AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಲ್ಡ್​​ ಸ್ಕೂಲ್​​ ಸ್ಪೋರ್ಟ್ಸ್​ ಫೆಡರೇಷನ್​ ಕ್ರೀಡಾಕೂಟಕ್ಕೆ ಫ್ರಾನ್ಸ್​​ಗೆ ತೆರಳಬೇಕಿದ್ದ ವಿದ್ಯಾರ್ಥಿಗಳಿಗೆ ವೀಸಾ ಸಿಗದೆ ಪರದಾಟ

ಪರೀಕ್ಷೆ ಬಿಟ್ಟು ಕ್ರೀಡಾಕೂಟಕ್ಕೆ ತೆರಳಿದ್ದ ರಾಜ್ಯದ 34 ವಿದ್ಯಾರ್ಥಿಗಳು, ವೀಸಾ ಸಿಗದ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಿದ್ದಾರೆ. 

ವರ್ಲ್ಡ್​​ ಸ್ಕೂಲ್​​ ಸ್ಪೋರ್ಟ್ಸ್​ ಫೆಡರೇಷನ್​ ಕ್ರೀಡಾಕೂಟಕ್ಕೆ ಫ್ರಾನ್ಸ್​​ಗೆ ತೆರಳಬೇಕಿದ್ದ ವಿದ್ಯಾರ್ಥಿಗಳಿಗೆ ವೀಸಾ ಸಿಗದೆ ಪರದಾಟ
ವೀಸಾ ಸಿಗದೆ ವಿದ್ಯಾರ್ಥಿಗಳ ಪರದಾಟ
TV9 Web
| Edited By: |

Updated on: May 14, 2022 | 12:01 PM

Share

ಬೆಂಗಳೂರು: ವರ್ಲ್ಡ್​​ ಸ್ಕೂಲ್​​ ಸ್ಪೋರ್ಟ್ಸ್​ ಫೆಡರೇಷನ್​ ಕ್ರೀಡಾಕೂಟ ಹಿನ್ನೆಲೆ ನಾಳೆಯಿಂದ ಆರಂಭವಾಗಲಿರುವ ಕ್ರೀಡಾಕೂಟಕ್ಕೆ ಫ್ರಾನ್ಸ್​​ಗೆ ತೆರಳಬೇಕಿದ್ದ ವಿದ್ಯಾರ್ಥಿಗಳಿಗೆ ವೀಸಾ ಸಿಗದೆ ಪರದಾಡಿರುವಂತಹ ಘಟನೆ ನಡೆದಿದೆ. ಕರ್ನಾಟಕದ 34 ವಿದ್ಯಾರ್ಥಿಗಳು ಸೇರಿ 98 ವಿದ್ಯಾರ್ಥಿಗಳು ವೀಸಾ ಸಿಗದೆ ದೆಹಲಿ ಏರ್​​ಪೋರ್ಟ್​ನಲ್ಲಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. 238 ವಿದ್ಯಾರ್ಥಿಗಳ ಪೈಕಿ 98 ವಿದ್ಯಾರ್ಥಿಗಳಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಪರೀಕ್ಷೆ ಬಿಟ್ಟು ಕ್ರೀಡಾಕೂಟಕ್ಕೆ ತೆರಳಿದ್ದ ರಾಜ್ಯದ 34 ವಿದ್ಯಾರ್ಥಿಗಳು, ವೀಸಾ ಸಿಗದ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಿದ್ದಾರೆ.

ಲ್ಯಾಪ್​ಟಾಪ್ ಖರೀದಿಯಲ್ಲಿ ಅಕ್ರಮ: ಸಚಿವ ಅಶ್ವತ್ಥ್​​​ ನಾರಾಯಣ ವಿರುದ್ಧ ಪ್ರತಿಭಟನೆ

ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್​ಟಾಪ್ ಖರೀದಿಯಲ್ಲಿ ಅಕ್ರಮ ಹಿನ್ನೆಲೆ ಬೆಂಗಳೂರಲ್ಲಿ ಮಲ್ಲೇಶ್ವರಂನ 11ನೇ ಕ್ರಾಸ್​​​​ನಲ್ಲಿರುವ ಸಚಿವ ಅಶ್ವತ್ಥ್​​​ ನಾರಾಯಣ ನಿವಾಸಕ್ಕೆ NSUI ವಿದ್ಯಾರ್ಥಿ ಸಂಘಟನೆಯಿಂದ ಮುತ್ತಿಗೆ ಹಾಕಿದ್ದಾರೆ. ಸಚಿವ ಅಶ್ವತ್ಥ್​​​ ನಾರಾಯಣ ನಿವಾಸದ ಮುಂದೆ NSUI ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಟೆಂಡರ್ ಮೊತ್ತವನ್ನು ಡಬಲ್ ಮಾಡಿ ಲ್ಯಾಪ್​​​ಟಾಪ್ ಖರೀದಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಅಂದಾಜು 150 ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಾರೆ. ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ NSUI ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
Web contact
Web contact

TV9 Kannada

Read More
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್