ಈಗ ಸ್ವಚ್ಛ ಬಿಜೆಪಿ ಇಲ್ಲ: ಅವರಿಗೆ ಗೆಲುವು ಬೇಕಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ -ಶ್ರೀರಾಮಸೇನೆ ಮುತಾಲಿಕ್​ ವಾಗ್ದಾಳಿ

Pramod Muthalik: ಗೆಲ್ಲುವವರಿದ್ದರೆ 80 ವರ್ಷದ ಮುದುಕನಿಗೂ ಬಿಜೆಪಿಯವರು ಟಿಕೆಟ್​ ಕೊಡುತ್ತಾರೆ. ಗೆಲ್ಲುವಂತಿದ್ದರೆ ಸೋನಿಯಾ ಗಾಂಧಿಗೂ ಬಿಜೆಪಿ ಟಿಕೆಟ್​ ಕೊಡ್ತಾರೆ. ಬಿಜೆಪಿಯಲ್ಲಿ ಈಗ ಶೇ. 70ರಷ್ಟು ಕಾಂಗ್ರೆಸ್, ಜೆಡಿಎಸ್​ನವರಿದ್ದಾರೆ ಎಂದು ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈಗ ಸ್ವಚ್ಛ ಬಿಜೆಪಿ ಇಲ್ಲ: ಅವರಿಗೆ ಗೆಲುವು ಬೇಕಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ -ಶ್ರೀರಾಮಸೇನೆ ಮುತಾಲಿಕ್​ ವಾಗ್ದಾಳಿ
ಈಗ ಸ್ವಚ್ಛ ಬಿಜೆಪಿ ಇಲ್ಲ: ಅವರಿಗೆ ಗೆಲುವು ಬೇಕಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ -ಶ್ರೀರಾಮಸೇನೆ ಮುತಾಲಿಕ್​ ವಾಗ್ದಾಳಿ
Updated By: ಸಾಧು ಶ್ರೀನಾಥ್​

Updated on: Jul 22, 2022 | 7:15 PM

ಬಾಲಕೋಟೆ: ಬಿಜೆಪಿಯಲ್ಲಿ (BJP) ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುವುದಿಲ್ಲ ಅಂದ್ರು, ದಿವಂಗತ ಸುರೇಶ್ ಅಂಗಡಿ ಪತ್ನಿಗೆ ಉಪ ಚುನಾವಣೆಯಲ್ಲಿ ಟಿಕೆಟ್​ ನೀಡಿದರು. 75 ವರ್ಷ ತುಂಬಿದವರಿಗೆ ಟಿಕೆಟ್​ ನೀಡುವುದಿಲ್ಲ ಎಂದು ಹೇಳಿದ್ದರು. ಪರಿಷತ್​ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿಗೆ ಟಿಕೆಟ್​ ನೀಡಿದರು. ಒಟ್ನಲ್ಲಿ ಬಿಜೆಪಿಯವರಿಗೆ ಗೆಲ್ಲಬೇಕು ಅಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ (Sri Ram Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik)​ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗೆಲ್ಲುವವರಿದ್ದರೆ 80 ವರ್ಷದ ಮುದುಕನಿಗೂ ಬಿಜೆಪಿಯವರು ಟಿಕೆಟ್​ ಕೊಡುತ್ತಾರೆ. ಗೆಲ್ಲುವಂತಿದ್ದರೆ ಸೋನಿಯಾ ಗಾಂಧಿಗೂ ಬಿಜೆಪಿ ಟಿಕೆಟ್​ ಕೊಡ್ತಾರೆ. ಬಿಜೆಪಿಯಲ್ಲಿ ಈಗ ಶೇ. 70ರಷ್ಟು ಕಾಂಗ್ರೆಸ್, ಜೆಡಿಎಸ್​ನವರಿದ್ದಾರೆ. ಕಮ್ಯುನಿಸ್ಟರು ಬಿಜೆಪಿ ಒಳಹೊಕ್ಕಿದ್ದಾರೆ, ಇವರಿಗೆ ಅಧಿಕಾರ ಮುಖ್ಯ. ಈಗ ಸ್ವಚ್ಛ ಬಿಜೆಪಿ ಇಲ್ಲವೆಂದು ಪ್ರಮೋದ್ ಮುತಾಲಿಕ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್​ವೈ ಬಿಜೆಪಿಯನ್ನುಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ:

ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರ ಪ್ರಸ್ತಾಪಿಸಿದ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್​ ಬಿಎಸ್​ವೈ ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ. ಬಿಜೆಪಿ ಅಂದರೆ ಕೇವಲ ಪಟ್ಟಣ, ಬ್ರಾಹ್ಮಣರ ಪಕ್ಷ ಎಂಬಂತಿತ್ತು. ಬಿಜೆಪಿ ಅಂದರೆ ಕೇವಲ ವಿದ್ಯಾವಂತ​ ಜನರಿಗೆ ಮಾತ್ರ ಎಂಬಂತಿತ್ತು. ಬಿಜೆಪಿಯನ್ನು ಸರ್ವವ್ಯಾಪಿಯಾಗಿ ಬೆಳೆಸಿದಂತಹ ವ್ಯಕ್ತಿ ಯಡಿಯೂರಪ್ಪ. ಮಗನ ಸಲುವಾಗಿ BSY ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ ಅನಿಸುತ್ತಿದೆ. ನಾನು ಇದನ್ನು ಬಹಳ ನೋವಿನಿಂದ, ದುಃಖದಿಂದ ಹೇಳುತ್ತಿದ್ದೇನೆ ಎಂದು ಮುತಾಲಿಕ್​ ಹೇಳಿದ್ದಾರೆ.

Published On - 7:03 pm, Fri, 22 July 22