AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿಗಣತಿ: ‘ಸಾಮಾನ್ಯ ಬ್ರಾಹ್ಮಣ’ ಆಯ್ಕೆ ಇಲ್ಲದ್ದಕ್ಕೆ ಧಾರವಾಡದಲ್ಲಿ ಆಕ್ಷೇಪ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ 'ಸಾಮಾನ್ಯ ಬ್ರಾಹ್ಮಣ' ಆಯ್ಕೆ ಇಲ್ಲದ್ದಕ್ಕೆ ಆಕ್ಷೇಪ ಕೇಳಿಬಂದಿದೆ. ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನ 'ಸಾಮಾನ್ಯ ಬ್ರಾಹ್ಮಣ' ಎಂದು ನಮೂದಿಸಲಾಗುತ್ತದೆ. ಆದರೆ ಗಣತಿ ವೇಳೆ ಆ ಆಯ್ಕೆ ಯಾಕಿಲ್ಲ ಎಂಬ ಪ್ರಶ್ನೆ ಕೇಳಿಬರತೊಡಗಿದೆ.

ಜಾತಿಗಣತಿ: 'ಸಾಮಾನ್ಯ ಬ್ರಾಹ್ಮಣ' ಆಯ್ಕೆ ಇಲ್ಲದ್ದಕ್ಕೆ ಧಾರವಾಡದಲ್ಲಿ ಆಕ್ಷೇಪ
ಬ್ರಾಹ್ಮಣ ಸಮುದಾಯದ ವಿರೋಧ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Oct 06, 2025 | 5:45 PM

Share

ಧಾರವಾಡ, ಅಕ್ಟೋಬರ್​ 06: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ (Caste census) ಜಾತಿ ಕಾಲಂನಲ್ಲಿ ‘ಸಾಮಾನ್ಯ ಬ್ರಾಹ್ಮಣ’ ಆಯ್ಕೆ ಇಲ್ಲದ ವಿಚಾರವಾಗಿ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಗಣತಿಗೆ ಹೋದವರ ಬಳಿ ಸಮುದಾಯವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಸಿಬ್ಬಂದಿ ಗೊಂದಲಕ್ಕೆ ಬಿದ್ದಿದ್ದಾರೆ. ನಮಗೆ ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದು ಕೆಲವರು ಹೇಳುತ್ತಿದ್ದು, ಆ ತನಕ ಗಣತಿದಾರಿಗೆ ಮಾಹಿತಿ ನೀಡಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಏನಿದು ಗೊಂದಲ?

ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನ ‘ಸಾಮಾನ್ಯ ಬ್ರಾಹ್ಮಣ’ ಎಂದು ನಮೂದಿಸಲಾಗುತ್ತದೆ. ಆದರೆ, ಗಣತಿಯಲ್ಲಿ ಈ ಆಯ್ಕೆಯೇ ಇಲ್ಲ ಅನ್ನೋದು ಬ್ರಾಹ್ಮಣರ ಆಕ್ಷೇಪ. ಗಣತಿಯ ಆ್ಯಪ್ ನಲ್ಲಿ ಎಸ್ಸಿ, ಎಸ್ಟಿ ಮತ್ತು ಇತರೆ ಅನ್ನೋ ಮೂರು ಕಾಲಂಗಳಿವೆ. ಇದರಲ್ಲಿ ‘ಇತರೆ’ ಎನ್ನುವ ಕಾಲಂನಲ್ಲಿ ಬ್ರಾಹ್ಮಣರು ತಮ್ಮ ಹೆಸರನ್ನು ನಮೂದಿಸಬೇಕು. ಉಳಿದ ಜನಾಂಗದವರು ಕೂಡ ಇದರಲ್ಲಿ ಹೆಸರನ್ನು ನಮೂದಿಸಿದರೂ ಅವರಿಗೆ ಅವಶ್ಯಕತೆ ಬಿದ್ದಾಗ ಆಯಾ ಜಾತಿಗೆ ಜಾರಿಯಲ್ಲಿರೋ ಮೀಸಲಾತಿ ಸಿಗುತ್ತೆ. ಅಲ್ಲದೇ ಅವರು ಸಾಮಾನ್ಯ ಕೆಟಗರಿಯಲ್ಲಿಯೂ ಸವಲತ್ತು ಪಡೆಯಬಹುದು. ಒಂದು ವೇಳೆ ಇವತ್ತು ನಾವು ಇತರೆ ಕಾಲಂನಲ್ಲಿ ಬ್ರಾಹ್ಮಣ ಅಂತಾ ನಮೂದಿಸಿದರೆ ನಾಳೆ ‘ಇತರೆ ಬ್ರಾಹ್ಮಣ’ ಅಂತಾ ಪ್ರಮಾಣ ಪತ್ರ ಬಂದರೆ ನಮ್ಮ ಗತಿ ಏನು ಅನ್ನೋದು ಸಮುದಾಯದ ಪ್ರಶ್ನೆ. ಈ ವಿಚಾರವನ್ನು ಧಾರವಾಡ ಜಿಲ್ಲೆಯಲ್ಲಿ ಮೊದಲಿಗೆ ಎತ್ತಿದ್ದು ಹೆಬ್ಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ ಜೋಶಿ.

ಇದನ್ನೂ ಓದಿ:

ಗಣತಿದಾರರು ಬಂದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಜಾತಿ ಕಾಲಂನಲ್ಲಿ ಬ್ರಾಹ್ಮಣ ಇಲ್ಲ, ಬದಲಾಗಿ ಇತರೆ ಎಂಬುದರಲ್ಲಿ ನಮೂದಿಸಬೇಕು ಎಂದಿದ್ದಕ್ಕೆ ಮಹೇಶ ಜೋಶಿ ತಕರಾರು ತಗೆದಿದ್ದಾರೆ. ಬ್ರಾಹ್ಮಣ ಸಮುದಾಯ ‘ಇತರೆ’ ಕಾಲಂನಲ್ಲಿ ಸೇರಿಸೋದಾದರೆ, ಕಂದಾಯ ಇಲಾಖೆಯ ಜಾತಿ ಪ್ರಮಾಣದಲ್ಲಿ ‘ಸಾಮಾನ್ಯ ಬ್ರಾಹ್ಮಣ’ ಎಂದು ಯಾಕೆ ಪ್ರಮಾಣ ಪತ್ರ ಕೊಡಬೇಕಿತ್ತು ಅನ್ನೋದು ಇವರ ಪ್ರಶ್ನೆ. ಅಲ್ಲದೆ ಸಮೀಕ್ಷೆಯಲ್ಲಿ ಈ ರೀತಿ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಅನ್ನೋದು ಮಹೇಶ ಜೋಶಿ ವಾದ.

‘ಬ್ರಾಹ್ಮಣರು ಯಾವತ್ತೂ ಮೀಸಲಾತಿ ಕೇಳಿಲ್ಲ’

ಈ ಬಗ್ಗೆ ಅಧಿಕಾರಿಗಳೊಂದಿಗೆ ವಾದಕ್ಕೆ ಇಳಿದಿರೋ ಮಹೇಶ ಜೋಶಿ, ನಾವು ಬ್ರಾಹ್ಮಣರು ಯಾವತ್ತೂ ಯಾವುದೇ ಕೆಟಗರಿಗೆ ಸೇರಿಸಿ ಅಂದಿಲ್ಲ. ಅಲ್ಲದೇ ನಮಗೆ ಸರಕಾರದ ಯಾವುದೇ ಸೌಲಭ್ಯಗಳೂ ಇಲ್ಲ. ಹಾಗಂತ ನಾವು ಕೇಳುತ್ತಲೂ ಇಲ್ಲ. ಸೌಲಭ್ಯಗಳನ್ನು ಯಾರು ಕೇಳುತ್ತಾರೋ ಅವರನ್ನು ಅವರು ಕೇಳಿದ ಕೆಟಗರಿಗೆ ಸೇರಿಸಿಕೊಳ್ಳಿ, ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ನಮ್ಮನ್ನು ಇತರೆ ಎಂದು ನಮೂದಿಸುತ್ತಿರೋದಕ್ಕೆ ತೀವ್ರ ಬೇಸರ ತಂದಿದೆ ಎಂದಿದ್ದಾರೆ. ಈ ಬಗ್ಗೆ ಮೂರು ದಿನಗಳಿಂದ ಗಣತಿದಾರರನ್ನು ಪ್ರಶ್ನಿಸುತ್ತಲೇ ಇದ್ದರೂ ಇದುವರೆಗೆ ಯಾರೊಬ್ಬರೂ ಸರಿಯಾದ ಉತ್ತರ ನೀಡುತ್ತಿಲ್ಲ. ಅಲ್ಲದೇ ಮೇಲಾಧಿಕಾರಿಗಳನ್ನು ಕೇಳಿದರೆ ಅವರು ಕೂಡ ನಿರುತ್ತರರಾಗಿದ್ದಾರೆ ಅನ್ನೋದು ಅವರ ಆರೋಪ. ಇನ್ನು ಇವರ ಬೇಡಿಕೆಯಂತೆ ನಮೂದಿಸಲು ಆಯ್ಕೆ ಇಲ್ಲದ ಕಾರಣ ಗಣತಿಗೆ ಬಂದಿದ್ದ ಸಿಬ್ಬಂದಿ ರೂಪಾ ಕುಬಸದ್, ಮಹೇಶ ಜೋಶಿ ಅವರಿಗೆ ಪತ್ರವೊಂದನ್ನು ಬರೆದುಕೊಟ್ಟಿದ್ದಾರೆ. ಅದರಲ್ಲಿ ನೀವು ಕೇಳಿದ ರೀತಿಯಲ್ಲಿ ನಮೂದಿಸಲು ಅವಕಾಶವಿಲ್ಲ ಅಂತಾ ತಿಳಿಸಲಾಗಿದೆ.

ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿರುವ ಮಹೇಶ ಜೋಶಿ, ಮುಂದಿನ ದಿನಗಳಲ್ಲಿ ಇದು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸೋ ಸಾಧ್ಯತೆ ಇದೆ. ಹೀಗಾಗಿ ನಾನು ಈಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ. ಇತರರು ಕೂಡ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ನನ್ನ ಬಳಿ ಸಾಮಾನ್ಯ ಬ್ರಾಹ್ಮಣ ಅಂತಾ ತಹಶೀಲ್​ದಾರರು ನೀಡಿರೋ ಪ್ರಮಾಣ ಪತ್ರವಿದೆ. ಈ ಗಣತಿಯಲ್ಲಿ ಇತರೆ ಬ್ರಾಹ್ಮಣ ಅಂತಾ ನಮೂದಿಸಬೇಕು ಎಂದಾದರೆ ಎರಡರಲ್ಲಿ ಯಾವುದು ಸರಿಯಾಗಿದ್ದು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾನು ಬ್ರಾಹ್ಮಣ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಅವರನ್ನು ಸಂಪರ್ಕಿಸಿದ್ದೇನೆ. ಅವರಿಗೂ ಈ ಗೊಂದಲದ ಬಗ್ಗೆ ಅರಿವಿದೆ. ಇದರ ವಿರುದ್ಧ ಶೀಘ್ರ ಪಿಐಎಲ್ ಸಲ್ಲಿಸೋದಾಗಿ ಅವರು ತಿಳಿಸಿದ್ದಾರೆ ಎಂದು ಮಹೇಶ ಜೋಶಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:43 pm, Mon, 6 October 25

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!