ಚಾಮರಾಜನಗರದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ

ಮೂಲತಃ ಚಾಮರಾಜನಗರ ನಿವಾಸಿಗಳಾಗಿದ್ದ ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರಾಗಿದ್ದು ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋದವರು ಇಲ್ಲಿಯವರೆಗೂ ಪತ್ತೆಯಾಗಿರಲಿಲ್ಲ. ಇದೀಗ, ಗುಜರಾಜತನ ಬುಜ್​ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇವರ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಚಾಮರಾಜನಗರದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ
ನಾಗರಾಜ್​, ಇರ್ಷಾದ್​
Follow us
| Updated By: ವಿವೇಕ ಬಿರಾದಾರ

Updated on:May 19, 2024 | 1:10 PM

ಚಾಮರಾಜನಗರ, ಮೇ 19: ಒಂದು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಮಾನಸಿಕ ಅಸ್ವಸ್ಥರು (Mentally Ill) ಗುಜರಾತ್​​ನ (Gujarath) ಬುಜ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರಾಗಿದ್ದು, ಮೂಲತಃ ಚಾಮರಾಜನಗರ (Chamarajanagar) ನಿವಾಸಿಗಳಾಗಿದ್ದಾರೆ. ನಾಗರಾಜ ಕುಟುಂಬ ಚಾಮರಾಜನಗರದ ಮೇದಾರ ಬೀದಿಯಲ್ಲಿ ವಾಸವಾಗಿದೆ. ಇನ್ನು ಇರ್ಷದ್​​ ಕುಟುಂಬಸ್ಥರು ನಗರದ ಗುಂಡ್ಲುಪೇಟೆ ಸರ್ಕಲ್​​ ಬಳಿ ಇರುವ ಗಾಳಿಪುರದಲ್ಲಿ ವಾಸವಾಗಿದ್ದಾರೆ.

ಇರ್ಷದ್ ಹಾಗೂ ನಾಗರಾಜ್ ಕುಟುಂಬ ಬಡತನದಿಂದ ಕೂಡಿದ್ದು, ಇವರಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ. ಇನ್ನು ನಾಗರಾಜ ಮತ್ತು ಇರ್ಷದ್​​ ಪ್ರತಿನಿತ್ಯ ಊರಲ್ಲಿ ಸುತ್ತಾಡುತ್ತಾ ಸಾಯಂಕಾಲ ಮನೆ ಕಡೆಗೆ ಮರುಳುತ್ತಿದ್ದರು. ಅಲ್ಲದೆ ಕೆಲವು ಸಲ ಈ ಇಬ್ಬರೂ ಮನೆ ಬಿಟ್ಟು 2-3 ದಿನಗಳ ಕಾಲ ಹೋಗಿದ್ದು ಇದೆ. ಆಗ ಅಪರಚಿತ ವ್ಯಕ್ತಿಗಳನ್ನು ಮನೆಗೆ ತಂದು ಬಿಡುತ್ತಿದ್ದರು. ಅಥವಾ ತಾವೇ ಮನೆಗೆ ಬರುತ್ತಿದ್ದರು.

ಇದನ್ನೂ ಓದಿ: ವಿಜಯಪುರ: ಮೊಬೈಲ್​ ಟವರ್​ ಏರಿದ ಮಾನಸಿಕ ಅಸ್ವಸ್ಥ, ವಿಡಿಯೋ ನೋಡಿ

ಹೀಗೆ, ಕಳೆದ ಒಂದು ತಿಂಗಳ ಹಿಂದೆ ಮನೆಯಿಂದ ಹೊರಗಡೆ ಹೋದ ನಾಗರಾಜ ಮತ್ತಿ ಇರ್ಷದ್​​ 2-3 ದಿನ ಕಳೆದರೂ ಮನೆಗೆ ಮರಳಲಿಲ್ಲ. ಇದರಿಂದ ಆತಂಕಗೊಂಡ ಇವರ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದ್ದರು ಕೂಡ ಪತ್ತೆಯಾಗಿರಲಿಲ್ಲ. ಇದರಿಂದ ಈ ಇಬ್ಬರ ಕುಟುಂಬಸ್ಥರು ಆತಂಕಗೊಂಡಿದ್ದರು.

ಇದೀಗ, ಇಬ್ಬರೂ ಬುಜ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಪೊಲೀಸರು ಇವರನ್ನು ಮಾನವ ಜ್ಯೋತಿ ವಸತಿ ಕೇಂದ್ರದಲ್ಲಿರಿಸಿದ್ದಾರೆ. ಬಳಿಕ ಇವರ ಹಿನ್ನಲೆ ತಿಳಿದುಕೊಂಡು, ಜ್ಯೋತಿ ವಸತಿ ಕೇಂದ್ರದ ಸಿಬ್ಬಂದಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ನಾಗರಾಜ ಮತ್ತು ಇರ್ಷಾದ ಕುಟುಂಬಕ್ಕೆ ತಿಳಿಸಿದ್ದಾರೆ. ಇದರಿಂದ ಸಂತಸಗೊಂಡ ಕುಟುಂಬಸ್ಥರು ನಾಗರಜಾ ಮತ್ತು ಇರ್ಷಾದನನ್ನು ಕರೆದುಕೊಂಡು ಬರಲು ಗುಜರಾತ್​​ಗೆ ತೆರಳಿದ್ದಾರೆ ಎಂದು ಮೂಲಗಳಿಂದ ಟಿವಿ9ಗೆ ಮಾಹಿತಿ ದೊರೆತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Sun, 19 May 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್