AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಾ ಅಮರೇಶ್ವರ ನಾಯಕ್ ವಿರುದ್ಧ ನಾಲಿಗೆ ಹರಿಬಿಟ್ಟ BJP ಕಾರ್ಯಕರ್ತ; ಚಪ್ಪಲಿಯಲ್ಲಿ ಹೊಡಿತೀವಿ ಎಂದು ಕಿಡಿ

ಅಸಮಾಧಾನಿತ ತಿಪ್ಪರಾಜು ಹವಾಲ್ದಾರ್ ಹಾಗೂ ಬಿವಿ ನಾಯಕ್ ಮನವೊಲಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದು ಬಿಜೆಪಿ ಪ್ರಯತ್ನ ವಿಫಲವಾಗಿದೆ. ಸಭೆಯಲ್ಲಿ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತ ಶಿವ ಶರಣಪ್ಪ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ಚಪ್ಪಲಿಯಲ್ಲಿ ಹೊಡಿತೀವಿ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ರಾಜಾ ಅಮರೇಶ್ವರ ನಾಯಕ್ ವಿರುದ್ಧ ನಾಲಿಗೆ ಹರಿಬಿಟ್ಟ BJP ಕಾರ್ಯಕರ್ತ; ಚಪ್ಪಲಿಯಲ್ಲಿ ಹೊಡಿತೀವಿ ಎಂದು ಕಿಡಿ
ರಾಜಾ ಅಮರೇಶ್ವರ ನಾಯಕ್
TV9 Web
| Edited By: |

Updated on: Mar 30, 2024 | 12:36 PM

Share

ರಾಯಚೂರು, ಮಾರ್ಚ್​.30: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ (Lok Sabha Election) ಸ್ಪರ್ಧಿಸಲು ಬಿಜೆಪಿ ರಾಜಾ ಅಮರೇಶ್ವರ ನಾಯಕ್ (Raja Amareshwara Naik) ಅವರಿಗೆ ಟಿಕೆಟ್ ಘೋಷಿಸಿದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ (Tipparaju Havaldar) ಅವರಿಗೆ ಟಿಕೆಟ್ ತಪ್ಪಿದ್ದು ಅಸಮಾಧಾನಗೊಂಡಿದ್ದಾರೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿ ಬಿವಿ ನಾಯಕ್ (BV Nayak) ಕೂಡ ಬೇಸರಗೊಂಡಿದ್ದಾರೆ. ರಾಯಚೂರಿನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಹೀಗಾಗಿ ಅಸಮಾಧಾನಿತ ತಿಪ್ಪರಾಜು ಹವಾಲ್ದಾರ್ ಹಾಗೂ ಬಿವಿ ನಾಯಕ್ ಮನವೊಲಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದು ಬಿಜೆಪಿ ಪ್ರಯತ್ನ ವಿಫಲವಾಗಿದೆ.

ಸಭೆಯಲ್ಲಿ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಎದುರಲ್ಲೇ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತ ಶಿವ ಶರಣಪ್ಪ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ಚಪ್ಪಲಿಯಲ್ಲಿ ಹೊಡಿತೀವಿ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಉದ್ವೇಗಕ್ಕೊಳಗಾಗಿ ಹಿಂದಿನ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳಿಂದ ಬಿವಿ ನಾಯಕ್ ಸೋತಿದ್ದರು. ಈಗ ಟೆಕೆಟ್ ಕೇಳೋಕೆ ಬಂದಿದ್ದಾರೆ ಅಂತ ಹಾಲಿ ಸಂಸದ ಹೇಳಿದ್ರು. ಇಂದಿರಾ ಗಾಂಧಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ತಿತ್ತು. ಈಗಲೂ ಮೋದಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ಲತ್ತೆ. ಹಾಲಿ ಸಂಸದ ಕಳೆದ ಬಾರಿ ಮೋದಿ ಹೆಸರಿನಲ್ಲಿ ಗೆದ್ದಿದ್ರು. ಈಗ ಹಳ್ಳಿಗಳಿಗೆ ಬರ್ಲಿ ಚಪ್ಪಲೀಲಿ ಹೊಡಿತೀವಿ. ಮೊನ್ನೆ ಕಳ್ಳನ ರೀತಿ ಸಂಸದ ಬಂದು ಹೋಗಿದ್ದಾನೆ ಅಂತ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್; ಸಚಿವರ ಮಕ್ಕಳು, ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಟಿಕೆಟ್

ರಾಯಚೂರು ಬಿಜೆಪಿ ಘಟಕದಲ್ಲಿ ಭಿನ್ನಮತ ಜೋರಾಗಿದೆ. ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ದಕ್ಕುತಿದ್ದಂತೆಯೇ ಬಂಡಾಯ ಭುಗಿಲೆದ್ದಿತ್ತು. ಕಳೆದ ಐದು ವರ್ಷಗಳಲ್ಲಿ ಸಂಸದ ಅಮರೇಶ್ವರ ನಾಯಕ್ ಕ್ಷೇತ್ರದಲ್ಲಿ ಓಡಾಡಿಲ್ಲ, ಕಾರ್ಯಕರ್ತರಿಗೆ ಮನ್ನಣೆ ನೀಡಿಲ್ಲ ಅನ್ನೋ ಆಕ್ರೋಶದ ಮಧ್ಯೆ ಟಿಕೆಟ್ ಕೊಟ್ಟಿದ್ದಕ್ಕೆ ಮಾಜಿ ಸಂಸದ ಬಿವಿ ನಾಯಕ್ ಕೆರಳಿದ್ರು. ಜೊತೆ ಅವರ ಅಭಿಮಾನಿಗಳು ಕೂಡ ಬಂಡಾಯ ಎದ್ದಿದ್ರು. ಇವರ ಸಾಲಿಗೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೂಡ ಎಂಟ್ರಿಯಾಗಿದ್ರು. ಇತ್ತೀಚೆಗೆ ಎಲ್ಲೂ ಬಹಿರಂಗ ಹೇಳಿಕೆ ನೀಡದೇ ಮೌನವಾಗಿಯೇ ಟಿಕೆಟ್ ವಿಚಾರದ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಸಭೆಯಲ್ಲಿ ಕಾರ್ಯಕರ್ತರು ರಾಜ್ಯ ನಾಯಕರ ವಿರುದ್ಧ ಕೆರಳಿದ್ರು. ಜೊತೆಗೆ ತಮ್ಮ ಆಕ್ರೋಶ ಹೊರ ಹಾಕಿ ಕೋಲಾಹಲ ಎಬ್ಬಿಸಿದ್ರು. ಈ ವೇಳೆ ಖುದ್ದು ತಿಪ್ಪರಾಜು ಹವಾಲ್ದಾರ್ ವೇದಿಕೆಯಿಂದ ಕೆಳಗಿಳಿದು ಬಂದು ಸಮಾಧಾನ ವ್ಯಕ್ತಪಡಿಸಿದರು. ಆದ್ರೆ ಅವರಿಗೆ ಕಾರ್ಯಕರ್ತರು ಮಣಿಯದೇ ಕೆಂಡಾಮಂಡಲರಾದ್ರು. ಕೊನೆಗೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬಿಜೆಪಿ ಪರ ಕೆಲಸ ಮಾಡ್ತಿನಿ ಅಂತ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ