ವಂಚಕ ಯುವರಾಜ್ ಆಪ್ತ ಗುರುದೇವ್​ ಸಿಸಿಬಿ ವಿಚಾರಣೆಗೆ ಹಾಜರ್​

ಗುರುದೇವ್, ವಂಚಕ ಯುವರಾಜ್​ನ ಆಪ್ತ. ಜೊತೆಗೆ ಅವನ ಹಲವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇವರಿಬ್ಬರು ಸೇರಿಕೊಂಡು ಹಲವು ಮಂದಿಗೆ ವಂಚನೆ ಮಾಡಿದ್ದಾರೆ. ದೆಹಲಿಯ ಹಲವು ನಾಯಕರ ಪರಿಚಯ ಇದೆ ಎಂದು ರಾಜಕೀಯ ವ್ಯಕ್ತಿಗಳ ಹೆಸರು ಬಳಸಿ ಜನರಿಗೆ ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುದೇವ್ ವಿಚಾರಣೆಗೆ ಸಿಸಿಬಿ ಬುಲಾವ್.

ವಂಚಕ ಯುವರಾಜ್ ಆಪ್ತ ಗುರುದೇವ್​ ಸಿಸಿಬಿ ವಿಚಾರಣೆಗೆ ಹಾಜರ್​
ಕೇಂದ್ರ ಅಪರಾಧ ವಿಭಾಗ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 22, 2021 | 12:42 PM

ಬೆಂಗಳೂರು: ಸಿಸಿಬಿ ಕಸ್ಟಡಿಯಲ್ಲಿರುವ ವಂಚಕ ಯುವರಾಜ್ ಆಪ್ತ ಗುರುದೇವ್​ಗೆ ಸಿಸಿಬಿ ತನಿಖೆಗೆ ಕರೆದಿದೆ. ನೋಟಿಸ್ ಹಿನ್ನೆಲೆಯಲ್ಲಿ ಮಡಿವಾಳದ ಇಂಟರಾಗೇಷನ್ ಸೆಲ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಗುರುದೇವ್, ವಂಚಕ ಯುವರಾಜ್​ನ ಆಪ್ತ. ಜೊತೆಗೆ ಅವನ ಹಲವು ವಂಚನೆ ಪ್ರಕರಣದಲ್ಲಿ ಭಾಗಿ ಎನ್ನಲಾಗಿದೆ. ಇವರಿಬ್ಬರೂ ಸೇರಿಕೊಂಡು ಹಲವು ಮಂದಿಗೆ ವಂಚನೆ ಮಾಡಿದ್ದಾರೆ. ದೆಹಲಿಯ ಹಲವು ನಾಯಕರ ಪರಿಚಯ ಇದೆ ಎಂದು ರಾಜಕೀಯ ವ್ಯಕ್ತಿಗಳ ಹೆಸರು ಬಳಸಿ ಜನರಿಗೆ ಮೋಸ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುದೇವ್ ವಿಚಾರಣೆಗೆ ಸಿಸಿಬಿ ಬುಲಾವ್ ಕೊಟ್ಟಿದೆ. ನಿನ್ನೆ ಸಿಸಿಬಿ ಎಸಿಪಿ ಎನ್. ಹನುಮಂತರಾಯ ಅವರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಗುರುದೇವ್ ವಿಚಾರಣೆಗೆ ಹಾಜರಾಗಿದ್ದಾರೆ.

ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us