AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬೆಂಗಳೂರಿನಿಂದ ಹೊರಡೋ ಈ 5 ವಂದೇ ಭಾರತ್ ರೈಲುಗಳಲ್ಲಿದೆ ಸೂಪರ್ ವೀಕೆಂಡ್ ಟ್ರಿಪ್ ಪ್ಲಾನ್

ಬೆಂಗಳೂರಿಗರಿಗೆ ವೀಕೆಂಡ್ ಪ್ರವಾಸ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಸುಲಭವಾಗಿದೆ. ಟ್ರಾಫಿಕ್ ಕಿರಿಕಿರಿಯಿಲ್ಲದೆ, ಅತಿ ಕಡಿಮೆ ಸಮಯದಲ್ಲಿ ಮೈಸೂರು, ಧಾರವಾಡ, ಚೆನ್ನೈ, ಕೊಚ್ಚಿ ಅಥವಾ ಕೊಯಮತ್ತೂರು ತಲುಪಲು ಇದು ಉತ್ತಮ ಆಯ್ಕೆ. ರಸ್ತೆಯ ಒತ್ತಡ ತಪ್ಪಿಸಿ, ಆರಾಮದಾಯಕ ಮತ್ತು ವೇಗದ ರೈಲು ಪ್ರಯಾಣದ ಮೂಲಕ ಕರ್ನಾಟಕ, ತಮಿಳುನಾಡು, ಕೇರಳದ ಸುಂದರ ತಾಣಗಳನ್ನು ಆನಂದಿಸಿ, ನಿಮ್ಮ ವೀಕೆಂಡ್‌ಗೆ ಹೊಸ ಹುರುಪು ನೀಡಿ.

ನಮ್ಮ ಬೆಂಗಳೂರಿನಿಂದ ಹೊರಡೋ ಈ 5 ವಂದೇ ಭಾರತ್ ರೈಲುಗಳಲ್ಲಿದೆ ಸೂಪರ್ ವೀಕೆಂಡ್ ಟ್ರಿಪ್ ಪ್ಲಾನ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 10, 2026 | 4:51 PM

Share

ಬೆಂಗಳೂರು, ಜು.10: ದಿನವಿಡೀ ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ ಮಧ್ಯೆ ಸಿಲುಕುವ ಬೆಂಗಳೂರಿಗರಿಗೆ ವೀಕೆಂಡ್ ಬಂತೆಂದರೆ ಎಲ್ಲಾದರೂ ದೂರ ಪ್ರಯಾಣ ಬೆಳೆಸಲು ಸಮಯದ ಅಭಾವ ಕಾಡುವುದು ಸಹಜ. ಆದರೆ, ಭಾರತೀಯ ರೈಲ್ವೆಯ (Indian Railways) ಹೆಮ್ಮೆಯ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ರೈಲುಗಳ ಜಾಲವು ಈಗ ಬೆಂಗಳೂರಿಗರ ವೀಕೆಂಡ್ ಪ್ಲಾನ್‌ಗಳನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಿದೆ. ಹೆದ್ದಾರಿಗಳ ಟ್ರಾಫಿಕ್ ಕಿರಿಕಿರಿ ಅಥವಾ ಏರ್‌ಪೋರ್ಟ್‌ಗಳ ಕ್ಯೂನಲ್ಲಿ ನಿಲ್ಲುವ ಜಂಜಾಟವಿಲ್ಲದೆ, ಕೇವಲ 2 ದಿನಗಳ ರಜೆಯಲ್ಲೇ ನೀವು ಭೇಟಿ ನೀಡಬಹುದು.

ಮೈಸೂರು: ಅರಮನೆಗಳ ನಗರಿಗೆ ಕೇವಲ 2 ಗಂಟೆಯಲ್ಲಿ ರಾಜಮನೆತನದ ಸವಾರಿ

ಬೆಂಗಳೂರಿಗರಿಗೆ ಅತ್ಯಂತ ಹತ್ತಿರದ ಮತ್ತು ಜನಪ್ರಿಯ ವೀಕೆಂಡ್ ತಾಣವೆಂದರೆ ಅದು ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರು- ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ಹೊರಟು ಕೇವಲ 2 ಗಂಟೆಗಳಲ್ಲಿ ಮೈಸೂರು ತಲುಪಿಸುತ್ತದೆ. ವಿಶ್ವವಿಖ್ಯಾತ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಸೇಂಟ್ ಫಿಲೋಮಿನಾ ಚರ್ಚ್, ದೇವರಾಜ ಮಾರುಕಟ್ಟೆ ಮತ್ತು ಬೃಂದಾವನ ಗಾರ್ಡನ್. ಇಲ್ಲಿನ ಮೈಸೂರು ಪಾಕ್ ಮತ್ತು ಸಾಂಪ್ರದಾಯಿಕ ಆಹಾರ ಸಂಸ್ಕೃತಿ ನಿಮ್ಮ ವೀಕೆಂಡ್ ಅನ್ನು ಮತ್ತಷ್ಟು ಮಧುರವಾಗಿಸಲಿದೆ.

ಧಾರವಾಡ: ಉತ್ತರ ಕರ್ನಾಟಕದ ಕಲೆ ಮತ್ತು ಪೇಡ ಸವಿಯಲು ಸೂಪರ್ ದಾರಿ

ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಗ ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಿದೆ. ಸರಿಸುಮಾರು 6 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಿಂದ ಧಾರವಾಡವನ್ನು ತಲುಪಬಹುದು. ಸಾಂಸ್ಕೃತಿಕ ಪರಂಪರೆ ಮತ್ತು ರುಚಿಕರ ಆಹಾರ ಇಷ್ಟಪಡುವವರಿಗೆ ಇದು ಬೆಸ್ಟ್ ಚಾಯ್ಸ್. ಉಣಕಲ್ ಕೆರೆ, ಧಾರವಾಡ ಕೋಟೆ, ಇಸ್ಕಾನ್ ಶ್ರೀ ಕೃಷ್ಣ ಬಲರಾಮ ದೇವಸ್ಥಾನ ಮತ್ತು ಹುಬ್ಬಳ್ಳಿ ನಗರ. ಇದರೊಂದಿಗೆ ವಿಶ್ವಪ್ರಸಿದ್ಧ ‘ಧಾರವಾಡ ಪೇಡ’ ಸವಿಯುವುದನ್ನು ಮರೆಯಬೇಡಿ.

ಚೆನ್ನೈ: ಸಮುದ್ರ ತೀರದ ಸೌಂದರ್ಯ ಸವಿಯಲು 5 ಗಂಟೆಯ ಜರ್ನಿ

ಕರಾವಳಿ ತೀರದ ಸೌಂದರ್ಯ, ಐತಿಹಾಸಿಕ ದೇವಸ್ಥಾನಗಳು ಮತ್ತು ಶಾಪಿಂಗ್ ಇಷ್ಟಪಡುವ ಪ್ರವಾಸಿಗರಿಗೆ ಚೆನ್ನೈ ಅತ್ಯುತ್ತಮ ತಾಣವಾಗಿದೆ. ದಕ್ಷಿಣ ಭಾರತದ ಅತ್ಯಂತ ಬ್ಯುಸಿ ರೈಲು ಮಾರ್ಗವಾಗಿರುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಚೆನ್ನೈ ನಗರವನ್ನು ಕೇವಲ 5 ಗಂಟೆಗಳಲ್ಲಿ ತಲುಪಿಸುತ್ತದೆ. ಮರೀನಾ ಬೀಚ್, ಕಪಾಲೀಶ್ವರರ್ ದೇವಸ್ಥಾನ, ಸ್ಯಾಂಥೋಮ್ ಬೆಸಿಲಿಕಾ ಚರ್ಚ್, ಗೌರ್ಮೆಂಟ್ ಮ್ಯೂಸಿಯಂ ಮತ್ತು ಬೆಸೆಂಟ್ ನಗರ್ ಬೀಚ್. ದಕ್ಷಿಣ ಭಾರತದ ಅಪ್ಪಟ ಸಾಂಪ್ರದಾಯಿಕ ಆಹಾರಗಳನ್ನು ಸವಿಯಲು ಇದು ಸೂಕ್ತ ಜಾಗ.

ಎರ್ನಾಕುಲಂ – ಕೊಚ್ಚಿ: ಕೇರಳದ ಪ್ರಕೃತಿ ಸೌಂದರ್ಯಕ್ಕೆ ವೇಗದ ಲಿಂಕ್

ಬೆಂಗಳೂರಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅತ್ಯಂತ ವೇಗದ ರೈಲು ಸೇವೆ ಎಂದರೆ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್. ವೀಕೆಂಡ್‌ನಲ್ಲಿ ಕೊಂಚ ದೀರ್ಘಾವಧಿಯ ರಜೆ ಸಿಕ್ಕರೆ, ವಲಸೆ ಇತಿಹಾಸ ಮತ್ತು ಆಧುನಿಕ ಕೆಫೆ ಸಂಸ್ಕೃತಿಯ ಸಮ್ಮಿಶ್ರಣವಾಗಿರುವ ಕೊಚ್ಚಿ ನಗರಕ್ಕೆ ಆರಾಮವಾಗಿ ಭೇಟಿ ನೀಡಬಹುದು. ಫೋರ್ಟ್ ಕೊಚ್ಚಿ, ಚೀನಾ ಮೀನುಗಾರಿಕಾ ಬಲೆಗಳು , ಮಟ್ಟಂಚೇರಿ ಅರಮನೆ, ಜ್ಯೂ ಟೌನ್ ಮತ್ತು ಮೆರೈನ್ ಡ್ರೈವ್ ವಾಟರ್‌ಫ್ರಂಟ್ ವೀಕ್ಷಣೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಕೊಯಮತ್ತೂರು: ಊಟಿ, ಕೂನೂರು ಗಿರಿಧಾಮಗಳಿಗೆ ಗೇಟ್‌ವೇ

ತಮಿಳುನಾಡಿನ ಪ್ರಮುಖ ಕೈಗಾರಿಕಾ ನಗರಿ ಕೊಯಮತ್ತೂರು ಸಹ ಈಗ ಬೆಂಗಳೂರಿಗರಿಗೆ ವಂದೇ ಭಾರತ್ ಮೂಲಕ ಅತ್ಯಂತ ಹತ್ತಿರವಾಗಿದೆ. ಕೇವಲ ಕೊಯಮತ್ತೂರು ನಗರದ ದೇವಸ್ಥಾನಗಳು ಮತ್ತು ಶಾಪಿಂಗ್ ಮಾತ್ರವಲ್ಲದೆ, ಇಲ್ಲಿ ಇಳಿದುಕೊಂಡು ರಸ್ತೆ ಮಾರ್ಗದ ಮೂಲಕ ಪ್ರಸಿದ್ಧ ಗಿರಿಧಾಮಗಳಾದ ಊಟಿ, ಕೂನೂರು ಮತ್ತು ವಾಲ್ಪಾರೈಗೆ ಸುಲಭವಾಗಿ ತೆರಳಬಹುದು. ಮರುದಮಲೈ ದೇವಸ್ಥಾನ, ಪೇರೂರ್ ಪಟೀಶ್ವರರ್ ದೇವಸ್ಥಾನ, ವಿಒಸಿ ಪಾರ್ಕ್ ಮತ್ತು ಬ್ರೂಕ್‌ಫೀಲ್ಡ್ಸ್ ಮಾಲ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us