AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಸರದ ಮಡಿಲಲ್ಲಿ ಮಕ್ಕಳ ಶಿಕ್ಷಣ, ಕನ್ನಡ ಉಳಿಸಿ ಹಸಿರು ಬೆಳೆಸುವ ಮಾದರಿ ಶಾಲೆ

ಬೀದರ್: ಆ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯೋ ಜನರೆ ಜಾಸ್ತಿ. ಎಲ್ಲರೂ ಖಾಸಗಿ ಶಾಲೆಗೆ ಮಾರು ಹೋಗಿದ್ದಾರೆ. ಆದ್ರೆ ಆ ಶಾಲೆ ಮಾತ್ರ ನಾವು ಖಾಸಗಿ ಶಾಲೆಗೇನು ಕಮ್ಮಿ ಇಲ್ಲ ಅನ್ನೋ ರೇಂಜ್‌ಗೆ ಬೆಳೆದಿದೆ. ಹಚ್ಚ ಹಸಿರಿನಿಂದಲೇ ಸದ್ದು ಮಾಡುತ್ತಿದೆ. ಬೀದರ್‌ ತಾಲೂಕಿನ ಫತ್ತೆಪುರ ಗ್ರಾಮದಲ್ಲಿ ಒಂದು ಶಾಲೆ ಇದೆ. ಅದು ಎಲ್ಲಾ ಶಾಲೆಗಳಿಗೂ ಮಾದರಿ ಶಾಲೆಯಾಗಿ ಬೆಳೆದಿದೆ. ಇದರ ಸುತ್ತಾ ಹಚ್ಚ ಹಸಿರು ಶಾಲೆಯ ವಾತಾವರಣವನ್ನು ಕಂಗೊಳಿಸುವಂತೆ ಮಾಡಿದೆ. ಈ ಶಾಲೆ ಸರ್ಕಾರಿ ಶಾಲೆ […]

ಪರಿಸರದ ಮಡಿಲಲ್ಲಿ ಮಕ್ಕಳ ಶಿಕ್ಷಣ, ಕನ್ನಡ ಉಳಿಸಿ ಹಸಿರು ಬೆಳೆಸುವ ಮಾದರಿ ಶಾಲೆ
ಸಾಧು ಶ್ರೀನಾಥ್​
|

Updated on:Nov 24, 2019 | 6:43 AM

Share

ಬೀದರ್: ಆ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯೋ ಜನರೆ ಜಾಸ್ತಿ. ಎಲ್ಲರೂ ಖಾಸಗಿ ಶಾಲೆಗೆ ಮಾರು ಹೋಗಿದ್ದಾರೆ. ಆದ್ರೆ ಆ ಶಾಲೆ ಮಾತ್ರ ನಾವು ಖಾಸಗಿ ಶಾಲೆಗೇನು ಕಮ್ಮಿ ಇಲ್ಲ ಅನ್ನೋ ರೇಂಜ್‌ಗೆ ಬೆಳೆದಿದೆ. ಹಚ್ಚ ಹಸಿರಿನಿಂದಲೇ ಸದ್ದು ಮಾಡುತ್ತಿದೆ.

ಬೀದರ್‌ ತಾಲೂಕಿನ ಫತ್ತೆಪುರ ಗ್ರಾಮದಲ್ಲಿ ಒಂದು ಶಾಲೆ ಇದೆ. ಅದು ಎಲ್ಲಾ ಶಾಲೆಗಳಿಗೂ ಮಾದರಿ ಶಾಲೆಯಾಗಿ ಬೆಳೆದಿದೆ. ಇದರ ಸುತ್ತಾ ಹಚ್ಚ ಹಸಿರು ಶಾಲೆಯ ವಾತಾವರಣವನ್ನು ಕಂಗೊಳಿಸುವಂತೆ ಮಾಡಿದೆ. ಈ ಶಾಲೆ ಸರ್ಕಾರಿ ಶಾಲೆ ಖಾಸಗಿ ಸ್ಕೂಲ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.

ಶಾಲೆಯಲ್ಲಿ ಪ್ರಸಕ್ತ 163 ಮಕ್ಕಳು ಓದುತ್ತಿದ್ದು, ಶೇ.100 ಹಾಜರಿ ಇದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ಶಾಲೆ ಹೆಸರು ಮಾಡಿದ್ದು ಹಸಿರಿನಿಂದ. ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಗಿದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದೆ. ಶಾಲೆಯ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದ್ದು, ನಮಗೆ ಶಾಲೆಗೆ ಬಂದರೆ ಖುಷಿಯಾಗುತ್ತೆ ಅಂತಾರೆ ಪುಟಾಣಿ ಮಕ್ಕಳು.

ಇನ್ನು ಶಾಲೆಯಲ್ಲಿ ಸೋಲಾರ ಅಳವಡಿಸಲಾಗಿದ್ದ ವಿದ್ಯುತ್ ಕೈ ಕೊಟ್ಟಾಗ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲಿ ಆಗುವುದಿಲ್ಲ. ಜೊತೆಗೆ ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನ ಈ ಶಾಲೆಯಲ್ಲಿ ಕಲ್ಪಿಸಲಾಗಿದೆ. ಶಾಲಾ ಆವರಣವಂತೂ ಪ್ಪಪ್ಪಾಯಿ, ಮಾವು, ನೇರಳೆ ಹಾಗೂ ಜೌಷಧ ಗಿಡಗಳು ಸೇರಿದಂತೆ ಸುಮಾರು 300 ಗಿಡಮರಗಳಿಂದ ತುಂಬಿ ನಂದನವನದಂತೆ ಕಂಗೊಳಿಸುತ್ತಿದೆ.

Published On - 6:42 am, Sun, 24 November 19

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!