AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಮುಖಿಯರ ಜೊತೆ ಸಂಬಂಧ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು

ಸ್ಯಾಮುಯೆಲ್ ಮಂಗಳಮುಖಿಯರ ಜೊತೆ ಸುತ್ತಾಡುತ್ತಿದ್ದ ಹೀಗಾಗಿ ಕಳೆದ 4 ತಿಂಗಳಿನಿಂದ ಪ್ರವೀಣ್, ಸುರೇಶ್ ಇದೇ ವಿಚಾರವಾಗಿ ಆಗಾಗ ಕಿರಿಕ್ ಮಾಡುತ್ತಿದ್ದರು. ಇದರಿಂದ ಬೇಸತ್ತ ಸ್ಯಾಮುಯೆಲ್ ಪ್ರವೀಣ್, ಸುರೇಶ್ ಮೇಲೆ ಹಲ್ಲೆಗೆ ಲಾಂಗ್ ಹಿಡಿದು ಬಂದಿದ್ದ.

ಮಂಗಳಮುಖಿಯರ ಜೊತೆ ಸಂಬಂಧ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು
ಮಂಗಳಮುಖಿಯರ ಜೊತೆ ಸುತ್ತಾಡಿದ್ದ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು
TV9 Web
| Edited By: |

Updated on:Feb 22, 2022 | 2:13 PM

Share

ಬೆಂಗಳೂರು: ಮಂಗಳಮುಖಿಯರ(Transgender) ಜೊತೆ ಸುತ್ತಾಡಿದ್ದಕ್ಕೆ ಸ್ನೇಹಿತರು(Friends) ಕಿರಿಕ್ ನಡೆಸಿದ್ದು ಇದರಿಂದ ಬೇಸತ್ತು ಸ್ನೇಹಿತರ ಮೇಲೆ ಹಲ್ಲೆಗೆ ಮುಂದಾದವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ವ್ಯಾಪ್ತಿ ತ್ರಿವಳಿ ಜಂಕ್ಷನ್‌ ಬಳಿ ನಡೆದಿದೆ. ಮದ್ಯದ ಅಮಲಿನಲ್ಲಿ ಲಾಂಗ್‌ನಿಂದ ಸ್ನೇಹಿತನ ಮೇಲೆ ಹಲ್ಲೆ ನಡೆಸಲಾಗಿದೆ. ಸ್ನೇಹಿತ ಸ್ಯಾಮುಯೆಲ್(23) ಮೇಲೆ ಪ್ರವೀಣ್(24), ಸುರೇಶ್‌ನಿಂದ(24) ಹಲ್ಲೆ ನಡೆದಿದೆ.

ಹಲ್ಲೆಗೊಳಗಾದ ಸ್ಯಾಮುಯೆಲ್​ಗೆ ಹಲವು ಮಂಗಳಮುಖಿಯರ ಜೊತೆ ಸಂಬಂಧ ಇತ್ತು. ಮದುವೆ ಆಗಿ ಎರಡು ಮೂರು ದಿನಕ್ಕೆ ಮತ್ತೋರ್ವ ಮಂಗಳಮುಖಿ ಬದಲಾಯಿಸುತ್ತಿದ್ದ. ಇದೇ ಮಾದರಿಯ ಕೆಲಸ ಮಾಡುತಿದ್ದ ಪ್ರವೀಣ ಕೂಡ. ಆದರೆ ಅದೊಂದು ಮಂಗಳಮುಖಿ ವಿಚಾರಕ್ಕಾಗಿ ಪ್ರವೀಣ ಸ್ಯಾಮುಯೆಲ್​ನ ವಿಡಿಯೋ ಮಾಡಿದ್ದ. ಸ್ಯಾಮುಯೆಲ್‌ನ ನಗ್ನ ವಿಡಿಯೋ ಚಿತ್ರಿಸಿಕೊಂಡಿದ್ದ ಪ್ರವೀಣ ಅದೇ ವಿಡಿಯೋ ಸ್ಯಾಮುಯೆಲ್‌ಗೆ ತೊರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದ. ಇದೇ ವಿಚಾರವಾಗಿ ನಿನ್ನೆ ಚಾಕು ಹಿಡಿದು ಹಲ್ಲೆ ಮಾಡಲು ಬಂದಿದ್ದ ಸ್ಯಾಮುಯೆಲ್‌ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರವೀಣ್, ಸುರೇಶ್ ಇಬ್ಬರೂ ಸೇರಿ ಸ್ಯಾಮ್ಯುಯೆಲ್ ಹಣೆ, ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಸ್ಯಾಮುಯೆಲ್‌ಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆಗೈದ ಪ್ರವೀಣ್, ಸುರೇಶ್‌ ಡಿ.ಜೆ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯನಗರ: ವಸಂತ ಎಂಬುವವರ ನವಜಾತ ಶಿಶು ಅಪಹರಣ ಆರೋಪಕ್ಕೆ ಸಂಬಂಧಿಸಿ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ಧ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಚ್ಚವನಹಳ್ಳಿಯ ಹಾಲಸ್ವಾಮಿ ಮಠದ ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ್, ಪ್ರಿಯಾಂಕಾ ವಿರುದ್ಧ ದೂರು ದಾಖಲಾಗಿದೆ. ಹರಪನಹಳ್ಳಿಯ ಖಾಸಗಿ ನರ್ಸಿಂಗ್ ಹೋಂ ಬಳಿ ಕಿಡ್ನ್ಯಾಪ್ ಆಗಿದ್ದು ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ ದೂರು ಆಧರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಬೆಂಗಳೂರು: ದೀನದಯಾಳ್ ಉಪಾಧ್ಯಾಯ ಮೇಲ್ಸೇತುವೆಯ ಬಳಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ಕಚೇರಿಗೆ ಕೂಗಳತೆ ದೂರದಲ್ಲೇ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಕೂಡ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಉಕ್ರೇನಿನ ಪ್ರತ್ಯೇಕವಾದಿ ಸಂಘರ್ಷವನ್ನು ಕೊನೆಗಾಣಿಸಲು ಯಾವುದೇ ಶಾಂತಿ-ಸಂಧಾನ ಯಶಕಾಣದು: ವ್ಲಾದಿಮಿರ್ ಪುಟಿನ್

Gold and Silver Price: ಆಭರಣ ಖರೀದಿಗೂ ಮುನ್ನ ದರ ವಿವರ ಪರಿಶೀಲಿಸಿ; ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ

Published On - 7:32 am, Tue, 22 February 22