ಬೆಂಗಳೂರು, ಜ.08: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಬಹು ಮುಖ್ಯ ಗ್ಯಾರೆಂಟಿ ಅನ್ನ ಭಾಗ್ಯ(Anna Bhagya). ಇಂದಿನಿ ಸಿಎಂ ಸಿದ್ದರಾಮಯ್ಯ (Siddaramaiah) ಎಲೆಕ್ಷನ್ ಪ್ರಚಾರದಲ್ಲಿ ಹತ್ತು ಕೆ.ಜಿ ಅಕ್ಕಿ ಬೇಕಾ ಹಾಗಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಆದರೆ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರು ಐದು ಕೆಜಿ ಅಕ್ಕಿ ನೀಡದೆ ಬದಲಿಗೆ ಹಣ ನೀಡುತ್ತಿದ್ದು ಇದೀಗ ಗೃಹಿಣಿಯರು ನಮಗೆ ಹಣ ಬೇಡ ಅಕ್ಕಿ ಬೇಕು ಎಂದು ಮನವಿ ಮಾಡ್ತಿದ್ದಾರೆ.
ರಾಜ್ಯದ ಜನರಿಗೆ ಅಕ್ಕಿ ಬದಲು ಹಣ ನೀಡ್ತಿರುವ ರಾಜ್ಯ ಸರ್ಕಾರಕ್ಕೆ ಜನರು ಹಣ ಬೇಡ ಅಕ್ಕಿ ನೀಡಿ ಎಂದು ಮನವಿ ಮಾಡಿದ್ದಾರೆ. ನಮಗೆ ಹಣ ಬೇಡ ಅಕ್ಕಿಯೇ ಕೊಡಿ ಎಂದು ರಾಜ್ಯದ ಜನತೆ ಅಭಿಮತದಿಂದ ಮನವಿ ಮಾಡಿದೆ. ಈ ಬಗ್ಗೆ ಒಂದಲ್ಲ ಎರಡು ಸರ್ವೆಗಳು ನಡೆದಿದ್ದು ಅಕ್ಕಿಗೆ ಡಿಮ್ಯಾಂಡ್ ಹೆಚ್ಚಿದೆ. ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಒಂದು ಸರ್ವೆ. ಸಿಎಂ ಕಚೇರಿಯ ಮೂಲಕ ಎನ್ ಜಿ ಒ ಮೂಲಕ ಮತ್ತೊಂದು ಸರ್ವೆ ನಡೆಸಲಾಗಿತ್ತು. ಈ ಎರಡು ಸರ್ವೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಂದಿ ಹಣ ಬೇಡ ಅಕ್ಕಿ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಮತ್ತೂಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ತಾನೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಮಹಿಳೆಯರು ನಮಗೆ ಹಣ ಬೇಡ ದಯವಿಟ್ಟು ಸರ್ಕಾರ ಅಕ್ಕಿ ಕೊಡಲಿ ಎಂದು ಮನವಿ ಮಾಡುತ್ತಿದ್ದಾರೆ.
ತಿಂಗಳು | ಫಲಾನುಭವಿಗಳ ಸಂಖ್ಯೆ | ಫಲಾನುಭವಿಗಳ ಸಂಖ್ಯೆ |
ಜುಲೈ | 3 ಕೋಟಿ 45 ಲಕ್ಷ | ₹566 ಕೋಟಿ |
ಆಗಸ್ಟ್ | 3 ಕೋಟಿ 69 ಲಕ್ಷ | ₹605 ಕೋಟಿ |
ಸೆಫ್ಟಂಬರ್ |
3 ಕೋಟಿ 82 ಲಕ್ಷ
|
₹627 ಕೋಟಿ |
ಆಕ್ಟೋಬರ್ | 3 ಕೋಟಿ 92 ಲಕ್ಷ |
₹644 ಕೋಟಿ
|
ನವೆಂಬರ್ | ನವೆಂಬರ್3 ಕೋಟಿ 97 ಲಕ್ಷ
|
₹651 ಕೋಟಿ |
ಡಿಸೆಂಬರ್ |
3 ಕೋಟಿ 99 ಲಕ್ಷ
|
₹655 ಕೋಟಿ |
ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡ್ತಿದೆ. 6 ತಿಂಗಳಿಗೆ ಅಕ್ಕಿ ಬದಲು ಸರ್ಕಾರದಿಂದ ಜನರ ಖಾತೆಗೆ ₹3751 ಕೋಟಿ ಹಣ ವರ್ಗಾವಣೆ ಆಗಿದೆ. ಪಡಿತರ ವಿತರಣಕರ ವಿರೋಧದ ನಡುವೆ ಆರು ತಿಂಗಳಿನಿಂದ ಜನರ ಖಾತೆಗೆ ಹಣ ಹಾಕಲಾಗ್ತಿದೆ.
ಪ್ರಸ್ತುತ ನೀಡುತ್ತಿರುವ ನಗದು ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ನೀಡಿದರೆ, ತಿಂಗಳ ಪೂರ್ತಿ ಮನೆಮಂದಿಯ ಹಸಿವು ನೀಗುತ್ತದೆ. ಕೆಲವೆಡೆ ಸೋರಿಕೆ ಆಗಬಹುದು ಅಥವಾ ಹಲವರು ಬೇರೆಯವರಿಗೆ ಮಾರಾಟವೂ ಮಾಡಬಹುದು. ಆದರೆ ಅತಿಹೆಚ್ಚು ಜನರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರನ್ನು ಕೇಳಿದ್ರೆ ಕೆಲವಡೆ ಅಕ್ಕಿ ಬೇಕು ಕೆಲವಡೆ ಹಣ ಬೇಕು ಅಂತ ಕೇಳ್ತಿದ್ದಾರೆ. ರಾಜ್ಯದಲ್ಲಿ ಶೇ 70 ರಿಂದ 80% ಜನ ಅಕ್ಕಿ ಬೇಕು ಅಂತ ಕೇಳ್ತಿದ್ದಾರೆ. ಅಕ್ಕಿ ಕೊಡಬೇಕು ಅನ್ನೋ ಯೋಚನೆಯಿದೆ. ಆದಷ್ಟು ಬೇಗ ಅಕ್ಕಿಯನ್ನೆ ಕೊಡುವ ಕೆಲಸ ಮಾಡ್ತೀವಿ. ಆಂಧ್ರ ಪ್ರದೇಶ ತೆಲಂಗಾಣದಿಂದ ಸೇರಿದಂತೆ ಹಲವಡೆಯಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಆದರೆ ಸಮರ್ಪಕವಾಗಿ ಬೆಲೆ ನಿಗದಿಯಾಗ್ತಿಲ್ಲ ಈ ಬಾರಿ ಉತ್ಪಾದನೆಯು ಕಡಿಮೆಯಾಗಿದೆ. ಆದಷ್ಟು ಬೇಗ ಅಕ್ಕಿ ಕೊಡುವ ಪ್ರಯತ್ನವನ್ನ ನಾವು ಮಾಡ್ತೀವಿ. ಅಲ್ಲಿಯವರೆಗೂ ನಾವು ಹೇಳಿದಂತೆ ಹಣ ಹಾಕ್ತಿವಿ ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ