ಎಲ್ಲಾ ಬಿಸಿಎಂ ಹಾಸ್ಟೆಲ್​ಗಳಲ್ಲಿಂದು ರಾತ್ರಿ ಭೂರಿ ಭೋಜನ ವ್ಯವಸ್ಥೆಗೆ ಆದೇಶ: ಏನು ಸ್ಪೆಷಲ್ ಗೊತ್ತಾ?

ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳನ್ನು ಪೂರ್ಣವಾಗಿದೆ. ಹೀಗಾಗಿ ಇದೇ ಖುಷಿಗೆ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ಭೂರಿ ಬೋಜನಕ್ಕೆ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಿವರಾಜ್ ತಂಗಡಗಿ ಆದೇಶಿಸಿದ್ದಾರೆ.

ಎಲ್ಲಾ ಬಿಸಿಎಂ ಹಾಸ್ಟೆಲ್​ಗಳಲ್ಲಿಂದು ರಾತ್ರಿ ಭೂರಿ ಭೋಜನ ವ್ಯವಸ್ಥೆಗೆ ಆದೇಶ: ಏನು ಸ್ಪೆಷಲ್ ಗೊತ್ತಾ?
Edited By:

Updated on: Nov 07, 2024 | 4:33 PM

ಬೆಂಗಳೂರು, (ನವೆಂಬರ್ 07): ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಎಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಇಂದು(ನವೆಂಬರ್ 07) ರಾತ್ರಿ ವಿದ್ಯಾರ್ಥಿಗಳಿಗೆ ಭೂರಿ ಬೋಜನ ವ್ಯವಸ್ಥೆ ಮಾಡುವಂತೆ ಆದೇಶಿಸಲಾಗಿದೆ.

ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಸತಿ ನಿಲಯಗಳಲ್ಲಿ ಇಂದು ರಾತ್ರಿ ಊಟಕ್ಕೆ ವಿದ್ಯಾರ್ಥಿಗಳಿಗೆ ಭೂರಿ ಭೋಜನ ಅಂದರೆ ಮೈಸೂರು ಪಾಕ್, ಹೋಳಿಗೆ, ಪಲಾವ್ ಚಪಾತಿ, ಬೀನ್ಸ್ ಪಲ್ಲೆ, ಅನ್ನ, ಮಜ್ಜಿಗೆ, ಬಾಳೆಹಣ್ಣು ನೀಡಲು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಭೂರಿ ಭೋಜನ ನೀಡುವುದರ ಜೊತೆ ಇಲಾಖೆ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಬೇಕು. ಹಾಗೇ ಮಕ್ಕಳ ಜೊತೆ ಊಟ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.