AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ-ಬಿಡಿಎಗೆ ಮುಳುಗುನೀರು ತಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ: ಬಿಡಿಎ ಸೈಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು

50 ಕೋಟಿಗೂ ಹೆಚ್ಚು ಬೆಲೆಬಾಳುವ ಸೈಟ್​ನ್ನು ಬಿಡಿಎ ಸೇಲ್ ಡೀಡ್ ಮಾಡಲು ಹೊರಟಿದೆ. ಈ ಹಿನ್ನಲೆ ಕ್ರಮ ಸೂಕ್ತ ಕೈಗೊಳ್ಳುವಂತೆ ಲೋಕಾಯುಕ್ತಗೆ ದೂರು ನೀಡಿದ್ದೇವೆ.

ಯಡಿಯೂರಪ್ಪ-ಬಿಡಿಎಗೆ ಮುಳುಗುನೀರು ತಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ: ಬಿಡಿಎ ಸೈಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕೆ‌.ಮಥಾಯಿ, ಯಡಿಯೂರಪ್ಪ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 17, 2022 | 5:31 PM

Share

ಬೆಂಗಳೂರು: ಕೆಂಗೇರಿಯ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್​ನ ಸಿಎ ಸೈಟ್ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂಪ್ಪ, ಹೊಳ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಮತ್ತು ಬಿಡಿಎ ವಿರುದ್ದ ನಿವೃತ್ತ ಕೆಎಎಸ್ ಅಧಿಕಾರಿ ಕೆ‌.ಮಥಾಯಿ ಮತ್ತು ಆಮ್ ಆದ್ಮಿ ಪಾರ್ಟಿ ಮುಖಂಡರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕುರಿತು ಲೋಕಾಯುಕ್ತ ಬಳಿ ಕೆ. ಮಥಾಯಿ ಮಾತನಾಡಿದ್ದು, 2010ರಲ್ಲಿ ಸಿಎ ಸೈಟ್ 1ನ್ನು ಆಗಿನ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ ಪ್ರಭಾವ ಬಳಸಿ ಬಿಡಿಎ ಮೂಲಕ ಸೈಟ್ ಅಲೋಟ್ ಮಾಡಿಸಿದ್ದ ಬಿಬಿಎಂಪಿಯ ಕನ್ನಡ ಶಾಲೆಗೆ ಅಲೋಟ್ ಆಗಿದ್ದ ಸಿಎ ಸೈಟ್​ನ್ನು ಬಿಎಸ್​ ಯಡಿಯೂರಪ್ಪ ಪ್ರಭಾವ ಬಳಸಿ ಅಲೋಟ್​ ಮಾಡಿಸಿಕೊಂಡಿದ್ದಾರೆ. ಈ ಮೊದಲು ಚಂದ್ರಪ್ಪ ಕೆ.ಎಸ್.ಲೇಔಟ್ ಕೇಳಿದ್ದ ಸಿಎ ಸೈಟ್ ಭಾರತ ಸಂಸ್ಕ್ರತಿ ಪ್ರತಿಷ್ಟಾನಕ್ಕೆ ಅಲೋಟ್ ಆಗಿದೆ. ಇನಿಶಿಯಲ್ ಡೆಪಾಸಿಟ್ ಹಿಂಪಡೆಯದೆ ಆಗಿನ ಸಿಎಂ ಬಿಎಸ್ ವೈ ಒತ್ತಡ ಹಾಕಿದ್ದಾರೆ. ಪದೇ ಪದೇ ಒತ್ತಡ ತಂದು ಬಿಡಿಎಯಿಂದ ಅಲರ್ಟ್ಮೆಂಟ್ ಆಗಿದೆ. ನಂತರ ಶಾಲಾ ಕಟ್ಟಡಕ್ಕೆ ಅಂತಾ 30 ವರ್ಷಕ್ಕೆ ಲೀಸ್ ಪಡೆದಿರುವ ಶಾಸಕ ಚಂದ್ರಪ್ಪ ಕಮರ್ಷಿಯಲ್ ಆಗಿ ಬಳಕೆ ಮಾಡ್ತಿದ್ದಾರೆ ಎಂದು ಹೇಳಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆ, ಚಿತ್ರದುರ್ಗದ ಹೆಸರಿನಲ್ಲಿ ಸೈಟ್ ಮಂಜೂರಾತಿಗೆ ಮನವಿ ಮಾಡಿದ್ದು, ಬದಲಿ ನಿವೇಶನ ಹಂಚಿಕೆ ಮಾಡುವಂತೆ ಬಿಎಸ್ ವೈ ಬಿಡಿಎಗೆ ಪತ್ರ ಬರೆದಿದ್ದಾರೆ. ಆದ್ರೆ ನಿವೇಶನವೇ ಹಂಚಿಕೆಯಾಗದೆ ಬಿಜೆಪಿ ಶಾಸಕ ಚಂದ್ರಪ್ಪಗೆ ಬದಲಿ ನಿವೇಶನ ನೀಡುವುದು ಹೇಗೆ ಎಂದು ಪ್ರಶ್ನಿಸಿದರು. ಶಾಲೆಗೆಂದು ಲೀಸ್ ಪಡೆದ ಸೈಟ್​ನಲ್ಲಿ ಎರಡು ವರ್ಷಗಳ ಒಳಗೆ ಶಾಲೆ ನಿರ್ಮಿಸಬೇಕು.

ಸದ್ಯ ಈಗ 3,800 ರೂಪಾಯಿಗೆ ಶಾಸಕ ಚಂದ್ರಪ್ಪಗೆ ಸೇಲ್ ಡೀಡ್ ಮಾಡಲು ಮುಂದಾಗಿದ್ದಾರೆ. 50 ಕೋಟಿಗೂ ಹೆಚ್ಚು ಬೆಲೆಬಾಳುವ ಸೈಟ್​ನ್ನು ಬಿಡಿಎ ಸೇಲ್ ಡೀಡ್ ಮಾಡಲು ಹೊರಟಿದೆ. ಈ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಗೆ ದೂರು ನೀಡಿದ್ದೇವೆ. ಕೂಡಲೇ ಬಿಡಿಎ ಸಿಎ ಸೈಟ್ ಸೇಲ್ ಡೀಡ್ ಮಾಡದಂತೆ ತಡೆ ನೀಡುವಂತೆ ಬಿಡಿಎಗೂ ತಕರಾರು ಅರ್ಜಿ ನೀಡಿದ್ದೇವೆ ಎಂದು ಲೋಕಾಯುಕ್ತ ಬಳಿ ಕೆ.ಮಥಾಯಿ ತಿಳಿಸಿದರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:24 pm, Sat, 17 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ