Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಾನ್, ಬೈಬಲ್ ರೀತಿ ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ; ಸಚಿವ ಬಿ.ಸಿ. ನಾಗೇಶ್

ಕ್ರಿಶ್ಚಿಯನ್ನರು ಬೈಬಲನ್ನು ನಂಬಬೇಕು, ಮುಸ್ಲಿಮರು ಕುರಾನ್​ ಅನ್ನು ಪಾಲಿಸಬೇಕು. ಆದರೆ, ಭಗವದ್ಗೀತೆಯನ್ನು ನಂಬದಿರುವವರೆಗೆ ಎಲ್ಲೂ ಉಲ್ಲೇಖವಾಗಿಲ್ಲ. ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಕುರಾನ್, ಬೈಬಲ್ ರೀತಿ ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ; ಸಚಿವ ಬಿ.ಸಿ. ನಾಗೇಶ್
ಸಚಿವ ಬಿ.ಸಿ. ನಾಗೇಶ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 28, 2022 | 8:52 PM

ಬೆಂಗಳೂರು: ಬೈಬಲ್ ಮತ್ತು ಕುರಾನ್ ಧಾರ್ಮಿಕ ಗ್ರಂಥಗಳು. ಆದರೆ, ಭಗವದ್ಗೀತೆ ಜೀವನ ನಡೆಸಲು ಅಗತ್ಯವಾದ ಮೌಲ್ಯಗಳನ್ನು ಹೇಳುವ ಪುಸ್ತಕವಾಗಿದೆಯೇ ಹೊರತು ಭಗವದ್ಗೀತೆ (Bhagavadgita) ಧಾರ್ಮಿಕ ಗ್ರಂಥವಲ್ಲ ಎಂದು ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (Minister BC Nagesh) ಹೇಳಿದ್ದಾರೆ. ಭಗವದ್ಗೀತೆಯನ್ನು ಇತರ ಪುಸ್ತಕಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಬೈಬಲ್​ನಲ್ಲಿ ಯೇಸುವನ್ನು ನಂಬಿದರೆ ಯೇಸು ನಿಮ್ಮನ್ನು ರಕ್ಷಿಸುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಆಗುತ್ತೀಯ ಎಂದು ಹೇಳಿಲ್ಲ. ಕ್ರಿಶ್ಚಿಯನ್ನರು ಬೈಬಲನ್ನು ನಂಬಬೇಕು, ಮುಸ್ಲಿಮರು ಕುರಾನ್​ ಅನ್ನು ಪಾಲಿಸಬೇಕು. ಆದರೆ, ಭಗವದ್ಗೀತೆಯನ್ನು ನಂಬದಿರುವವರೆಗೆ ಎಲ್ಲೂ ಉಲ್ಲೇಖವಾಗಿಲ್ಲ. ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಧಾರ್ಮಿಕ ಆಚರಣೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯಿಸಿದ್ದಾರೆ. ಭಗವದ್ಗೀತೆ ನಾವು ಅನುಸರಿಸಬೇಕಾದ ಮಾನವೀಯ ಮೌಲ್ಯಗಳ ಬಗ್ಗೆ ಹೇಳುತ್ತದೆ. ಇದನ್ನು ಇತರ ಧಾರ್ಮಿಕ ಪುಸ್ತಕಗಳೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೆಲವು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಬೈಬಲ್ ಅಧ್ಯಯನ ಮಾಡಲು ಮತ್ತು ಅದರ ಮೇಲೆ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸುತ್ತಿವೆ ಎಂದು ನಮಗೆ ದೂರುಗಳು ಬಂದಿವೆ. ಅದನ್ನು ಪರಿಶೀಲಿಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಸೂಚಿಸಿದ್ದೇನೆ. ಕರ್ನಾಟಕ ಶಿಕ್ಷಣ ಕಾಯಿದೆಯಡಿ ನೋಂದಣಿಯಾಗಿರುವ ಶಾಲೆಗಳು ಅಲ್ಪಸಂಖ್ಯಾತ ಸಂಸ್ಥೆಯಾಗಲಿ ಅಥವಾ ಇತರ ಶಾಲೆಗಳಾಗಲಿ ಅದು ನಿಗದಿಪಡಿಸಿದ ನಿಯಮಗಳನ್ನು ಅನುಸರಿಸಬೇಕು. ಕಾಯ್ದೆಯ ಪ್ರಕಾರ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಪಠ್ಯಗಳನ್ನು ಬೋಧಿಸಲು ಅವಕಾಶ ನೀಡುವಂತಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ, ಟಿಎನ್‌ಎಂಗೆ ನೀಡಿದ ಸಂದರ್ಶನದಲ್ಲಿ, ರಾಜ್ಯದಲ್ಲಿ ನೈತಿಕ ಶಿಕ್ಷಣವನ್ನು ಮರಳಿ ತರುವ ಯೋಜನೆ ಇದೆ ಎಂದು ನಾಗೇಶ್ ಹೇಳಿದ್ದರು, ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತ, ಪಂಚತಂತ್ರ ಇತ್ಯಾದಿ ಕಥೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಭಗವದ್ಗೀತೆಯಲ್ಲಿ ಕೇವಲ ಮಾಹಿತಿ ಇದೆ. ಒಬ್ಬರ ಜೀವನವನ್ನು ಹೇಗೆ ನಡೆಸುವುದು, ಆಚರಣೆಗಳು ಅಥವಾ ಧರ್ಮವಲ್ಲ. ಅರ್ಜುನನ ಮನಸ್ಸಿನ ಗೊಂದಲವನ್ನು ನಿವಾರಿಸಲು ಇದನ್ನು ನಿರೂಪಿಸಲಾಗಿದೆ. ಇಂದು ನಾವೆಲ್ಲರೂ ವಿವಿಧ ರೀತಿಯ ಗೊಂದಲದಲ್ಲಿ ಇದ್ದೇವೆ. ಆದ್ದರಿಂದ ಜನರು ತಮ್ಮ ಆಲೋಚನೆಗಳನ್ನು ರೂಪಿಸಲು, ನೈತಿಕ ಸ್ಪಷ್ಟತೆಯನ್ನು ಪಡೆಯಲು ಭಗವದ್ಗೀತೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಶಾಲಾ ಮಕ್ಕಳನ್ನು ನೈತಿಕವಾಗಿ ತಯಾರಿ ಮಾಡುವ ಚಿಂತನೆ; ಹಾಗಾಗಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲಾಗುತ್ತದೆ: ಸಚಿವ ನಾಗೇಶ್

ಸಂವಿಧಾನದಲ್ಲಿ ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ: ಡಿಕೆ ಶಿವಕುಮಾರ್