು. ‘ಹೌದು, ನಾವು ಮಳೆನೀರು ಚರಂಡಿಯನ್ನು ಸ್ಲ್ಯಾಬ್​ಗಳಿಂದ ಮುಚ್ಚಿದ್ದೇವೆ’ ಎಂಬ ಬಾಗ್ಮನೆಯ ಜನರಲ್ ಮ್ಯಾನೇಜರ್ ಜಿ.ಪಿ.ಚಕ್ರವರ್ತಿ ಅವರ ಹೇಳಿಕೆಯನ್ನು ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ. ಇದೇ ಟೆಕ್ ಪಾರ್ಕ್​ನಲ್ಲಿ ಬೋಯಿಂಗ್, ಅಕ್ಸೆಂಚರ್, ಇವೈ, ಡೆಲ್ ಮತ್ತು ಎರಿಕ್ಸನ್​ನಂಥ ದೊಡ್ಡ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

‘ಮಹದೇವಪುರ ಕೆರೆಯ ಹಿನ್ನೀರು ಟೆಕ್​ಪಾರ್ಟ್​ಗೆ ಹರಿಯುವುದನ್ನು ನಿಲ್ಲಿಸಲು ಹೀಗೆ ಮಾಡಬೇಕಾಯಿತು. ಆದರೆ ಈ ಪ್ರಕರಣದ ಮುಖ್ಯ ದೋಷಿ ಪುರವಂಕರ ನಿರ್ಮಿಸಿರುವ ಪೂರ್ವ ರಿಡ್ಜ್ ವಿಲ್ಲಾಗಳು. ಅವರು ಮಳೆನೀರು ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ’ ಎಂದು ಚಕ್ರವರ್ತಿ ತಿಳಿಸಿದರು. ಪುರವಂಕರ ಪೂರ್ವಾ ಪಾರ್ಕ್ ​ರಿಡ್ಜ್​ನಲ್ಲಿ ಮೂರರಿಂದ ನಾಲ್ಕು ಬೆಡ್​ರೂಮ್ ಇರುವ 149 ವಿಲ್ಲಾಗಳಿವೆ. ಈ ಪೈಕಿ ಟೆಕ್ ಪಾರ್ಕ್​ನ ಗಡಿ ಗೋಡೆಗೆ ಅಡ್ಡಲಾಗಿ ಇರುವ ಎರಡು ವಿಲ್ಲಾಗಳು ಸುಮಾರು 2.5 ಮೀಟರ್​ಗಳಷ್ಟು ಚರಂಡಿಗಳನ್ನು ಅತಿಕ್ರಮಿಸಿರುವುದು ಕಂಡುಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ ತಿಂಗಳು ಸಮೀಕ್ಷೆ ನಡೆಸಿ ಒತ್ತುವರಿಯನ್ನು ಪತ್ತೆಹಚ್ಚಿತ್ತು. ತಮ್ಮ ಅನುಪಸ್ಥಿತಿಯಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಬಿಬಿಎಂಪಿ ಅಧಿಕಾರಿಗಳು ಎರಡನೇ ಬಾರಿಗೆ ನಿನ್ನೆ (ಸೆ 14) ವಿಲ್ಲಾಗೆ ಮತ್ತೊಮ್ಮೆ ಭೇಟಿ ನೀಡಿ, ನಿವಾಸಿಗಳ ಸಮ್ಮುಖದಲ್ಲಿ ಸ್ಥಳವನ್ನು ಸಮೀಕ್ಷೆ ಮಾಡಿದರು. ಪೂರ್ವಾಂಕರ ಬಿಲ್ಡರ್ ಕಂಪನಿಯು ಮಳೆನೀರು ಹರಿಸುವ ಚರಂಡಿಗಳ ಮೇಲೆಯೇ ಅಕ್ರಮವಾಗಿ ವಿಲ್ಲಾಗಳನ್ನು ನಿರ್ಮಿಸಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂತು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಎಂಜಿನಿಯರ್ ಮಾಲತಿ, ‘ನ್ಯಾಯಾಲಯದ ತೀರ್ಪು ಆಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿರುವ ನಿವಾಸಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳುತ್ತಿದ್ದಾರೆ. ಬೆಂಗಳೂರಿನ ಸುಮಾರು 700 ಪ್ರದೇಶದಲ್ಲಿ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಪಟ್ಟಿಯಲ್ಲಿ ಹೈ ಪ್ರೊಫೈಲ್ ಬಿಲ್ಡರ್​ಗಳು, ಡೆವಲಪರ್​ಗಳು ಮತ್ತು ಟೆಕ್ ಪಾರ್ಕ್​ಗಳು ಇವೆ. ಈ ಪೈಕಿ ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಶ್ರೀ ವಿಲ್ಲಾಸ್ ಮತ್ತು ಬಾಗ್ಮನೆ ಟೆಕ್​ಪಾರ್ಕ್ ಹೆಸರುಗಳು ಇವೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

Published On - 6:40 am, Thu, 15 September 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್