ಮೊಬೈಲ್ ವಿಷಯಕ್ಕೆ ಪೋಷಕರೊಟ್ಟಿಗೆ ಜಗಳವಾಡಿದ ಸೋದರರು.. ಮನನೊಂದು ಆತ್ಮಹತ್ಯೆಗೆ ಶರಣು, ಎಲ್ಲಿ?
ಮೊಬೈಲ್ ವಿಷಯವಾಗಿ ಪೋಷಕರೊಂದಿಗೆ ಜಗಳವಾಡಿದ ಸೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರಿನಲ್ಲಿ ನಡೆದಿದೆ. ಸುನಿಲ್(17) ಹಾಗೂ ಶೇಖರ್(12) ಎಂಬ ಸೋದರರಿಬ್ಬರು ಭೂಸನೂರಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊಬೈಲ್ ವಿಷಯಕ್ಕೆ ಪೋಷಕರೊಟ್ಟಿಗೆ ಜಗಳವಾಡಿದ ಸೋದರರು ಮನನೊಂದು ಆತ್ಮಹತ್ಯೆಗೆ ಶರಣು
ಕಲಬುರಗಿ: ಮೊಬೈಲ್ ವಿಷಯವಾಗಿ ಪೋಷಕರೊಂದಿಗೆ ಜಗಳವಾಡಿದ ಸೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರಿನಲ್ಲಿ ನಡೆದಿದೆ. ಸುನಿಲ್(17) ಹಾಗೂ ಶೇಖರ್(12) ಎಂಬ ಸೋದರರಿಬ್ಬರು ಭೂಸನೂರಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ತಂದೆ ತಾಯಿ ಜೊತೆ ಜಗಳವಾಡಿದ್ದ ಸೋದರರು ಬಳಿಕ ಹೊಲದಲ್ಲಿರುವ ಬಾವಿ ಬಳಿ ಬಂದಿದ್ದಾರೆ. ಟೊಂಕಕ್ಕೆ ಕಲ್ಲು ಕಟ್ಟಿಕೊಂಡ ಸೋದರರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಈಜು ಬರುತ್ತಿದ್ದ ಹಿನ್ನಲೆಯಲ್ಲಿ ಟೊಂಕಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ. ಸದ್ಯ, ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
35 ಎಕರೆ ಜಮೀನಿಗಾಗಿ.. ವೃದ್ಧೆಗೆ ಕಲ್ಲಿನಿಂದ ಹೊಡೆದು ಕೊಲೆಗೈದ ಪಾಪಿಗಳು, ಯಾವೂರಲ್ಲಿ?