AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veeraloka Books release: ರವಿವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ: ಟಿವಿ9 ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ

Raveendra Muddi varada teerada kathegalu: ವೀರಲೋಕ ಪ್ರಕಾಶನ ವತಿಯಿಂದ ನಡೆದಿರುವ ಉತ್ತರ ಪರ್ವ ಎಂಬ ವಿನೂತನ ಕಥಾ ಸುಗ್ಗಿಯಲ್ಲಿ ಆಯ್ಕೆ ಆದ ಉತ್ತರ ಕರ್ನಾಟಕದ 10 ಕೃತಿಗಳು ಭಾನುವಾರ (ಆ 4) ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಲೋಕಾರ್ಪಣೆಯಾಗಲಿವೆ. ಈ ಟಾಪ್ 10 ಕೃತಿಗಳಲ್ಲಿ ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರ “ವರದಾ ತೀರದ ಕತೆಗಳು” ಕೃತಿ ಕೂಡ ಬಿಡುಗಡೆ ಆಗಲಿದೆ.

Veeraloka Books release: ರವಿವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ: ಟಿವಿ9 ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ
ಭಾನುವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ
ಆಯೇಷಾ ಬಾನು
|

Updated on: Aug 03, 2024 | 11:31 AM

Share

ಬೆಂಗಳೂರು, ಆಗಸ್ಟ್.03: ಬೆಂಗಳೂರಿನ ವೀರಲೋಕ ಪ್ರಕಾಶನವು (Veeraloka Books) ‘ಉತ್ತರ ಪರ್ವ’ ಎಂಬ ವಿನೂತನ ಕಥಾ ಸುಗ್ಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಲೇಖಕರನ್ನೇ ಕೇಂದ್ರೀಕರಿಸಿ ಮೊದಲ ಹಂತದಲ್ಲಿ ಪ್ರಕಟಣೆಗೆ 10 ಲೇಖಕರ ಕೃತಿಗಳು ಆಯ್ಕೆಯಾಗಿದ್ದು ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ  ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಉತ್ತರ ಪರ್ವ ಕಥಾ ಸುದ್ದಿಗೆ ನೂರಕ್ಕೂ ಹೆಚ್ಚು ಕೃತಿಗಳು ಆಯ್ಕೆಗಾಗಿ ಬಂದಿದ್ದವು. ಸಾಹಿತಿಗಳಾದ ರಾ.ಗಂ. ಅವರ ಸಂಪಾದಕತ್ವದಲ್ಲಿ ಮೂರು ಹಂತದ ಆಯ್ಕೆಯಲ್ಲಿ ಹತ್ತು ವಿಭಿನ್ನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

  • ಶೇಕ್ಷಾವಲಿ ಮಣಿಗಾರ – ಆ ವದನ
  • ಮರ್ತುಜಾಬೇಗಂ ಕೊಡಗಲಿ – ಪರಸ್ಪರ ಮತ್ತಿತರ ಕೃತಿಗಳು
  • ಡಾ.ಸದಾಶಿವ ದೊಡಮನಿ – ಇರುಳ ಬಾಗಿಲಿಗೆ ಕಣ್ಣ ದೀಪ
  • ರವೀಂದ್ರ ಮುದ್ದಿ – ವರದಾ ತೀರದ ಕಥೆಗಳು
  • ಸಿ.ವಿ.ವೀರುಪಾಕ್ಷ – ಖದೀಜಾ
  • ಶ್ರೀಧರ ಗಸ್ತಿ – ಚಂದ್ರಾ ಲೇಔಟ್
  • ಪ್ರಕಾಶ ಗಿರಿಮಲ್ಲನವರ – ಜನನಾಯಕ
  • ಬಿಜೆ ಪಾರ್ವತಿ ವಿ. ಸೋನಾರೆ – ಓಡಿ ಹೋದಾಕಿ
  • ಕವಿತಾ ಹೆಗಡೆ ಅಭಯಂ – ಇತ್ತ ಹಾಯಲಿ ಚಿತ್ತ
  • ನವ್ಯ ಆರ್ ಕತ್ತಿ – ಮಾಯಾ ಗುಹೆಇದನ್ನೂ ಓದಿ: Veeraloka Books: ‘ಉತ್ತರ ಪರ್ವ’ದಲ್ಲಿ ಟಿವಿ9 ರವೀಂದ್ರ ಮುದ್ದಿ ಪುಸ್ತಕ ಟಾಪ್-10ಗೆ ಆಯ್ಕೆ

    ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ನಾಳೆ ಅಂದರೆ ಆಗಸ್ಟ್ 04ರ ಭಾನುವಾರ ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ  ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಲೋಕಾರ್ಪಣೆ ಆಗಲಿವೆ. ಕೃತಿಕಾರರಿಗೆ ರಾಯಧನ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಸುರೇಶ, ರಾ.ಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅವರುಗಳು ಉಪಸ್ಥಿತರಿರುತ್ತಾರೆ ಎಂದು ವ್ಯವಸ್ಥಾಪಕರಾದ ಅನಂತ ಕುಣಿಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    veeraloka books uttara parva 10 book releasing on sunday august 04th tv9 senior producer ravindra muddi varada teerada kathegalu

    ರವಿ ಮುದ್ದಿ

    ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ:

    “ಉತ್ತರ ಪರ್ವ” ಯೋಜನೆಗೆ ಬಂದಿದ್ದ ನೂರಾರು ಕೃತಿಗಳಲ್ಲಿ ಪ್ರಕಟಣೆಗೆ ಆಯ್ಕೆಯಾದ ಟಾಪ್ ಹತ್ತು ಕೃತಿಗಳಲ್ಲಿ ಪತ್ರಕರ್ತ ರವೀಂದ್ರ ಮುದ್ದಿ ಅವರ “ವರದಾ ತೀರದ ಕತೆಗಳು” ಕೃತಿ ಕೂಡ ಭಾನುವಾರ ಬಿಡುಗಡೆ ಆಗಲಿದೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!