ಆಲಮಟ್ಟಿ ಜಲಾಶಯ
ಮುಖ್ಯಾಂಶಗಳು
- ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಪ್ರವೇಶ, ಜನರ ಜಲಸಂಭ್ರಮ.
- ಸಾಣೇಹಳ್ಳಿಯಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯಿಂದ ಭದ್ರಾ ನೀರಿಗೆ ಬಾಗಿನ.
- ರಾಜ್ಯದ ಪ್ರಮುಖ ಕೆಆರ್ಎಸ್, ಆಲಮಟ್ಟಿ ಡ್ಯಾಂಗಳ ಇಂದಿನ ನೀರಿನ ಮಟ್ಟ.
ಬೆಂಗಳೂರು, ಸೆಪ್ಟೆಂಬರ್ 09: ಬಯಲುಸೀಮೆ ಜನರ ಬಹುಕಾಲದ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿದ್ದು, ಕೋಟೆನಾಡಿನ ಜನರಲ್ಲಿ ಹರ್ಷ ಮನೆಮಾಡಿದೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ವಚನ ಗೀತೆಗಳ ಗಾಯನದೊಂದಿಗೆ ಭದ್ರಾ ನೀರಿಗೆ ಬಾಗಿನ ಅರ್ಪಿಸಿ ಬರಮಾಡಿಕೊಂಡರು. ಪ್ರಾಯೋಗಿಕವಾಗಿ ಕಾಲುವೆಗೆ 3 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ಈ ನೀರು ಇಂದು ಸಂಜೆ ವೇಳೆಗೆ ಚಿತ್ರದುರ್ಗ ತಾಲೂಕಿನ ಗೋನೂರು ಕೆರೆಯನ್ನು ತಲುಪಲಿದೆ.ರಾಜ್ಯದ ವಿವಿಧ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
1. ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 519.54 ಮೀಟರ್
- ಒಳಹರಿವು: 13,364 ಕ್ಯೂಸೆಕ್
- ಹೊರಹರಿವು: 17,426 ಕ್ಯೂಸೆಕ್
2. ಹೇಮಾವತಿ ಜಲಾಶಯ
- ಗರಿಷ್ಠ ಸಾಮರ್ಥ್ಯ: 2922.00 ಅಡಿ (37 TMC)
- ಇಂದಿನ ಮಟ್ಟ: 2906.77 ಅಡಿ (24.317 TMC)
- ಒಳಹರಿವು: 2,911 ಕ್ಯೂಸೆಕ್
- ಹೊರಹರಿವು: ನದಿಗೆ 4,000 ಕ್ಯೂಸೆಕ್
- ಕಾಲುವೆಗೆ 5,650 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ 2921.82 ಅಡಿ (36.929 TMC) ನೀರಿತ್ತು. ಒಳಹರಿವು 6,954 ಕ್ಯೂಸೆಕ್ ಹಾಗೂ
- ಹೊರಹರಿವು 7,400 ಕ್ಯೂಸೆಕ್ ಇತ್ತು
3. ಕೆ.ಆರ್.ಎಸ್. ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ (49.452 TMC)
- ಇಂದಿನ ಮಟ್ಟ: 106.74 ಅಡಿ (28.533 TMC)
- ಒಳಹರಿವು: 2,912 ಕ್ಯೂಸೆಕ್
- ಹೊರಹರಿವು: 1,919 ಕ್ಯೂಸೆಕ್
4. ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 84.00 ಅಡಿ
- ಇಂದಿನ ಮಟ್ಟ: 68.60 ಅಡಿ (ಸಂಗ್ರಹ: 11.01 TMC | ಲೈವ್ ಸ್ಟೋರೇಜ್: 1.20 TMC)
- ಒಳಹರಿವು: 1,619 ಕ್ಯೂಸೆಕ್
- ಹೊರಹರಿವು: ನದಿಗೆ 1,200 ಕ್ಯೂಸೆಕ್ (ಕಾಲುವೆಗಳಿಗೆ: 0 ಕ್ಯೂಸೆಕ್)
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ